More

    ಕ್ಯಾಬ್​ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಮೊಬೈಲ್​ ರಹಸ್ಯ ಬಯಲು!

    ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕ್ಯಾಬ್​ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣವೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸ್ ತನಿಖಾ ವೇಳೆ ಪ್ರಕರಣ ಕುರಿತ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

    ಆರೋಪಿ ಕ್ಯಾಬ್ ಡ್ರೈವರ್ ದೇವರಾಜ್​ಗೂ ಮತ್ತು ಸಂತ್ರಸ್ತ ಯುವತಿಗೂ ಮೊದಲೇ ಪರಿಚಯವಿತ್ತು. ಈ ಹಿಂದೆಯು ಕೂಡ ಸಾಕಷ್ಟು ಬಾರಿ ಯುವತಿಯನ್ನು ದೇವರಾಜ್​ ಡ್ರಾಪ್ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ ಪೋನ್ ನಂಬರ್ ಕೂಡ ಶೇರ್ ಮಾಡ್ಕೊಂಡಿದ್ರು. ಯಾವುದೇ ಸಮಯದಲ್ಲಿ ಕ್ಯಾಬ್ ಬೇಕಾದ್ರೆ ನಂಗೆ ಕಾಲ್ ಮಾಡಿ ಅಂತಾ ಯುವತಿಯನ್ನು ದೇವರಾಜ್​ ಪರಿಚಯ ಮಾಡ್ಕೊಂಡಿದ್ದ. ಅನೇಕ ಬಾರಿ ದೇವರಾಜ್​ ಡ್ರಾಪ್​ ಮಾಡಿರುವುದು ಬೆಳಕಿಗೆ ಬಂದಿದೆ.

    ಇದೇ ಕಾರಣಕ್ಕೆ ಅಂದು ತಡರಾತ್ರಿ ದೇವರಾಜ್​ಗೆ ಸಂತ್ರಸ್ತ ಯುವತಿ ಕಾಲ್ ಮಾಡಿದ್ದಳು. ಹೆಚ್ಎಸ್ಆರ್ ಲೇಔಟ್​ನಿಂದ ಮುರುಗೇಶ್ ಪಾಳ್ಯವರೆಗೆ ಯುವತಿಯನ್ನು ಕಾರಿನಲ್ಲಿ ಕರೆತಂದಿದ್ದ ಆರೋಪಿ ದೇವರಾಜ್​, ಯುವತಿ ಪಾನಮತ್ತಳಾಗಿದ್ದನ್ನು ನೋಡಿ ದುರುಪಯೋಗಪಡಿಸಿಕೊಂಡು ಅತ್ಯಾಚಾರ ಎಸಗಿ ಎಸ್ಕೇಪ್ ಆಗಿದ್ದ.

    ಇದೀಗ ಪೊಲೀಸರ ತನಿಖೆ ವೇಳೆ ಮೊಬೈಲ್​ ಪರಿಶೀಲನೆ ನಡೆಸಿದಾಗ ಇಬ್ಬರ ನಡುವೆ ಮೊದಲೇ ಪರಿಚಯದ ಇದ್ದುದ್ದರೆ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಐದು ದಿನಗಳ ಕಾಲ ಜೀವನ್ ಭೀಮಾನಗರ ಪೊಲೀಸರ ವಶದಲ್ಲಿದ್ದಾನೆ. (ದಿಗ್ವಿಜಯ ನ್ಯೂಸ್​)

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!

    ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts