ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಅಮಲಾ ಕುರಿತ ತಾಜಾ ವಿಚಾರ ಏನೆಂದರೆ, ಅವರು ವೈಯಕ್ತಿಕ ವಿಚಾರಕ್ಕೆ ಇದೀಗ ಸುದ್ದಿಯಾಗಿದ್ದಾರೆ. ಅಮಲಾ ಅವರು 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ವಿವಾಹವಾದರು. ಆದರೆ, ಈ ಜೋಡಿ ಕೇವಲ 3 ವರ್ಷ ಮಾತ್ರ ದಾಂಪತ್ಯ ಜೀವನ ನಡೆಸಿತು. ಕೊನೆಗೆ 2017ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ಅವರ “ಆದೈ” ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಬೇರೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ ತೊಡಗಿತು. ಬಳಿಕ ಅಮಲಾ ಅವರು ಆತನ ಹೆಸರನ್ನು ಬಹಿರಂಗಪಡಿಸಿದರು.
2020ರ ಮಾರ್ಚ್ ತಿಂಗಳಲ್ಲಿ ಮುಂಬೈ ಮೂಲದ ಗಾಯಕ ಭವನಿಂದರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಭವನಿಂದರ್ ಮತ್ತು ಅಮಲಾ ಪಂಜಾಬಿ ಶೈಲಿಯ ಮದುವೆ ಉಡುಪು ಧರಿಸಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ, ನಾನಾ ಚರ್ಚೆಗೆ ಕಾರಣವಾಗಿತ್ತು. ಈ ಫೋಟೋಗಳನ್ನು ಶೇರ್ ಮಾಡಿ ಕೆಲವೇ ಕ್ಷಣಗಳಲ್ಲಿ ಭವಿಂದರ್ ತನ್ನ ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದ. ಇದು ಕೂಡ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.
ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅಮಲಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ನನ್ನ ಗಮನಕ್ಕೆ ತರದೇ ಮತ್ತು ಒಪ್ಪಿಗೆ ಪಡೆಯದೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಹಾಗೂ ನನಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಇಬ್ಬರು ಒಟ್ಟಿಗೆ ಇರುವಾಗ ಮದುವೆ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದೆವು ಎಂದು ಅಮಲಾ ಸ್ಪಷ್ಟನೆಯನ್ನು ನೀಡಿದರು.
Actress @Amala_ams gets hitched? Pics go viral #BhavninderSingh
MORE: https://t.co/vNNfgftrBM pic.twitter.com/rxZL5li9rY
— sridevi sreedhar (@sridevisreedhar) March 20, 2020
ವಿಝುಪ್ರುಮ್ ಬಳಿಯ ಆರೋವಿಲ್ಲೆಯಲ್ಲಿ ವಾಸಿಸುತ್ತಿರುವ ಭವನೀಂದರ್ ಸಿಂಗ್ ಮತ್ತು ಅವರ ಕುಟುಂಬವು ಒಟ್ಟಿಗೆ ಚಲನಚಿತ್ರ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದೆ. ಆದರೆ, ಅವರು ನನ್ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ. 30 ವರ್ಷದ ನಟಿ ತನ್ನ ಪೊಲೀಸ್ ದೂರಿನಲ್ಲಿ ಆ ವ್ಯಕ್ತಿ ತನಗೆ ಮಾನಸಿಕ ಮತ್ತು ಆರ್ಥಿಕ ಸಂಕಷ್ಟ ತಂದಿದ್ದಾನೆ ಎಂದು ದೂರಿದ್ದಾರೆ.
ತಾಜಾ ಸುದ್ದಿ ಏನೆಂದರೆ, ಅಮಲಾ ಪೌಲ್ ನೀಡಿರುವ ದೂರಿನ ಆಧಾರದ ಮೇಲೆ ಅವರ ಮಾಜಿ ಪ್ರಿಯಕರ ಭವನಿಂದರ್ ಸಿಂಗ್ನನ್ನು ಮಂಗಳವಾರ (ಆ.30) ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 16ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಟಿಗೆ ವಂಚನೆ ಮತ್ತು ಕಿರುಕುಳ ನೀಡಿರುವ ಆರೋಪದಡಿಯಲ್ಲಿ ಭವನಿಂದರ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಅಸ್ಸಾಂನಲ್ಲಿ 4,700 ಕೆ.ಜಿ ಗಾಂಜಾ ವಶ: ಪೊಲೀಸರ ನೋಡಿದ ಕೂಡಲೇ ಎಸ್ಕೇಪ್
ಮಳೆ ಹಾನಿ ಪರಿಹಾರಕ್ಕೆ 250 ಕೋಟಿ ರೂ. ಬಿಡುಗಡೆ: 24 ಗಂಟೆಯಲ್ಲಿ-96 ಮಂದಿ ಸಾವು, 30 ಸಾವಿರ ಜನ ಸಂಕಷ್ಟದಲ್ಲಿ
ಸಂಭ್ರಮ ಕಸಿದುಕೊಂಡ ಮಳೆ- ಹಬ್ಬಕ್ಕಿಲ್ಲ ಕಳೆ: ರಾಜ್ಯದಲ್ಲಿ ನಿಲ್ಲದ ಮಳೆ ಅವಾಂತರ- ಎಂಟು ಮಂದಿ ಬಲಿ