ಚೆನ್ನೈ: ಕಳೆದ ಎರಡು ದಿನಗಳಿಂದ ಲೇಡಿ ಸೂಪರ್ಸ್ಟಾರ್ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದ್ದಾರೆ. ಅದಕ್ಕೆ ಕಾರಣ ಏನು ಅಂತಾ ನಿಮಗೆ ತಿಳಿದಿರಬಹುದು. ಆದರೂ ನಾವೂ ಒಮ್ಮೆ ಹೇಳಿಬಿಡುತ್ತೇವೆ. ಜೂನ್ 9ರಂದು ನಯನಾ ತಮ್ಮ ಬಹುಕಾಲದ ಗೆಳೆಯಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವಾನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾಬಲಿಪುರಂನ ರೆಸಾರ್ಟ್ ಒಂದರಲ್ಲಿ ಶಾಸ್ತ್ರೋಕ್ತವಾಗಿ ನಡೆದ ಮದುವೆಯಲ್ಲಿ ಕುಟುಂಬದ ಸದಸ್ಯರು ಮತ್ತು ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದರು.
ಇದೀಗ ನಯನಾ-ವಿಘ್ನೇಶ್ ಮದುವೆ ಕುರಿತು ಇಂಟೆರೆಸ್ಟಿಂಗ್ ಸಂಗತಿಯೊಂದು ಬಯಲಿಗೆ ಬಂದಿದೆ. ಅದೇನಪ್ಪಾ ಅಂದರೆ, ಒಂದೇ ಒಂದು ರೂಪಾಯಿ ಖರ್ಚು ಮಾಡದೇ ನಯನಾ ಅದ್ಧೂರಿ ವಿವಾಹವಾಗಿದ್ದಾರೆ. ಹೌದಾ.. ಅದು ಹೇಗೆ ಸಾಧ್ಯ? ಸಾಮಾನ್ಯ ಜನರು ಮದುವೆ ಮಾಡಲು ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ, ಅಂತಹುದರಲ್ಲಿ ಸ್ಟಾರ್ ಕಲಾವಿದೆ ಮದುವೆ ಕೋಟಿ ಕೋಟಿ ರೂಪಾಯಿ ಖರ್ಚಾಗಿರಬೇಕಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಮುಂದಿದೆ.
ಮೂಲಗಳ ಪ್ರಕಾರ ನಯನಾ ತಮ್ಮ ಮದುವೆ ಹಣ ಖರ್ಚು ಮಾಡಿಲ್ಲ ಎನ್ನಲಾಗುತ್ತಿದೆ. ವಿಘ್ನೇಶ್ ಮತ್ತು ಅವರ ಕುಟುಂಬಕ್ಕೆ ಉಡುಗೊರೆ ಬಿಟ್ಟರೆ, ಮದುವೆಗೆ ಅಂತಾ ಒಂದು ನಯಾ ಪೈಸೆ ಖರ್ಚು ಮಾಡಿಲ್ಲ. ಬದಲಾಗಿ ಮದುವೆಯಿಂದ ಹಣ ಸಂಪಾದನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ನಿಜಕ್ಕೂ ಅಚ್ಚರಿಯನ್ನು ಉಂಟುಮಾಡಿದೆ.
ನಯನಾತಾರಾ ಅವರ ಅದ್ಧೂರಿ ಮದುವೆ ಸಮಾರಂಭದ ವಿಡಿಯೋವನ್ನು ಪ್ರಸಾರ ಮಾಡುವ ಹಕ್ಕನ್ನು ದೈತ್ಯ ಕಂಪನಿ ನೆಟ್ಫ್ಲಿಕ್ಸ್ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಅದ್ಧೂರಿ ಮದುವೆಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿರುವುದಲ್ಲದೆ, ವಿಡಿಯೋ ಪ್ರಸಾರ ಮಾಡಲು ಸಂಭಾವನೆ ಸಹ ನೀಡಿದೆ ಎಂಬ ಮಾಹಿತಿ ಇದೆ. ಹೀಗಾಗಿ ವಿಘ್ನೇಶ್ ಮತ್ತು ನಯನಾತಾರಾ ಮದುವೆ ಒಂದು ರೂಪಾಯಿ ಖರ್ಚು ಮಾಡಿಲ್ಲ ಎನ್ನಲಾಗುತ್ತಿದೆ. ಎಲ್ಲ ಖರ್ಚನ್ನು ನೋಡಿಕೊಂಡಿರುವ ನೆಟ್ಫ್ಲಿಕ್ಸ್ ವಿಡಿಯೋ ಹಕ್ಕು ಪಡೆಯಲು 25 ಕೋಟಿ ರೂಪಾಯಿ ಹಣವನ್ನು ನೀಡಿದೆ ಎನ್ನಲಾಗುತ್ತಿದೆ.
