ಬೆಂಗಳೂರು: ಕರೊನಾ ಲಾಕ್ಡೌನ್ನಿಂದಾಗಿ ಬಿಗ್ಬಾಸ್ 8ನೇ ಆವೃತ್ತಿಯು 75 ದಿನಗಳಿಗೆ ಮೊಟಕುಗೊಂಡಿತ್ತು. ಮತ್ತೆ ಶೋ ಮರು ಪ್ರಸಾರ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆಯೇ ಎರಡನೇ ಇನ್ನಿಂಗ್ಸ್ ಶುರುವಾಗಲಿದೆ ಎಂಬ ಮಾತು ಬಿಗ್ಬಾಸ್ ಅಭಿಮಾನಿಗಳಿಗೆ ಖುಷಿ ನೀಡಿತು. ಅದರಂತೆಯೇ ಬುಧವಾರ (ಜೂನ್ 23) ಸಂಜೆಯಿಂದಲೇ ಬಿಗ್ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗಿದ್ದು, ಸ್ಪರ್ಧಿಗಳು ಮತ್ತೊಮ್ಮೆ ಮನೆ ಸೇರಿಕೊಂಡಿದ್ದಾರೆ. ರದ್ದಾದ ಶೋ ಒಂದು ಮರು ಪ್ರಸಾರ ಆಗುತ್ತಿರುವುದು ಇಂಡಿಯನ್ ಟೆಲಿವಿಷನ್ ಇತಿಹಾಸದಲ್ಲಿ ಇದೇ ಮೊದಲು.
ಬಿಬಿಕೆ-8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಹಾಗೂ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಜೋಡಿ ಭಾರಿ ಸದ್ದು ಮಾಡಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿಯೂ ದಿವ್ಯಾ ಯು ಮತ್ತು ಅರವಿಂದ್ ನಮ್ಮ ಬಾಂದವ್ಯವನ್ನು ಹಾಗೇ ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡದ್ದು ಬೇರೆ ತಿರುವ ಪಡೆದುಕೊಳ್ಳಲಿದೆ.
ಪೈಲಟ್ ಎಪಿಸೋಡ್ನಲ್ಲಿ ಮಾತನಾಡಿದ ದಿವ್ಯಾ ಮತ್ತು ಮಂಜು, ಎರಡನೇ ಇನ್ನಿಂಗ್ಸ್ನಲ್ಲಿ ವೈಯಕ್ತಿಕವಾಗಿ ಆಟವಾಡುತ್ತೇವೆ ಎಂದು ಹೇಳಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ನಿಮ್ಮ ಯಾವ ತಪ್ಪನ್ನು ಸರಿ ಮಾಡಿಕೊಳ್ಳಲು ಬಯಸಿದ್ದೀರಿ ಎಂದು ನಿರೂಪಕ ಸುದೀಪ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿವ್ಯಾ ಸುರೇಶ್, ಮೊದಲನೇ ಇನ್ನಿಂಗ್ಸ್ನಲ್ಲಿ ಹೆಚ್ಚು ಒಬ್ಬ ವ್ಯಕ್ತಿಯ ಮೇಲೆ ಗಮನ ಕೇಂದ್ರೀಕರಿಸಿದೆ. ಈ ಬಾರಿ ಅದನ್ನು ಬದಲಾಯಿಸಿಕೊಳ್ಳುತ್ತೇನೆ. ನನ್ನ ವೈಯಕ್ತಿಕ ಆಟವನ್ನು ಆಡುತ್ತೇನೆ. ಈ ಅವಕಾಶವನ್ನು ಬಳಸಿಕೊಂಡು ಎಲ್ಲರ ಜತೆಯಲ್ಲೂ ಬೆರೆಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲಿಗೆ ದಿವ್ಯಾ ಹೇಳಿದಂತೆ ಎರಡನೇ ಇನ್ನಿಂಗ್ಸ್ನಲ್ಲಿ ಇಬ್ಬರ ನಡುವೆ ಕೊಂಚ ಅಂತರ ಇರಲಿದೆ. ದಿವ್ಯಾ ತಮ್ಮ ಗೇಮ್ ಪ್ಲಾನ್ ಚೇಂಜ್ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬಹುತೇಕ ಎಲ್ಲ ಸ್ಪರ್ಧಿಗಳು ಗೇಮ್ ಪ್ಲಾನ್ ಕೂಡ ಇದೇ ಆಗಿರಬಹುದು. ಲಾಕ್ಡೌನ್ನಿಂದ ಮನೆಯಲ್ಲಿದ್ದ ಸ್ಪರ್ಧಿಗಳು ಎರಡನೇ ಇನ್ನಿಂಗ್ಸ್ ಆರಂಭವಾಗಲಿದೆ ಎಂದು ಘೋಷಣೆಯಾದಗಲೇ ತಮ್ಮ ಪ್ಲಾನ್ಗಳನ್ನು ಬದಲಾಯಿಸಿಕೊಂಡಿದ್ದಾರೆ ಎಂಬುದು ಅವರ ಮಾತುಗಳಿಂದಲೇ ತಿಳಿಯುತ್ತದೆ. ಆದರೆ, ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)
ಅರವಿಂದ್ಗೆ ಟ್ರೋಫಿ ಗೆಲ್ಲುವ ಅವಕಾಶ ಕಸಿದ ಎರಡನೇ ಇನ್ನಿಂಗ್ಸ್: ಇಲ್ಲಿದೆ ಅಚ್ಚರಿಯ ಮಾಹಿತಿ!
ಬಿಗ್ಬಾಸ್ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!
ಹಣ್ಣು ಕಿತ್ತು ತಿಂದ ಬಾಲಕರನ್ನು ಮರಕ್ಕೆ ಕಟ್ಟಿ ಹೊಡೆದ; ಮೂರ್ಛೆ ಹೋದವರ ಮುಂದೆ ಮದ್ಯ ಕುಡಿದ!