ಮುಂಬೈ: ನೀವು ಇದುವರೆಗೂ ಕಂಡು ಕೇಳರಿಯದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಾನವ ಪ್ರಾಣಿಗಿಂತಲೂ ಕಡೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಮದ ಪಿತ್ತ ನೆತ್ತಿಗೇರಿದರೆ, ತನ್ನ ಕಣ್ಣಿಗೆ ಬಿದ್ದ ಯಾವುದನ್ನು ಬಿಡುವುದಿಲ್ಲ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದ್ದು, ಇಡೀ ಮನುಕುಲವೇ ತಲೆತಗ್ಗಿಸುವಂತಹ ಪ್ರಸಂಗ ಇದಾಗಿದೆ.
ಇದುವರೆಗೂ ನಾಯಿ, ಹಸು ಹಾಗೂ ಮೇಕೆಗಳ ಮೇಲೆ ಕಾಮಾಂಧರ ವಕ್ರ ದೃಷ್ಟಿ ಬಿದ್ದು, ಅವುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸುದ್ದಿಯನ್ನು ಕೇಳಿದ್ದೇವೆ. ಆದರೆ, ಈ ಹೇಳ ಹೊರಟಿರುವ ಸಂಗತಿ ಒಮ್ಮೆ ಮಾನವ ಕುಲದ ಮೇಲೆ ಅಸಹ್ಯ ಹುಟ್ಟಿಸುವಂತಿದೆ. ಹೌದು, ಮಹಾರಾಷ್ಟ್ರ ನಾಲ್ವರು ಕಾಂಮಾಂಧರು ಬೆಂಗಾಲ್ ಮಾನಿಟರ್ ಉಡದ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ಗೋಥಾನೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ನಡೆದಿದೆ. ಸಹ್ಯಾದ್ರಿ ಸಂರಕ್ಷಿತಾರಣ್ಯವು ಬೆಂಗಾಲ್ ಮಾನಿಟರ್ ಉಡದ ತವರಾಗಿದೆ. ಇದೀಗ ಆ ಮೂಕ ಪ್ರಾಣಿಯ ಮೇಲೆ ಕಾಮಾಂಧರು ದೌರ್ಜನ್ಯ ಎಸಗಿದ್ದು, ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸಂದೀಪ್ ತುಕ್ರಮ್, ಪವಾರ್ ಮಂಗೇಶ್, ಜನಾರ್ಧನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನೀಲ್ ಎಂದು ಗುರುತಿಸಲಾಗಿದೆ. ಸಂರಕ್ಷಿತಾರಣ್ಯದಲ್ಲಿ ಆರೋಪಿಗಳು ಅಡ್ಡಾಡುವುದನ್ನು ಅರಣ್ಯದಲ್ಲಿ ಅಲ್ಲಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ನೋಡಿ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಧಿಕಾರಿಗಳು ಆರಂಭದಲ್ಲಿ ಆರೋಪಿಗಳನ್ನು ಕಳ್ಳ ಬೇಟೆಗಾರರು ಭಾವಿಸಿದ್ದರು. ಆದರೆ, ಅವರ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ನೋಡಿದಾಗ ಅವರ ಕರಾಳ ಮುಖ ಬಯಲಾಗಿದೆ. ಬೇಟೆ ಮಾತ್ರವಲ್ಲದೆ ಉಡದ ಮೇಲೆ ಅತ್ಯಾಚಾರ ಮಾಡಿರುವ ವಿಡಿಯೋವನ್ನು ಆರೋಪಿಗಳು ರೆಕಾರ್ಡ್ ಮಾಡಿಕೊಂಡಿದ್ದರು. ಅದನ್ನು ನೋಡಿ ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.
ಇವರೆಲ್ಲರೂ ಕೊಂಕಣದಿಂದ ಕೊಲ್ಲಾಪುರದ ಚಂದೋಳಿ ಗ್ರಾಮಕ್ಕೆ ಬೇಟೆಗೆಂದು ಬಂದಿರುವುದು ಅರಣ್ಯಾಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ತಪ್ಪಿತಸ್ಥರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉಡದ ಮೇಲಿನ ಅತ್ಯಾಚಾರ ಆರೋಪ ಸಾಬೀತಾದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಅಡಿಯಲ್ಲಿ ಅಪರಾಧಿಗಳು ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. (ಏಜೆನ್ಸೀಸ್)
ನೋಡ ನೋಡುತ್ತಿದ್ದಂತೆ ಕಾಂಕ್ರಿಟ್ ಚಪ್ಪಡಿ ಕುಸಿದು ಚರಂಡಿ ಒಳಗೆ ಬಿದ್ದ ಐವರು: ಭಯಾನಕ ದೃಶ್ಯ ಸೆರೆ!
RCB ಟ್ರೋಫಿ ಗೆಲ್ಲೋವರೆಗೂ ಮದ್ವೆಯಾಗಲ್ಲ ಎಂದ ಮಹಿಳಾ ಅಭಿಮಾನಿ: ಕ್ರಿಕೆಟಿಗ ಅಮಿತ್ ಮಿಶ್ರಾ ಕಾಮೆಂಟ್ ವೈರಲ್
ಸಪ್ತಪದಿಗೆ ಹೊಸ ಮುಹೂರ್ತ ಫಿಕ್ಸ್; 28, ಮೇ 11, 25ಕ್ಕೆ ಸಾಮೂಹಿಕ ವಿವಾಹ