ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣವೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸ್ ತನಿಖಾ ವೇಳೆ ಪ್ರಕರಣ ಕುರಿತ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಆರೋಪಿ ಕ್ಯಾಬ್ ಡ್ರೈವರ್ ದೇವರಾಜ್ಗೂ ಮತ್ತು ಸಂತ್ರಸ್ತ ಯುವತಿಗೂ ಮೊದಲೇ ಪರಿಚಯವಿತ್ತು. ಈ ಹಿಂದೆಯು ಕೂಡ ಸಾಕಷ್ಟು ಬಾರಿ ಯುವತಿಯನ್ನು ದೇವರಾಜ್ ಡ್ರಾಪ್ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ ಪೋನ್ ನಂಬರ್ ಕೂಡ ಶೇರ್ ಮಾಡ್ಕೊಂಡಿದ್ರು. ಯಾವುದೇ ಸಮಯದಲ್ಲಿ ಕ್ಯಾಬ್ ಬೇಕಾದ್ರೆ ನಂಗೆ ಕಾಲ್ ಮಾಡಿ ಅಂತಾ ಯುವತಿಯನ್ನು ದೇವರಾಜ್ ಪರಿಚಯ ಮಾಡ್ಕೊಂಡಿದ್ದ. ಅನೇಕ ಬಾರಿ ದೇವರಾಜ್ ಡ್ರಾಪ್ ಮಾಡಿರುವುದು ಬೆಳಕಿಗೆ ಬಂದಿದೆ.
ಇದೇ ಕಾರಣಕ್ಕೆ ಅಂದು ತಡರಾತ್ರಿ ದೇವರಾಜ್ಗೆ ಸಂತ್ರಸ್ತ ಯುವತಿ ಕಾಲ್ ಮಾಡಿದ್ದಳು. ಹೆಚ್ಎಸ್ಆರ್ ಲೇಔಟ್ನಿಂದ ಮುರುಗೇಶ್ ಪಾಳ್ಯವರೆಗೆ ಯುವತಿಯನ್ನು ಕಾರಿನಲ್ಲಿ ಕರೆತಂದಿದ್ದ ಆರೋಪಿ ದೇವರಾಜ್, ಯುವತಿ ಪಾನಮತ್ತಳಾಗಿದ್ದನ್ನು ನೋಡಿ ದುರುಪಯೋಗಪಡಿಸಿಕೊಂಡು ಅತ್ಯಾಚಾರ ಎಸಗಿ ಎಸ್ಕೇಪ್ ಆಗಿದ್ದ.
ಇದೀಗ ಪೊಲೀಸರ ತನಿಖೆ ವೇಳೆ ಮೊಬೈಲ್ ಪರಿಶೀಲನೆ ನಡೆಸಿದಾಗ ಇಬ್ಬರ ನಡುವೆ ಮೊದಲೇ ಪರಿಚಯದ ಇದ್ದುದ್ದರೆ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಐದು ದಿನಗಳ ಕಾಲ ಜೀವನ್ ಭೀಮಾನಗರ ಪೊಲೀಸರ ವಶದಲ್ಲಿದ್ದಾನೆ. (ದಿಗ್ವಿಜಯ ನ್ಯೂಸ್)
ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!
ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!
ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!