More

    ಅಲ್ಲು ಅರ್ಜುನ್​ ಭವಿಷ್ಯದ ಯೋಜನೆಯನ್ನೇ ಬದಲಿಸಿದ ಕೆಜಿಎಫ್-2 ಗೆಲುವು! ಬನ್ನಿ ಪ್ಲಾನ್​ ಕೇಳಿದ್ರೆ ಫ್ಯಾನ್ಸ್​ ಥ್ರಿಲ್​

    ಹೈದರಾಬಾದ್​: ಭಾರತೀಯ ಸಿನಿ ರಂಗದ ಬಾಕ್ಸ್​ ಆಫೀಸ್​ನಲ್ಲಿ ಕೆಜಿಎಫ್​ ಚಾಪ್ಟರ್​ 2 ಮಾಡಿದ ಮೋಡಿಗೆ ಎಲ್ಲ ಸ್ಟಾರ್​ಗಳು ಚಕಿತಗೊಂಡಿದ್ದಾರೆ. ಆದರೂ ರಾಜಮೌಳಿ ಸಿನಿಮಾವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಎಲ್ಲರು ನಂಬಿದ್ದರು. ಆದರೆ, ಉತ್ತರ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಕೆಜಿಎಫ್​-2 ಎಲ್ಲರನ್ನು ಹಿಂದಿಕ್ಕಿದ್ದು, ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದೆ. ಇದೀಗ ಅಲ್ಲು ಅರ್ಜುನ್​ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಭವಿಷ್ಯದ ಯೋಜನೆಯನ್ನು ಅಲ್ಲು ಅರ್ಜುನ್​ ಬದಲಾಯಿಸಿದ್ದಾರೆ ಎಂಬ ಮಾತು ಟಾಲಿವುಡ್​ ಗಲ್ಲಿಯೊಳಗೆ ಕೇಳಿಬರುತ್ತಿದೆ.

    ಕೆಜಿಎಫ್​ ಚಾಪ್ಟರ್​ 2 ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಎಲ್ಲರ ದೃಷ್ಟಿ ಇದೀಗ ಅಲ್ಲು ಅರ್ಜುನ್​ ನಟನೆಯ ಪುಷ್ಪ-2 ಮೇಲೆ ಬಿದ್ದಿದೆ. ಪುಷ್ಪ – 1 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ರೂ. ಮಾಡುವ ಮೂಲಕ ಯಶಸ್ಸು ಗಳಿಸಿದೆ. ಇದೀಗ ಪುಷ್ಪ-2 ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ತಿಂಗಳು ಚಿತ್ರತಂಡ ಶೂಟಿಂಗ್​ ಆರಂಭಿಸಲಿದ್ದು, ಕೇವಲ ಪುಷ್ಪ 2 ಚಿತ್ರದ ಮೇಲೆ ಮಾತ್ರ ಸಂಪೂರ್ಣ ಗಮನ ಹರಿಸಲು ಅಲ್ಲು ಅರ್ಜುನ್​ ನಿರ್ಧಾರ ಮಾಡಿದ್ದಾರೆ.

    ಕೆಜಿಎಫ್​ 2ನಲ್ಲಿ ವರ್ಕೌಟ್​ ಆದ ಸೆಂಟಿಮೆಂಟ್​ ದೃಶ್ಯವನ್ನು ಪುಷ್ಪ 2 ನಲ್ಲಿ ಯಾವ ರೀತಿ ವೃದ್ಧಿಸಬೇಕು ಎಂಬುದನ್ನು ಚಿತ್ರತಂಡ ಪ್ಲಾನ್​ ಮಾಡುತ್ತಿದ್ದಾರೆ. ನಿರ್ದೇಶಕ ಸುಕುಮಾರ್​ ಅವರಿಗೆ ಅಲ್ಲು ಅರ್ಜುನ್​ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ. ಸುಕುಮಾರ್​ ಜತೆಗೆ ಅಲ್ಲು ಅರ್ಜುನ್​ ಕೂಡ ಸ್ಕ್ರೀಪ್ಟ್​ ಹಾಗೂ ವಿಸುವಲೈಸೆನ್​ ಕೆಲಸದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಿನಿಮಾಗೆ ಯಾವ ರೀತಿ ಹೈಪ್​ ಕ್ರಿಯೆಟ್​ ಮಾಡಬೇಕೋ ಅಷ್ಟೆಲ್ಲ ತಂತ್ರಗಳನ್ನು ಎಣೆಯಲು ಚಿತ್ರತಂಡ ತುಂಬಾ ಕೆಲಸ ಮಾಡುತ್ತಿದ್ದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಅಲ್ಲು ಅರ್ಜುನ್​ ಇತರೆ ಸಿನಿಮಾಗಳ ಕಡೆಗೆ ಗಮನ ಹರಿಸದೇ ಸಂಪೂರ್ಣ ಪುಷ್ಪ 2 ಕಡೆಗೆ ಗಮನ ಹರಿಸಿದ್ದಾರೆ. ತಮ್ಮ ಭವಿಷ್ಯದ ಪ್ಲಾನ್​ಗಳನ್ನು ಬದಲಾಯಿಸಿದ್ದು, ಸಂಪೂರ್ಣ ಒಂದೇ ಕಡೆ ಕೇಂದ್ರಕೃತಗೊಳಿಸಿದ್ದಾರೆ. ನಿರ್ದೇಶಕರಾದ ಕೊರಟಾಳ ಶಿವ ಮತ್ತು ಬೋಯಪಟಿ ಶ್ರೀನು ಜನತೆಗಿನ ಸಿನಿಮಾಗಳನ್ನು ಸದ್ಯಕ್ಕೆ ಅಲ್ಲು ಅರ್ಜುನ್​ ತಡೆಹಿಡಿದಿದ್ದಾರೆ. (ಏಜೆನ್ಸೀಸ್​)

    ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಹೀಗಿದೆ… ಕೆಜಿಎಫ್​-2 ಎಷ್ಟನೇ ಸ್ಥಾನದಲ್ಲಿದೆ?

    ಕೆಜಿಎಫ್-2 ಸಿನಿಮಾ ನೋಡುವಾಗ ಥಿಯೇಟರ್​ನಲ್ಲೇ ಗುಂಡಿನ ದಾಳಿ: ಯುವಕನ ಸ್ಥಿತಿ ಗಂಭೀರ, ಟಾಕೀಸ್ ಬಂದ್​

    ರಾಧೆ ಶ್ಯಾಮ್ ಚಿತ್ರ ಫೇಲ್​ ಆಗಿದ್ದೇಕೆ? ಪ್ರಭಾಸ್ ಒಪ್ಪಿಕೊಂಡ ಕಹಿ ಸತ್ಯ ಇಲ್ಲಿದೆ… ​

    ಬಿಜೆಪಿ ಸೇರುವ ಕುರಿತು ವಿಚಾರ ಮಾಡುತ್ತೇನೆ ಎಂದಿದ್ದರಲ್ಲಿ ತಪ್ಪೇನಿದೆ?: ಬಸವರಾಜ ಹೊರಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts