More

    ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!

    ಹೈದರಾಬಾದ್​: ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಮತ್ತು ನಾಗಚೈತನ್ಯ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಆದರೆ, ಇದುವರೆಗೂ ಯಾರೋಬ್ಬರು ಈ ಬಗ್ಗೆ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ.

    ಒಟ್ಟಿನಲ್ಲಿ ಇಬ್ಬರು ಬೇರೆಯಾಗುವುದು ಖಚಿತ ಎಂಬ ಮಾತುಗಳು ಟಾಲಿವುಡ್​ ಗಲ್ಲಿಯಿಂದ ಕೇಳಿಬರುತ್ತಿವೆ. ಇದರ ನಡುವೆ ನಾಗಚೈತನ್ಯ ತಮ್ಮ ಮುಂದಿನ “ಲವ್​ ಸ್ಟೋರಿ” ಸಿನಿಮಾದ ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಡಿವೋರ್ಸ್​ ವಿಚಾರ ಬಂದಾಗಿನಿಂದ ಇದುವರೆಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾತನಾಡದ ನಾಗಚೈತನ್ಯ ಇದೀಗ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ಇಂತಹ ಸಂದಿಗ್ಧ ಸಮಯದಲ್ಲೂ ನಿಮ್ಮ ಕೆಲಸವನ್ನೂ ನೀವು ಹೇಗೆ ನಿರ್ವಹಿಸುತ್ತೀರಾ ಎಂದು ಸಂದರ್ಶನದಲ್ಲಿ ನಾಗಚೈತನ್ಯರಿಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ನಾಗಚೈತನ್ಯ ನನ್ನ ವೃತ್ತಿ ಜೀವನದ ಆರಂಭದಿಂದಲೂ ನಾನು ವೈಕಕ್ತಿಕ ಜೀವನ ಮತ್ತು ವೃತ್ತಿ ಜೀವನವನ್ನು ಬೇರೆ ಬೇರೆಯಾಗಿ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ ಎಂದರು.

    ಎಂದಿಗೂ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನು ಬೆರೆಸುವುದಿಲ್ಲ. ಇದನೆಲ್ಲಾ ನನ್ನ ತಂದೆ-ತಾಯಿಯನ್ನು ನೋಡಿ ಕಲಿತು ಬೆಳೆದಿದ್ದೇನೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದರೆ ಅವರೆಂದು ಕೆಲಸದ ಬಗ್ಗೆ ಮಾತನಾಡುವುದಿಲ್ಲ. ಇದನ್ನು ನಾನು ಗಮನಿಸಿದ್ದೇನೆ. ಅವರು ಕೆಲಸಕ್ಕೆ ಹೋದರೆ, ಅವರ ವೈಯಕ್ತಿಕ ಜೀವನ ಅವರ ಕೆಲಸಕ್ಕೆಂದು ಅಡ್ಡಿಯಾಗುವುದಿಲ್ಲ. ಅಪ್ಪ-ಅಮ್ಮ ತುಂಬಾ ಸೊಗಸಾಗಿ ಎರಡನ್ನು ಬ್ಯಾಲೆನ್ಸ್​ ಮಾಡುವುದನ್ನು ನಾನು ಯಾವಾಗಲೂ ಗಮನಿಸಿದ್ದೇನೆಂದು ನಾಗಚೈತನ್ಯ ಹೇಳಿದ್ದಾರೆ. ಇದೇ ವೇಳೆ ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್​ ಇನ್ಮುಂದೆ ಸಾಮಾಜಿಕ ಜಾಲತಾಣದ ಮೇಲೆ ಆಸಕ್ತಿಯನ್ನು ತೋರುವುದಿಲ್ಲ ಎಂದರು.