ಮದುವೆಗೆ ಬಂದಿದ್ದ ಅತಿಥಿಗಳು ಉಳಿದುಕೊಳ್ಳಲು ನಯನತಾರಾ ಅವರು ಮಹಾಬಲಿಪುರಂನ ಫೈವ್ ಸ್ಟಾರ್ ಹೋಟೆಲ್ನಲ್ಲಿರುವ ಎಲ್ಲ ರೂಮ್ಗಳನ್ನು ಬುಕ್ ಮಾಡಿದ್ದರು. ಮದುವೆ ಸಮಾರಂಭಕ್ಕಾಗಿ ಬಂಗಾಳಕೊಲ್ಲಿಯಲ್ಲಿ ತೀರದಲ್ಲಿ ಬೃಹತ್ ಗಾಜಿನ ಅರಮನೆಯನ್ನು ನಿರ್ಮಿಸಲಾಗಿತ್ತು. ಅತಿಥಿಗಳಿಗೆ ವ್ಯವಸ್ಥೆ ಮಾಡಿದ್ದ ಪ್ರತಿ ಒಂದು ಊಟಕ್ಕೆ 3500 ರೂ. ವೆಚ್ಚವಾಗಿದೆ. ದುಬಾರಿ ಮೇಕಪ್ ಆರ್ಟಿಸ್ಟ್ ಮತ್ತು ಸೆಕ್ಯುರಿಟಿ ಗಾರ್ಡ್ಸ್ಗಳನ್ನು ಮುಂಬೈನಿಂದ ಕರೆಸಿಕೊಳ್ಳಲಾಗಿತ್ತು.
ಈ ಮೇಲಿನ ಎಲ್ಲದಕ್ಕೂ ನೆಟ್ಫ್ಲಿಕ್ಸ್ ಸಂಸ್ಥೆ ಖರ್ಚ ಮಾಡಿದೆ ಎನ್ನಲಾಗಿದೆ. ಸದ್ಯ ಈ ನ್ಯೂಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟೈಲಿಶ್ ನಿರ್ದೇಶಕ ಗೌತಮ್ ಮೆನನ್ ಅವರು ವಿಘ್ನೇಶ್ ಮತ್ತು ನಯನಾ ಮದುವೆಯ ಸಂಚಿಕೆಯನ್ನು ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ. ಬಹುಶಃ ಮೊದಲ ಬಾರಿಗೆ ಭಾರತೀಯ ಸೆಲೆಬ್ರಿಟಿ ಜೋಡಿಯ ವಿವಾಹ ಮಹೋತ್ಸವ OTT ನಲ್ಲಿ ಪದಾರ್ಪಣೆಯಾಗಬಹುದು ಎಂದು ಹೇಳಲಾಗಿದೆ. (ಏಜೆನ್ಸೀಸ್)
ಪ್ರತಿನಿತ್ಯ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ತಿನ್ನುವ ಇಬ್ಬರು ಹೆಂಡಿರ ಗಂಡನ ಕಣ್ಣೀರ ಕತೆಯಿದು!
ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್ ಶಾಕ್: ಇನ್ನೊಂದು ಮಿಸ್ಟೇಕ್ CCTVಯಲ್ಲಿ ಸೆರೆ
VIDEO: ಮೈಸೂರಿನ ಬಾಯ್ಫ್ರೆಂಡ್ ಜತೆ ಪೊಲೀಸ್ ಠಾಣೆಗೆ ಹೋಗಿ ಗಳಗಳನೆ ಅತ್ತ ರಾಖಿ ಸಾವಂತ್!