ಸಂಭ್ರಮ ಕಸಿದುಕೊಂಡ ಮಳೆ- ಹಬ್ಬಕ್ಕಿಲ್ಲ ಕಳೆ: ರಾಜ್ಯದಲ್ಲಿ ನಿಲ್ಲದ ಮಳೆ ಅವಾಂತರ- ಎಂಟು ಮಂದಿ ಬಲಿ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಉಕ್ಕಿ ಹರಿಯುತ್ತಿರುವ ಜಲಾಶಯ, ಕೆರೆ-ಕಟ್ಟೆ, ಕಾಲುವೆಗಳ ನೀರು ಜನವಸತಿ ಪ್ರದೇಶಗಳತ್ತ ನುಗ್ಗಿದ್ದು, ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಆರ್ಭಟ ತೀವ್ರವಾಗಿದ್ದು, ಯಳಂದೂರು ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಪಟ್ಟಣ ಪ್ರದೇಶದಲ್ಲೂ ಪ್ರವಾಹದಂತೆ ಹರಿಯುತ್ತಿರುವ ನೀರು ಕಂಡು ಜನರು ಬೆಚ್ಚಿದ್ದಾರೆ. ಇದು ಹಬ್ಬದ ಸಂಭ್ರಮ ಕಸಿದುಕೊಂಡಿತು. ಸುವರ್ಣಾವತಿ ನದಿ ಉಕ್ಕಿ ಹರಿದು ಮಂಗಳವಾರ ಬೆಳಗ್ಗೆ ಅಗರ-ಮಾಂಬಳ್ಳಿ ಗ್ರಾಮದ ಪೊಲೀಸ್​ ಠಾಣೆಗೆ ನೀರು ನುಗ್ಗಿದೆ. … Continue reading ಸಂಭ್ರಮ ಕಸಿದುಕೊಂಡ ಮಳೆ- ಹಬ್ಬಕ್ಕಿಲ್ಲ ಕಳೆ: ರಾಜ್ಯದಲ್ಲಿ ನಿಲ್ಲದ ಮಳೆ ಅವಾಂತರ- ಎಂಟು ಮಂದಿ ಬಲಿ