ಚೆನ್ನೈ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಾಲಿವುಡ್ ನಟಿ ಮೀರಾ ಮಿಥುನ್ ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದು, ಚೆನ್ನೈ ಪೊಲೀಸರು ನಟಿ ಸಮನ್ಸ್ ನೀಡಿದ್ದಾರೆ.
ತಮಿಳುನಾಡಿನ ದಲಿತ ಕೇಂದ್ರಿತ ಪಕ್ಷ ವಿದುತಲೈ ಸಿರುತೈಗಲ್ ಕಚ್ಚಿ ನಾಯಕ ವನ್ನಿ ಅರಸ್ ಅವರು ನಟಿ ಮೀರಾ ಮಿಥುನ್ ವಿರುದ್ಧ ದೂರು ದಾಖಲಿಸಿದ್ದಾರೆ. ಅನೇಕ ಮಾಧ್ಯಮಗಳ ವರದಿ ಪ್ರಕಾರ ಮೀರಾ, ಆಗಸ್ಟ್ 7ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ದಲಿತ ಸಮುದಾಯದ ಬಗ್ಗೆ ಮೀರಾ ಕೆಲ ಅವಹೇಳಕಾರಿ ಮಾತುಗಳನ್ನು ಆಡಿದ್ದಾರೆ. ಅಂದಿನಿಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅನೇಕ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.
ಸಿನಿಮಾ ಫಸ್ಟ್ ಲುಕ್ಗೆ ಬಳಸಿಕೊಳ್ಳಲು ನಿರ್ದೇಶಕರೊಬ್ಬರು ನನ್ನ ಫೋಟೋವನ್ನು ಕದ್ದಿದ್ದರು ಎಂದಿರುವ ಮೀರಾ ಇದಾದ ಬಳಿಕ ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ದಲಿತ ಸಮುದಾಯದವರು ಅಪರಾಧ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹೀಗಾಗಿ ಅವರು ಸಮಾಜದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿರುವ ದಲಿತ ಸಮುದಾಯದ ನಿರ್ದೇಶಕರು ಮತ್ತು ಜನರನ್ನು ಹೊರಗಾಕಬೇಕೆಂದು ಹೇಳಿದ್ದಾಳೆ.
Actress Meera Mithun has used very derogatory term against SC/ST people in her video. This shows her caste conceit mindset. She must be arrested soon. @mkstalin #CrushTheCaste pic.twitter.com/LghONRsKPv
— Mission Ambedkar (@MissionAmbedkar) August 7, 2021
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೀರಾಗೆ ಸಮನ್ಸ್ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಮೀರಾ, ನನ್ನ ಸೌಜನ್ಯಯುತವಾಗಿ ಬಂಧಿಸಿ ಎಂದಿದ್ದಾರೆ. ಅಲ್ಲದೆ, ಗಾಂಧಿ ಮತ್ತು ನೆಹರು ಏಕೆ ಜೈಲಿಗೆ ಹೋಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ನನ್ನನ್ನು ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿರುವ ಮೀರಾ, ಬಂಧಿಸುತ್ತಾರೆ ಅಂತಾ ಯಾರಾದರೂ ಭಾವಿಸಿದ್ದರೆ, ಅದು ನಿಮ್ಮ ಕಸನು ಎಂದಿದ್ದಾರೆ.
ನಿನ್ನೆ ಕೆಲವು ಮಾಧ್ಯಮಗಳು ನಟಿಯನ್ನು ಬಂಧಿಸಲಾಗಿದೆ ಎಂದು ವರದಿ ಮಾಡಿದ್ದವು. ಆದರೆ, ಮೀರಾಳನ್ನು ಇನ್ನೂ ಬಂಧಿಸಿಲ್ಲ. ಬದಲಾಗಿ ಸಮನ್ಸ್ ನೀಡಲಾಗಿದೆ. ಯಾವುದೇ ಉತ್ತರ ಬರದಿದ್ದರೆ ಅಥವಾ ವಿಚಾರಣೆ ಹಾಜರಾಗದಿದ್ದರೆ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಇದೀಗ ನಟಿಯ ಮೇಲೆ ಭಾರತೀಯ ದಂಡ ಸಂಹಿತೆಯ 153, 153ಎ (1) (ಎ), 505 (1) (ಬಿ), 505 (2) ಸೆಕ್ಷನ್ ಸೇರಿದಂತೆ SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯ ಅನೇಕ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿನಿಮಾ ವಿಚಾರಕ್ಕೆ ಬರುವುದಾರೆ, ಮೀರಾ ಕೆಲ ತಮಿಳು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್ಬಾಸ್ 3ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ವಿಜಯ್ ಹಾಗೂ ಸೂರ್ಯ ಸೇರಿದಂತೆ ಅನೇಕ ನಟರ ವಿರುದ್ಧವೂ ನಾಲಿಗೆ ಹರಿಬಿಡುವ ಮೂಲಕ ಹಿಂದೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಏಜೆನ್ಸೀಸ್)
ರಾಧಿಕಾ ಆಪ್ಟೆಯನ್ನು ಬಹಿಷ್ಕರಿಸಿ: ಹಣಕ್ಕಾಗಿ ಬೆತ್ತಲಾಗುವವರ ಸಿನಿಮಾ ನೋಡ್ಬೇಡಿ ಅಂದ್ರು ನೆಟ್ಟಿಗರು!
ಬಿಗ್ ಬಿ ಕುಟುಂಬಕ್ಕೂ ಎದುರಾಯ್ತಾ ಆರ್ಥಿಕ ಸಂಕಷ್ಟ? ಐಷಾರಾಮಿ ಬಂಗಲೆ ಮಾರಿದ ಅಭಿಷೇಕ್ ಬಚ್ಚನ್!
ತನಗಿಂತ 10 ವರ್ಷ ಚಿಕ್ಕವನನ್ನು ಮದುವೆ ಆಗಲು ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದ ಮಹಿಳೆ..!