    ಕ್ಷಣ ಕ್ಷಣವೂ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಮಾಡುತ್ತಿರುವುದರಿಂದ ನಿಮಗೆ ಬೇರವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, ಹೌದು, ನಿಜಕ್ಕೂ ಇದು ನೋವುಂಟು ಮಾಡುತ್ತದೆ. ಮನರಂಜನೆ ಈ ರೀತಿ ಏಕೆ ಸಾಗುತ್ತಿದೆ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಆದರೆ, ಇಂದಿನ ಯುಗದಲ್ಲಿ ಸುದ್ದಿಗಳು ಸುದ್ದಿಯನ್ನು ಬದಲಿಸುತ್ತವೆ ಎಂಬುದು ನಂತರದಲ್ಲಿ ನನಗೆ ತಿಳಿಯಿತು. ಇಂದು ಒಂದು ಸುದ್ದಿ, ನಾಳೆ ಇನ್ನೊಂದು ಸುದ್ದಿ, ಹೀಗೆ ಸುದ್ದಿಗಳು ಬದಲಾಗುತ್ತಾ ಇಂದಿನ ಸುದ್ದಿಯನ್ನು ಮರೆತೇ ಬಿಡುತ್ತಾರೆ. ನಮ್ಮ ತಾತನ ಕಾಲದಲ್ಲಿ ಮ್ಯಾಗಜಿನ್​ ತಿಂಗಳಿಗೆ ಒಮ್ಮೆ ಬರುತ್ತಿತ್ತು. ಮುಂದಿನ ತಿಂಗಳು ಇನ್ನೊಂದು ಮ್ಯಾಗಜಿನ್​ ಬರುವವರೆಗೂ ಈ ಸುದ್ದಿ ಹಾಗೇ ಉಳಿದುಕೊಂಡಿರುತ್ತಿತ್ತು. ಆದರೆ, ಇಂದು ಒಂದು ಕ್ಷಣದಲ್ಲೇ ಸಾಲು ಸಾಲು ಸುದ್ದಿಗಳನ್ನು ನೋಡುತ್ತೇವೆ. ಹೀಗಾಗಿ ಯಾವುದೇ ವಿಚಾರ ಜನರ ಮನಸ್ಸಿನಲ್ಲಿ ತುಂಬಾ ಹೊತ್ತು ಇರುವುದಿಲ್ಲ. ನಿಜವಾದ ಸುದ್ದಿ ಮಾತ್ರ ಉಳಿಯುತ್ತದೆ. ಆದರೆ, ಟಿಆರ್​ಪಿಗಾಗಿ ಮಾಡಿದ ಹುರುಳಿಲ್ಲದ ಸುದ್ದಿಯನ್ನು ಜನರು ಮರತೇ ಬಿಡುತ್ತಾರೆ. ಇದರ ಬಗ್ಗೆ ಒಮ್ಮೆ ಯೋಚಿಸಿ ನೋಡಿದಾಗ ಅದು ನನ್ನ ಮೇಲೆ ಪರಿಣಾಮ ಬೀರುವುದನ್ನು ನಿಲ್ಲಿಸುತ್ತದೆ ಎಂದು ನಾಗಚೈತನ್ಯ ಸಂದರ್ಶನದಲ್ಲಿ ಹೇಳಿಕೊಂಡರು.

    ಸದ್ಯ ನಾಗಚೈತನ್ಯ ಲವ್​ ಸ್ಟೋರಿ ಚಿತ್ರದ ಪ್ರಮೋಷನ್​ನಲ್ಲಿ ಬಿಜಿಯಾಗಿದ್ದಾರೆ. ಚಿತ್ರದಲ್ಲಿ ನಾಗಚೈತನ್ಯಗೆ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ. ಸಮಂತಾ ತಮ್ಮ ಹೆಸರಿನ ಮುಂದೆ ಅಕ್ಕಿನೇನಿ ಎಂಬ ಸರ್​ ನೇಮ್​ ಅನ್ನು ತೆಗೆದಾಗಿನಿಂದ ಇಬ್ಬರ ಡಿವೋರ್ಸ್​ ವಿಚಾರದ ಸುದ್ದಿ ಹಬ್ಬಿತು. ಸಮಂತಾ ನಡೆಯು ಕೂಡ ಅದಕ್ಕೆ ಪುಷ್ಠಿ ನೀಡುವಂತಿದೆ. ಇತ್ತೀಚೆಗೆ ನಾಗಾರ್ಜುನ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸದೇ ಕೇವಲ ಶುಭಕೋರಿದ್ದರು. ಅಲ್ಲದೆ, ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದರು. ಮದುವೆಯ ಬಳಿಕ ಯಾವುದೇ ಪ್ರವಾಸ ಕೈಗೊಂಡರು ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಎಲ್ಲಿಗೆ ಹೋದರು ಸಮಂತಾ ಒಂಟಿಯಾಗೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎಂಬ ಚರ್ಚೆಗೆ ಪುಷ್ಠಿ ನೀಡಿದೆ. (ಏಜೆನ್ಸೀಸ್​)

    ಸಮಂತಾ-ನಾಗಚೈತನ್ಯ ಮನಸ್ತಾಪಕ್ಕೆ ಇದೇ ಕಾರಣನಾ? ಟಾಲಿವುಡ್​ ಅಂಗಳದಲ್ಲಿ ಹೀಗೊಂದು ಬಿಸಿ ಬಿಸಿ ಚರ್ಚೆ..!

    ನಾಗಚೈತನ್ಯ ಜತೆ ಡಿವೋರ್ಸ್ ಆದ್ರೆ ಸಮಂತಾಗೆ ಸಿಗಲಿರುವ ಜೀವನಾಂಶದ ಮೊತ್ತ ಇಷ್ಟಂತೆ..!

    ಆರ್​ಜಿವಿ ಸಂದರ್ಶನದಲ್ಲಿ ಲೈಂಗಿಕತೆ ಬಗ್ಗೆ ಬಿಚ್ಚು ಮಾತು: ನಟಿ ಆಶು ರೆಡ್ಡಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts