ಹಣ್ಣು ಕಿತ್ತು ತಿಂದ ಬಾಲಕರನ್ನು ಮರಕ್ಕೆ ಕಟ್ಟಿ ಹೊಡೆದ; ಮೂರ್ಛೆ ಹೋದವರ ಮುಂದೆ ಮದ್ಯ ಕುಡಿದ!

ನವದೆಹಲಿ: ಖಾಸಗಿ ಶಾಲೆಯೊಂದರ ಆವರಣದಲ್ಲಿದ್ದ ಮರದಿಂದ ಹಣ್ಣನ್ನು ಕಿತ್ತು ತಿಂದಿದ್ದಕ್ಕೆ ಬಾಲಕರಿಬ್ಬರನ್ನು ಮರಕ್ಕೆ ಕಟ್ಟಿ ಹೊಡೆದು ವ್ಯಕ್ತಿಯೊಬ್ಬ ಅತ್ಯಂತ ದುರುಳವಾಗಿ ವರ್ತಿಸಿದ್ದಾನೆ. ಆ ಮಕ್ಕಳಿಬ್ಬರು ಬೇಡಿಕೊಂಡರೂ ಕೇಳದೆ ಮೂರ್ಛೆ ಹೋಗುವವರೆಗೂ ಹೊಡೆದಿದ್ದಾನೆ. ಉತ್ತರಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯ ಗೆಹುವಾ ಎಂಬಲ್ಲಿನ ಖಾಸಗಿ ಶಾಲೆಯ ಆವರಣದಲ್ಲಿದ್ದ ಮರದಿಂದ ಹತ್ತು ಹಾಗೂ ಹನ್ನೊಂದು ವರ್ಷದ ಇಬ್ಬರು ದಲಿತ ಬಾಲಕರು ಹಣ್ಣು ಕಿತ್ತುಕೊಂಡು ತಿಂದಿದ್ದಾರೆ. ಇದನ್ನು ನೋಡಿದ 25 ವರ್ಷದ ಕೈಲಾಸ್ ವರ್ಮಾ ಎಂಬಾತ ಅವರಿಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಬಡಿದಿದ್ದಾನೆ. … Continue reading ಹಣ್ಣು ಕಿತ್ತು ತಿಂದ ಬಾಲಕರನ್ನು ಮರಕ್ಕೆ ಕಟ್ಟಿ ಹೊಡೆದ; ಮೂರ್ಛೆ ಹೋದವರ ಮುಂದೆ ಮದ್ಯ ಕುಡಿದ!