ಬೆಂಗಳೂರು: ಬಿಗ್ಬಾಸ್ನಲ್ಲಿ ಬಹುಮಾನವಾಗಿ ಬಂದ ಬೌನ್ಸ್ ಬೈಕ್ ಅನ್ನು ಫುಡ್ ಡೆಲಿವರಿ ಮಾಡುವ ಯುವಕನೊಬ್ಬನಿಗೆ ಕೊಡುಗೆ ನೀಡುವ ಮೂಲಕ ವಿರೋಧಿಗೆ ಸೂಕ್ತ ಉತ್ತರ ನೀಡಿದ್ದಲ್ಲದೆ, ಕೊಟ್ಟ ಮಾತನ್ನು ಸಹ ಡ್ರೋನ್ ಪ್ರತಾಪ್ ಉಳಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ಬಾಸ್ ಸೀಸನ್ 10ರಲ್ಲಿ ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆದರು. ಕಾರ್ತಿಕ್ ಮಹೇಶ್ ವಿಜೇತರಾದರು. ರನ್ನರ್ ಅಪ್ ಆದ ಡ್ರೋನ್ ಪ್ರತಾಪ್ ಅವರಿಗೆ ನಗದು ಬಹುಮಾನ ಸೇರಿದಂತೆ ಒಂದು ಬೌನ್ಸ್ ಬೈಕ್ ಬಹುಮಾನವಾಗಿ ಸಿಕ್ಕಿತು. ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರತಾಪ್, ನನಗೆ ಸಿಕ್ಕ ಲಕ್ಷಾಂತರ ಮತಗಳೇ ನನಗೆ ಸಾಕು. ನನಗೆ ಬಹುಮಾನವಾಗಿ ಬಂದ ಹಣ ಮತ್ತು ಬೈಕ್ ಅನ್ನು ಅಗತ್ಯ ಇರುವವರಿಗೆ ನೀಡುತ್ತೇನೆ ಎಂದು ಹೇಳಿದ್ದರು.
ಬಿಗ್ಬಾಸ್ ಕಾರ್ಯಕ್ರಮ ಮುಗಿದು ಸಾಕಷ್ಟು ದಿನಗಳಾದರೂ ಡ್ರೋನ್ ಪ್ರತಾಪ್ ಅವರು ತಾವು ಹೇಳಿದ ಮಾತುಗಳನ್ನು ಉಳಿಸಿಕೊಂಡರಾ ಎಂಬ ಅನುಮಾನ ಕಾಡಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಪ್ರತಾಪ್ ಅವರನ್ನು ಪ್ರಶ್ನೆ ಮಾಡಿದ್ದರು. ಇದೀಗ ಎಲ್ಲ ಪ್ರಶ್ನೆಗಳಿಗೆ ಪ್ರತಾಪ್ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ.
ಫುಡ್ ಡೆಲಿವರಿ ಬಾಯ್ಗೆ ಬೈಕ್ ಗಿಫ್ಟ್
ಬಿಗ್ಬಾಸ್ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ಹೆಸರು ರಾಜು ಅಂತ. ಮಧ್ಯಾಹ್ನದಿಂದ ಸಂಜೆವರೆಗೂ ಹೋಟೆಲ್ನಲ್ಲಿ ಕೆಲಸ ಮಾಡಿ, ಸಂಜೆಯ ಬಳಿಕ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ. ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು. ಆದರೆ, ಅವರ ಸ್ನೇಹಿತ ಮಾಡಿದ ಮೋಸದಿಂದ ಬೈಕನ್ನು ಬ್ಯಾಂಕ್ನವರು ಸೀಜ್ ಮಾಡಿದರು. ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ನೀಡಿದ್ದು ನನಗೆ ತುಂಬಾ ಖುಷಿ ತಂದಿದೆ ಎಂದು ಡ್ರೋನ್ ಪ್ರತಾಪ್ ಬರೆದುಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಅವರ ಪೋಸ್ಟ್ಗೆ 32 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೆಟ್ಟಿಗರು ಪ್ರತಾಪ್ ಅವರನ್ನು ಮನಸಾರೆ ಕೊಂಡಾಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀರಾ ಮತ್ತು ನಿಮಗೆ ವೋಟ್ ಮಾಡಿದ್ದಕ್ಕೆ ಸಾರ್ಥಕವಾಯಿತು ಎಂದು ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಬಿಗ್ಬಾಸ್ ಬಳಿಕ ಸದ್ಯ ಪ್ರತಾಪ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಇದೊಂದು ಕಾಮಿಡಿ ಶೋ ಆಗಿದೆ.
ಅಯ್ಯೋ ಹೀಗಾಗಬಾರದಿತ್ತು! 2800 ಕೋಟಿ ರೂ. ಲಾಟರಿ ಬಹುಮಾನ ಗೆದ್ದವನಿಗೆ ಮರುಕ್ಷಣವೇ ಕಾದಿತ್ತು ಶಾಕ್
ಲೋಕ ಸಮರ 2024: ಡಾ. ಮಂಜುನಾಥ್ಗೆ ಹಾಸನ ಟಿಕೆಟ್ ಫಿಕ್ಸಾ? ಕಾಂಗ್ರೆಸ್ನಿಂದ ಶ್ರೇಯಸ್ ಕಣಕ್ಕೆ?