More

    ಬಾ ನಲ್ಲೆ ಮಧುಚಂದ್ರಕೆ ಫಿಲ್ಮ್​ ನೋಡಿ ಪತ್ನಿ ಹತ್ಯೆಗೆ ಸಂಚು: ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಗಂಡ!

    ಬೆಂಗಳೂರು: ಅನ್ನಪೂರ್ಣೇಶ್ವರಿ ನಗರದಲ್ಲಿ ಉದ್ಯಮಿಯೊಬ್ಬನಿಂದ ನಡೆದಿದ್ದ ಹೆಂಡತಿ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯ ಹಿಂದಿನ ರಹಸ್ಯವನ್ನು ದಿಗ್ವಿಜಯ ನ್ಯೂಸ್ ಬಿಚ್ಚಿಟ್ಟಿದೆ. ಪಕ್ಕಾ ಸಿನಿಮಾ ಸ್ಟೈಲ್​ನಲ್ಲಿ ಪತ್ನಿಯನ್ನು ಕೊಲೆ ಮಾಡಲು ಗಂಡ ಸಂಚು ರೂಪಿಸಿದ್ದ. ಆ ಒಂದು ಸಿನಿಮಾ ಮಾದರಿಯಲ್ಲೇ ಆರೋಪಿ ಪತಿ ಕೊಲೆಗೆ ಪ್ಲಾನ್​ ರೂಪಿಸಿದ್ದ ಎಂದು ತಿಳಿದುಬಂದಿದೆ.

    ಆ ಸಿನಿಮಾ ಯಾವುದು, ಆ ಸ್ಕೇಚ್ ಹೇಗಿತ್ತು ಅಂತಾ ನೋಡುವುದಾದರೆ, “ಬಾ ನಲ್ಲೆ ಮಧುಚಂದ್ರಕೆ” ಎಂಬ ಕನ್ನಡದ ಸೂಪರ್ ಹಿಟ್ ಸಿನಿಮಾ ನಿಮಗೆ ನೆನಪಿರಬಹುದು. ಈ ಸಿನಿಮಾವನ್ನು ನೋಡಿ ಆರೋಪಿ ಪತಿ, ಪತ್ನಿ ಹತ್ಯೆಗೆ ಸ್ಕೆಚ್ ರೆಡಿ ಮಾಡಿದ್ದ. ಹೆಂಡತಿಯ ಕೊಲೆಗೆ 15 ದಿನದ ಹಿಂದೆಯೇ ಸ್ಕೆಚ್​ ರೆಡಿಯಾಗಿತ್ತು.

    ಪೊಲೀಸ್​ ವಿಚಾರಣೆ ವೇಳೆ ಆರೋಪಿ ಕೊಲೆ ಹಿಂದಿನ ಸ್ಪೋಟಕ ರಹಸ್ಯವನ್ನು ಬಯಲು ಮಾಡಿದ್ದಾನೆ. ಆರೋಪಿ ಫೈನಾಶ್ಸಿಯರ್ ಕಾಂತರಾಜ್, ಪತ್ನಿ ಹತ್ಯೆಗಾಗಿ ಎರಡು ದಿನದ ಟ್ರಿಪ್​ ಪ್ಲಾನ್ ಮಾಡಿದ್ದ. ಕರಾವಳಿ ಸುತ್ತ ಟ್ರಿಪ್ ಕರೆದೊಯ್ದು ಪತ್ನಿ ರೂಪಾಗೆ ಮುಹೂರ್ತ ಇಟ್ಟಿದ್ದ. ಟ್ರಿಪ್ ಹೋಗೋಣ ಅಂತಾ ಪತ್ನಿ ರೂಪಾಳನ್ನು ಕಾಂತರಾಜ್​, ಜೋಗದ ಜಲಪಾತಕ್ಕೆ ಕರೆದೊಯ್ದಿದ್ದ. ಜಲಪಾತ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದೊಯ್ದಿದ್ದ. ಎತ್ತರದ ಸ್ಥಳಕ್ಕೆ ಹೋಗಿ ತಳ್ಳಿ ಕೊಲೆ ಮಾಡಲು ಸ್ಕೇಚ್ ಹಾಕಿದ್ದ.

    ಆದರೆ, ಪತ್ನಿ ರೂಪಾ ಎತ್ತರದ ಸ್ಥಳದಲ್ಲಿ ತಲೆ ತಿರುಗುತ್ತದೆ ಎನ್ನುವ ಮೂಲಕ ಅಲ್ಲಿಗೆ ಹೋಗಲು ನಿರಾಕರಿಸಿದ್ದಳು. ಪ್ರವಾಸ ವೇಳೆ ಕೊಲೆ ಮಾಡೋಕೆ ಸಾಕಷ್ಟು ಪ್ರಯತ್ನ ಮಾಡಿದ್ರು ಕೂಡ ಕಾಂತರಾಜ್​ ಸಂಚು ಯಶಸ್ವಿ ಆಗಲಿಲ್ಲ. ಈ ಹಿನ್ನಲೆಯಲ್ಲಿ ಕಾಂತರಾಜ್ ಕೋಪದಿಂದಲೇ ಮನೆಗೆ ಹಿಂದಿರುಗಿದ್ದ. ಇದಾದ ಬಳಿಕ ಮನೆಯಲ್ಲೇ ಕೊಲೆ ಮಾಡಲು ಸಂಚು ರೂಪಿಸಿದ್ದ. ನೇಣು ಹಾಕಿಕೊಂಡಿರುವಂತೆ ಬಿಂಬಿಸಲು ಯತ್ನಿಸಿದ್ದ. ಅದು ಕೂಡ ವಿಫಲವಾಗಲಿದೆ ಎಂದು ಹೆಂಡತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

    ಪೊಲೀಸರು ಮನೆಗೆ ಭೇಟಿಕೊಟ್ಟ ವೇಳೆ ಫ್ಯಾನಲ್ಲಿ ಕಟ್ಟಿದ ಸೀರೆ ನೇತಾಡುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಕೊಲೆ ನಡೆದಿದೆ. ಕೊಲೆ ನಂತರ ಮನೆಯ ಬಾಗಿಲು ಹಾಕಿಕೊಂಡು ಕಾಂತರಾಜ್​ ಎಸ್ಕೇಪ್ ಆಗಿದ್ದ. ಮಗ ಶಾಲೆಯಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬೆಳಕಿಗೆ ಬಂದಿದೆ.

    ಗಂಡ ಕಾಂತರಾಜ್‌ಗೆ ಹೆಂಡತಿ ರೂಪಾ ಮೇಲೆ ಅನುಮಾನ ಇತ್ತು. ಪತ್ನಿ ಶೀಲ ಶಂಕಿಸಿ ಖಿನ್ನೆತೆಗೆ ಒಳಗಾಗಿದ್ದ ಪತಿ ಕಾಂತರಾಜ್, ಕೊನೆಗೆ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

    ಪತ್ನಿಯ ಮೊಬೈಲ್ ನೋಡಿದ ರಿಯಲ್​ ಎಸ್ಟೇಟ್​ ಉದ್ಯಮಿ: ಮುಂದೆ ನಡೆದಿದ್ದು ಘನ ಘೋರ ಘಟನೆ

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ಪ್ರೀತಿಸಿ ಮದ್ವೆ ಆದವಳು ಪಕ್ಕದ ಮನೆಯವನ ಜತೆ ಎಸ್ಕೇಪ್! ಮನನೊಂದು ಗಂಡ ಆತ್ಮಹತ್ಯೆಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts