More

    ಲಾಯರ್​ ಸೋಗಿನಲ್ಲಿ ಬಂದು ಕೋರ್ಟ್​ ಆವರಣದಲ್ಲೇ ಗುಂಡಿನ ದಾಳಿ: ಗ್ಯಾಂಗ್​ಸ್ಟರ್​ ಸೇರಿ ಮೂವರ ಹತ್ಯೆ

    ನವದೆಹಲಿ: ಲಾಯರ್​ ವೇಷದಲ್ಲಿದ್ದ ಬಂದೂಕುಧಾರಿಗಳು ದೆಹಲಿ ನ್ಯಾಯಾಲಯದಲ್ಲಿ ನಡೆಸಿದ ಗುಂಡಿನ ದಾಳಿಯಿಂದಾಗಿ ಓರ್ವ ಗ್ಯಾಂಗ್​ಸ್ಟರ್​ ಸೇರಿದಂತೆ ಮೂವರು ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.

    ಗ್ಯಾಂಗ್​ಸ್ಟರ್​ ಜೀತೇಂದರ್​ ಗೊಗಿಯನ್ನು ಎದುರಾಳಿ ಗುಂಪಿನವರು ಉತ್ತರ ದೆಹಲಿಯ ರೋಹಿಣಿ ಏರಿಯಾದಲ್ಲಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಆರೋಪಿಗಳು ಲಾಯರ್​ ವೇಷ ಧರಿಸಿ ಕೋರ್ಟ್​ ಆವರಣಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಎದುರಾಳಿ ಗುಂಪಿನ ಇಬ್ಬರು ಸದಸ್ಯರು ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ.

    ಜೀತೇಂದರ್​ ಗೊಗಿ ಓರ್ವ ನಟೋರಿಯಸ್​ ಗ್ಯಾಂಗ್​ಸ್ಟರ್​. ಅನೇಕ ಅಪರಾಧ ಪ್ರಕರಣಗಳು ಆತನ ಮೇಲಿವೆ. ತಿಹಾರ್​ ಜೈಲಿನಲ್ಲಿದ್ದ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ವೇಳೆ ಎದುರಾಳಿ “ಟಿಲ್ಲು ಗ್ಯಾಂಗ್” ಸದಸ್ಯರು ಲಾಯರ್​ ವೇಷದಲ್ಲಿ ಬಂದು ಜೀತೇಂದರ್​ ಗೊಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    ಇದೇ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ್ದು, ಟಿಲ್ಲು ಗ್ಯಾಂಗ್​ನ ಇಬ್ಬರು ಸದಸ್ಯರು ಮೃತರಾಗಿದ್ದಾರೆಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್​ ಆಸ್ತಾನಾ ಮಾಹಿತಿ ನೀಡಿದ್ದಾರೆ. ಪೊಲೀಸರು ಬಹುಬೇಗನೇ ಪ್ರತಿಕ್ರಿಯಿಸಿ ಇಬ್ಬರನ್ನು ಹೊಡೆದುರುಳಿಸಿದರು. ಒಟ್ಟು ಮೂವರು ಸಾವಿಗೀಡಾಗಿದ್ದಾರೆಂದು ಪೊಲೀಸ್​ ಆಯುಕ್ತರು ಹೇಳಿದ್ದಾರೆ.

    ಕೋರ್ಟ್​ ಆವರಣದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನು ಜೀತೇಂದ್ರ ಗೊಗಿ ಗ್ಯಾಂಗ್​ ಮತ್ತು ಟಿಲ್ಲು ಗ್ಯಾಂಗ್​ ನಡುವೆ ಅನೇಕ ವರ್ಷಕ್ಕಿಂತ ಹೆಚ್ಚಿನ ಕಾಲದಿಂದಲೂ ಸಂಘರ್ಷ ನಡೆದುಕೊಂಡು ಬಂದಿದ್ದು, ಇದುವರೆಗೂ ಎರಡು ಗ್ಯಾಂಗ್​ನಿಂದ 25ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.

    ಜೀತೇಂದರ್​ ಗೊಗಿಯನ್ನು ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಬಂಧಿಸಲಾಗಿತ್ತು. ದೆಹಲಿ ಪೊಲೀಸ್​ ಪಾಲಿಗೆ ದೊಡ್ಡ ಮಿಕಾ ಎಂದು ಭಾವಿಸಲಾಗಿತ್ತು. ಆತನನ್ನು ಇಂದು ಕೋರ್ಟ್​ಗೆ ಹಾಜರುಪಡಿಸುವುದನ್ನೇ ಕಾದು ಕುಳಿತಿದ್ದ ಎದುರಾಳಿ ಗ್ಯಾಂಗ್​ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ. (ಏಜೆನ್ಸೀಸ್​)

    PHOTOS| ಹಗಲು-ರಾತ್ರಿ ಪ್ರಯಾಣ, 18 ಪಾರಂಪರಿಕ ತಾಣ, 33 ಸಾವಿರ ಕಿ.ಮೀ: ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ!

    ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ

    ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts