ಹೈದರಾಬಾದ್: ಭಾರತೀಯ ಸಿನಿ ರಂಗದ ಬಾಕ್ಸ್ ಆಫೀಸ್ನಲ್ಲಿ ಕೆಜಿಎಫ್ ಚಾಪ್ಟರ್ 2 ಮಾಡಿದ ಮೋಡಿಗೆ ಎಲ್ಲ ಸ್ಟಾರ್ಗಳು ಚಕಿತಗೊಂಡಿದ್ದಾರೆ. ಆದರೂ ರಾಜಮೌಳಿ ಸಿನಿಮಾವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಎಲ್ಲರು ನಂಬಿದ್ದರು. ಆದರೆ, ಉತ್ತರ ಭಾರತದ ಬಾಕ್ಸ್ ಆಫೀಸ್ನಲ್ಲಿ ಕೆಜಿಎಫ್-2 ಎಲ್ಲರನ್ನು ಹಿಂದಿಕ್ಕಿದ್ದು, ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಇದೀಗ ಅಲ್ಲು ಅರ್ಜುನ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಭವಿಷ್ಯದ ಯೋಜನೆಯನ್ನು ಅಲ್ಲು ಅರ್ಜುನ್ ಬದಲಾಯಿಸಿದ್ದಾರೆ ಎಂಬ ಮಾತು ಟಾಲಿವುಡ್ ಗಲ್ಲಿಯೊಳಗೆ ಕೇಳಿಬರುತ್ತಿದೆ.
ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಎಲ್ಲರ ದೃಷ್ಟಿ ಇದೀಗ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಮೇಲೆ ಬಿದ್ದಿದೆ. ಪುಷ್ಪ – 1 ಚಿತ್ರ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ. ಮಾಡುವ ಮೂಲಕ ಯಶಸ್ಸು ಗಳಿಸಿದೆ. ಇದೀಗ ಪುಷ್ಪ-2 ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ತಿಂಗಳು ಚಿತ್ರತಂಡ ಶೂಟಿಂಗ್ ಆರಂಭಿಸಲಿದ್ದು, ಕೇವಲ ಪುಷ್ಪ 2 ಚಿತ್ರದ ಮೇಲೆ ಮಾತ್ರ ಸಂಪೂರ್ಣ ಗಮನ ಹರಿಸಲು ಅಲ್ಲು ಅರ್ಜುನ್ ನಿರ್ಧಾರ ಮಾಡಿದ್ದಾರೆ.
ಕೆಜಿಎಫ್ 2ನಲ್ಲಿ ವರ್ಕೌಟ್ ಆದ ಸೆಂಟಿಮೆಂಟ್ ದೃಶ್ಯವನ್ನು ಪುಷ್ಪ 2 ನಲ್ಲಿ ಯಾವ ರೀತಿ ವೃದ್ಧಿಸಬೇಕು ಎಂಬುದನ್ನು ಚಿತ್ರತಂಡ ಪ್ಲಾನ್ ಮಾಡುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಅವರಿಗೆ ಅಲ್ಲು ಅರ್ಜುನ್ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ. ಸುಕುಮಾರ್ ಜತೆಗೆ ಅಲ್ಲು ಅರ್ಜುನ್ ಕೂಡ ಸ್ಕ್ರೀಪ್ಟ್ ಹಾಗೂ ವಿಸುವಲೈಸೆನ್ ಕೆಲಸದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಿನಿಮಾಗೆ ಯಾವ ರೀತಿ ಹೈಪ್ ಕ್ರಿಯೆಟ್ ಮಾಡಬೇಕೋ ಅಷ್ಟೆಲ್ಲ ತಂತ್ರಗಳನ್ನು ಎಣೆಯಲು ಚಿತ್ರತಂಡ ತುಂಬಾ ಕೆಲಸ ಮಾಡುತ್ತಿದ್ದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲು ಅರ್ಜುನ್ ಇತರೆ ಸಿನಿಮಾಗಳ ಕಡೆಗೆ ಗಮನ ಹರಿಸದೇ ಸಂಪೂರ್ಣ ಪುಷ್ಪ 2 ಕಡೆಗೆ ಗಮನ ಹರಿಸಿದ್ದಾರೆ. ತಮ್ಮ ಭವಿಷ್ಯದ ಪ್ಲಾನ್ಗಳನ್ನು ಬದಲಾಯಿಸಿದ್ದು, ಸಂಪೂರ್ಣ ಒಂದೇ ಕಡೆ ಕೇಂದ್ರಕೃತಗೊಳಿಸಿದ್ದಾರೆ. ನಿರ್ದೇಶಕರಾದ ಕೊರಟಾಳ ಶಿವ ಮತ್ತು ಬೋಯಪಟಿ ಶ್ರೀನು ಜನತೆಗಿನ ಸಿನಿಮಾಗಳನ್ನು ಸದ್ಯಕ್ಕೆ ಅಲ್ಲು ಅರ್ಜುನ್ ತಡೆಹಿಡಿದಿದ್ದಾರೆ. (ಏಜೆನ್ಸೀಸ್)
ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಹೀಗಿದೆ… ಕೆಜಿಎಫ್-2 ಎಷ್ಟನೇ ಸ್ಥಾನದಲ್ಲಿದೆ?
ಕೆಜಿಎಫ್-2 ಸಿನಿಮಾ ನೋಡುವಾಗ ಥಿಯೇಟರ್ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್
ರಾಧೆ ಶ್ಯಾಮ್ ಚಿತ್ರ ಫೇಲ್ ಆಗಿದ್ದೇಕೆ? ಪ್ರಭಾಸ್ ಒಪ್ಪಿಕೊಂಡ ಕಹಿ ಸತ್ಯ ಇಲ್ಲಿದೆ…
ಬಿಜೆಪಿ ಸೇರುವ ಕುರಿತು ವಿಚಾರ ಮಾಡುತ್ತೇನೆ ಎಂದಿದ್ದರಲ್ಲಿ ತಪ್ಪೇನಿದೆ?: ಬಸವರಾಜ ಹೊರಟ್ಟಿ