More

    ಮರಕ್ಕೆ ಡಿಕ್ಕಿ ಹೊಡೆದ ಕಾರು: ಮದುವೆಗೆ ಹೊರಟ್ಟಿದ್ದ ಮೂವರು ಮಹಿಳೆಯರ ದಾರುಣ ಸಾವು

    ಚಿತ್ರದುರ್ಗ: ಮದುವೆಗೆ ಹೊರಟ್ಟಿದ್ದ ಮೂವರು ಮಹಿಳೆಯರು ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಹಿರಿಯೂರು ತಾಲೂಕಿನ ಬೀರೇನಹಳ್ಳಿ ಗ್ರಾಮದ ಬಳಿ ಮಂಗಳವಾರ (ಫೆ.8) ಬೆಳಗ್ಗೆ ನಡೆದಿದೆ.

    ಮೃತರನ್ನು ಸುಧಿಕ್ಷಾ (17), ರೇಣುಕಾದೇವಿ (39) ಮತ್ತು ವಿಶಾಲಾಕ್ಷಿ (70) ಎಂದು ಗುರುತಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.

    13 ವರ್ಷದ ಪ್ರತೀಕ್ಷಾಗೆ ಗಂಭೀರ ಗಾಯವಾಗಿದ್ದು, ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿಕರ ಮದುವೆ ಹಿನ್ನೆಲೆಯಲ್ಲಿ ಭದ್ರಾವತಿಯಿಂದ ಬೆಂಗಳೂರಿಗೆ ಹೊರಟಿದ್ದಾಗ ಮಾರ್ಗ ಮಧ್ಯೆ ದುರ್ಘಟನೆ ಸಂಭವಿಸಿದೆ.

    ಮೃತರೆಲ್ಲರು ಒಂದೇ ಕುಟುಂಬದವರು ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ನಡೆದ ಮೂರನೇ ಕಾರು ಅಪಘಾತ ಇದಾಗಿದೆ. ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿ ನಡೆದ ಮೂರು ಅಪಘಾತದಲ್ಲಿ ಒಟ್ಟು ‌9 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕೋವಿಡ್​ ಟೈಂನಲ್ಲಿ ಪ್ರಾಣ ಪಣಕ್ಕಿಟ್ಟು ಕೆಲ್ಸ ಮಾಡಿದ ಪೈಲಟ್​ಗೆ 85 ಕೋಟಿ ದಂಡ! ಸರ್ಕಾರ ಕೊಟ್ಟ ಕಾರಣವಿದು

    ರಾಜ್ಯದ ಮೊದಲ ಮಹಿಳಾ ಕನ್ನಡ ಶಾಲೆ ನೆಲಸಮ: ರಾತ್ರೋರಾತ್ರಿ ಕಟ್ಟಡ ಧ್ವಂಸಗೊಳಿಸಿದ ಸರ್ಕಾರ

    ಫ್ರೀ ಇದ್ದಾಗ ಕರೆ ಮಾಡಲು ಹೇಳಿ ನಟಿಗೆ ಫೋನ್​ ನಂಬರ್​ ಕೊಟ್ಟ ನೆಟ್ಟಿಗನಿಗೆ ಕಾದಿತ್ತು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts