ಬೆಂಗಳೂರು: ಸಾರಿಗೆ ಹಾಗೂ ಪತ್ರಿಕೋದ್ಯಮ ರಂಗದಲ್ಲಿ ಜಾಗತಿಕ ಮನ್ನಣೆಗೆ ಪಾತ್ರರಾಗಿರುವ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಹೊಸ ವರ್ಷ ಹಿನ್ನೆಲೆಯಲ್ಲಿ ಸಿನಿಮಾದ ಹೊಸ ಪೊಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ವಿಜಯ ಸಂಕೇಶ್ವರ ಪಾತ್ರಧಾರಿ ನಿಹಾಲ್ ಮತ್ತು ಆನಂದ ಸಂಕೇಶ್ವರ ಪಾತ್ರಧಾರಿ ಭರತ್ ಬೊಪಣ್ಣ ಅವರ ಫೋಟೋ ಬಿಡುಗಡೆಯಾಗಿರುವ ಹೊಸ ಪೋಸ್ಟರ್ನಲ್ಲಿದೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಶಿಕಾ ಶರ್ಮ ಈ ಚಿತ್ರವನ್ನು ನಿರ್ದೇಶಿಸಿದರೆ, ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಟ ನಿಹಾಲ್ ರಜಪೂತ್ ನಿಭಾಯಿಸಲಿದ್ದಾರೆ.
ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಬೆಂಗಳೂರು, ಹೈದರಾಬಾದ್ಗಳಲ್ಲೂ ಚಿತ್ರೀಕರಣ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಹುಬ್ಬಳ್ಳಿ ಮತ್ತು ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ 70ರ ದಶಕದ ಹುಬ್ಬಳ್ಳಿಯ ಮಾರುಕಟ್ಟೆಯನ್ನು ಹೋಲುವ ಸೆಟ್ ಸೇರಿ 10ರಿಂದ 15 ಬೃಹತ್ ಸೆಟ್ಗಳನ್ನು ನಿರ್ವಿುಸಲಾಗಿದೆ. ಈಗಾಗಲೇ ಭರದಿಂದ ಶೂಟಿಂಗ್ ನಡೆಯುತ್ತಿದೆ.
ನಿಮಗೆ ಇದುವರೆಗೂ ಎಷ್ಟು ಬ್ರೇಕಪ್ ಆಗಿದೆ ಎಂದು ಪ್ರಶ್ನಿಸಿದವನಿಗೆ ನಟಿ ಶ್ರುತಿ ಕೊಟ್ಟ ಉತ್ತರ ಹೀಗಿತ್ತು…
ಸಾಹಸಗಳ ಪಾಲುದಾರ: ಆನಂದ ಸಂಕೇಶ್ವರ ಹುಟ್ಟುಹಬ್ಬಕ್ಕೆ ವಿಜಯಾನಂದ ತಂಡದಿಂದ ಟೀಸರ್ ಗಿಫ್ಟ್
PHOTOS| ವಿಜಯಾನಂದ ಸಿನಿಮಾ ಮುಹೂರ್ತ ಕಾರ್ಯಕ್ರಮದ ಕಲರ್ಫುಲ್ ಫೋಟೋ ಝಲಕ್