More

    ಚಲಿಸುತ್ತಿದ್ದ ಬೈಕ್​​​ ಮುಂದೆ ದಿಢೀರ್​ ಜಿಗಿದ ಬೀದಿ ನಾಯಿ: ಅಪಘಾತದಲ್ಲಿ ಯುವಕ ದುರಂತ ಸಾವು

    ತಿರುವನಂತಪುರಂ: ಚಲಿಸುತ್ತಿದ್ದ ಬೈಕ್​ ಮುಂದೆ ಬೀದಿ ನಾಯಿಯೊಂದು ದಿಢೀರ್​ ಜಿಗಿದ ಪರಿಣಾಮ ಬೈಕ್​ ನಿಯಂತ್ರಣ ಕಳೆದುಕೊಂಡು ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ 6 ಗಂಟೆಗೆ ಅರುವಿಯೋಡು ಜಂಕ್ಷನ್​ ಬಳಿ ಅಪಘಾತ ಸಂಭವಿಸಿತ್ತು. ಬಳಿಕ ಯುವಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ (ಸೆ.14) ಕೊನೆಯುಸಿರೆಳೆದಿದ್ದಾನೆ.

    ಮೃತ ಯುವಕನನ್ನು ಅಜಿನ್​ ಎ.ಎಸ್. ಎಂದು ಗುರುತಿಸಲಾಗಿದೆ.​ ಅಜಿನ್​ ಬೈಕ್​ ಮುಂದೆ ಇನ್ನೊಂದು ಬೈಕ್​ ಹೋಗುತ್ತಿತ್ತು. ಈ ವೇಳೆ ಬೀದಿ ನಾಯಿಯೊಂದು ಬೈಕ್​ ಮುಂದೆ ದಿಢೀರ್​ ಜಿಗಿಯಿತು. ಪರಿಣಾಮ ಬೈಕ್​ ನಿಯಂತ್ರಣ ಕಳೆದುಕೊಂಡು ಸವಾರ ಬೈಕ್​ ಸಮೇತ ಕೆಳಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಅಜಿನ್​ ಕೆಳಗಡೆ ಬಿದ್ದಿದ್ದ ಬೈಕ್​ಗೆ ಡಿಕ್ಕಿ ಹೊಡೆದು ತಾನು ಬೈಕ್​ ಸಮೇತ ಕೆಳಗೆ ಹಾರಿ ಬಿದ್ದಿದ್ದ.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಜೀನ್​ನನ್ನು ಕಾರಕೊಣಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿನ್​ಗೆ ಸರ್ಜರಿ ಮಾಡಿದರೂ ಕೊನೆಗೆ ಬದುಕುಳಿಯಲಿಲ್ಲ. ಅಜಿನ್​ಗೆ ಮದುವೆ ಕೂಡ ಆಗಿತ್ತು. ಪತ್ನಿ ನೀತು ಮತ್ತು ಮಗಳು ಯುವನಾಳನ್ನು ಬಿಟ್ಟು ಅಜಿನ್​ ಅಕಾಲಿಕವಾಗಿ ಅಗಲಿದ್ದಾರೆ.

    ಈ ನಡುವೆ ತಿರುವನಂತಪುರದಲ್ಲಿ ಮತ್ತೊಂದು ಬೀದಿನಾಯಿ ದಾಳಿ ವರದಿಯಾಗಿದೆ. ನ್ಯಾಷನಲ್ ಕ್ಲಬ್​ನ ಉದ್ಯೋಗಿ ಶ್ರೀನಿವಾಸನ್, ಬೀದಿ ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ (ಸೆ.13) ರಾತ್ರಿ 10:30 ರ ಸುಮಾರಿಗೆ ಒಟ್ಟುಕುಜಿಯಲ್ಲಿ ಈ ಘಟನೆ ನಡೆದಿದೆ. ಹಿಂಬದಿ ಸವಾರ ಶ್ರೀನಿವಾಸನ್ ಅವರಿಗೆ ನಾಯಿ ಕಚ್ಚಿದೆ. ಅವರಿಗೆ ಆಳವಾದ ಗಾಯಗಳಾಗಿವೆ. ಶ್ರೀನಿವಾಸನ್ ಅವರನ್ನು ಮೊದಲು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

    ಬಾಲಿವುಡ್​ನ ಸ್ಟಾರ್​ ನಟಿಯ​ ಸಹೋದರನ ಜೊತೆ ಹಸೆಮಣೆ ಏರಲು ಸಜ್ಜಾದ ಸೌತ್​ ಬ್ಯೂಟಿ ಇಲಿಯಾನಾ!

    ಅಲಯನ್ಸ್ ವಿವಿ ಆಸ್ತಿ ಮಾರಾಟಕ್ಕೆ ಯತ್ನಿಸಿ ಗಲಾಟೆ? FIR ದಾಖಲಾಗ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಎಸ್ಕೇಪ್​

    ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts