More

    ನಗರಸಭೆಗೆ ಮೆಗ್ಗಿಸ್ ತಂತ್ರಾಂಶ ಬಲ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಪೌರಾಡಳಿತ ನಿರ್ದೇಶನಾಲಯ ಯೋಜನೆಯಂತೆ ಪುತ್ತೂರು ನಗರಸಭೆ ಆಡಳಿತ ಸೇವೆಗೆ ಮೆಗ್ಗಿಸ್ ತಂತ್ರಾಂಶ ಬಲ (ಮುನ್ಸಿಪಲ್ ಇ ಗೌವರ್ನೆನ್ಸ್ ಇಂಟಿಗ್ರೇಟೆಡ್ ಸಾಫ್ಟ್‌ವೇರ್) ಬಂದಿದೆ. ನಗರಸಭೆ ಸಾರ್ವಜನಿಕರಿಗೆ ತ್ವರಿತಗತಿ ಸೇವೆ ಒದಗಿಸುವ ನಿಟ್ಟಿನಲ್ಲಿ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ತರುವ ಮೆಗ್ಗಿಸ್ ತಂತ್ರಾಂಶ ಅನುಷ್ಠಾನಗೊಳಿಸಲಿದೆ.

    ರಸ್ತೆ ಕಡಿತ, ಯೂಸರ್ ಮ್ಯಾನೇಜ್‌ಮೆಂಟ್, ಜಲನಿಧಿ ಮತ್ತು ಸ್ವೀಕೃತಿ ತಂತ್ರಾಂಶಗಳು ಇದರಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಕಟ್ಟಡ ಪರವಾನಗಿ, ಇ-ಆಸ್ತಿ ಸಹಿತ ಎಲ್ಲ ತಂತ್ರಾಂಶಗಳು ಮೆಗ್ಗಿಸ್ ವ್ಯಾಪ್ತಿಗೆ ಬರಲಿವೆ. ಸಾರ್ವಜನಿಕರಿಗೆ ದೂರು ಸಲ್ಲಿಸಲು ಕೂಡ ಈ ತಂತ್ರಾಂಶ ಲಭ್ಯವಾಗಲಿದೆ. ಸೇವೆಗಳಿಗೆ ಸಂಬಂಧಿಸಿ ಪ್ರತ್ಯೇಕ ಪ್ರತ್ಯೇಕ ತಂತ್ರಾಂಶಗಳನ್ನು ಬಳಕೆ ಮಾಡುವ ಪ್ರಮೇಯವನ್ನು ಮೆಗ್ಗಿಸ್ ತಂತ್ರಾಂಶ ತಪ್ಪಿಸಲಿದೆ. ನಾಗರಿಕರು ಈ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡರೆ ಅವರಿಗೆ ಈ ತಂತ್ರಾಂಶ ಬಳಕೆ ಸಾಧ್ಯ.

    ಒಂದೇ ಸೂರಿನಡಿ ಇ ಆಡಳಿತ ವ್ಯವಸ್ಥೆ ಲಭ್ಯವಾಗುವಂತೆ ಪೌರಾಡಳಿತ ನಿರ್ದೇಶನಾಲಯ ಕ್ರಮಕೈಗೊಳ್ಳುವ ಕುರಿತು ಉದ್ಯಮಿ ರಾಮಚಂದ್ರ ಪ್ರಭು ಸಲ್ಲಿಸಿದ ಮನವಿಗೆ ಉತ್ತರ ನೀಡಿದೆ. ಸಾರ್ವಜನಿಕರ ಕಚೇರಿ ಅಲೆದಾಟವನ್ನು ತಪ್ಪಿಸುವ ದೃಷ್ಟಿಯಿಂದ ನಗರಸಭೆಯ ವಿವಿಧ ಸೇವೆಗಳು ಇ- ಆಡಳಿತದ ಮೂಲಕ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿಗಳ ಇ ಆಡಳಿತ ಸಲಹೆಗಾರ ಬೇಲೂರು ಸುದರ್ಶನ ಅವರ ಗಮನಕ್ಕೂ ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತರು ತಂದಿದ್ದರು.

    ಮನವಿಗೆ ತ್ವರಿತ ಸ್ಪಂದನೆ
    ಪುತ್ತೂರು ನಗರಸಭೆ ಸೇರಿದಂತೆ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಒಂದೇ ಸೂರಿನಡಿ ಎಲ್ಲ ಸೇವಾ ಸೌಲಭ್ಯ ದೊರೆಯುವ ಮೆಗ್ಗಿಸ್ ( ಮುನ್ಸಿಪಲ್ ಇ ಗೌವರ್ನೆನ್ಸ್ ಇಂಟಿಗ್ರೇಟೆಡ್ ಸಾಫ್ಟ್‌ವೇರ್) ತಂತ್ರಾಂಶವನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುವ ಕುರಿತು ಮುಖ್ಯಮಂತ್ರಿಗಳ ಇ- ಆಡಳಿತ ಸಲಹೆಗಾರ ಬೇಲೂರು ಸುದರ್ಶನ ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇವರ ಮನವಿಗೆ ತ್ವರಿತ ಸ್ಪಂದನೆ ಮಾಡಿದ್ದರು.

    ಮೆಗ್ಗಿಸ್ ತಂತ್ರಾಂಶ ಅನುಷ್ಠಾನದಿಂದ ಪುತ್ತೂರಿನ ನಾಗರಿಕರಿಗೆ ನಗರಸಭೆಯಲ್ಲಿ ಲಭ್ಯವಿರುವ ವಿವಿಧ ಸೇವೆ ಒಂದೇ ಸೂರಿನಡಿ ಸಿಗುವಂತಾಗುತ್ತದೆ. ಆಡಳಿತ ಯಂತ್ರ ಚುರುಕುಗೊಳಿಸಲು ಮತ್ತು ಇ ಆಡಳಿತದ ಪರಿಣಾಮಕಾರಿ ಅನುಷ್ಠಾನಕ್ಕೆ ಇದು ಸಹಕಾರಿಯಾಗಲಿದೆ.
    ರೂಪಾ ಟಿ ಶೆಟ್ಟಿ, ಪುತ್ತೂರು ನಗರಸಭೆ ಪೌರಾಯುಕ್ತೆ

    ಮುಖ್ಯಮಂತ್ರಿಗಳ ಇ ಆಡಳಿತ ಸಲಹೆಗಾರ ಬೇಲೂರು ಸುದರ್ಶನ ಅವರು ಮುನ್ಸಿಪಲ್ ಇ ಗೌವರ್ನೆನ್ಸ್ ಇಂಟಿಗ್ರೇಟೆಡ್ ಸಾಪ್ಟ್‌ವೇರ್ ಅನುಷ್ಠಾನ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಪಾರದರ್ಶಕ ಮತ್ತು ತ್ವರಿತ ಸೇವೆಗಳು ನಾಗರಿಕರಿಗೆ ಲಭ್ಯವಾಗಲು ಮೆಗ್ಗಿಸ್ ತಂತ್ರಾಂಶ ಅನುಕೂಲಕರವಾಗಿದೆ. ಹಿರಿಯ ನಾಗರಿಕರ ಸಹಿತ ಎಲ್ಲರೂ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ. ಮತ್ತು ಜನಸ್ನೇಹಿ ಆಡಳಿತ ನೀಡಲು ಇದು ಸಹಕಾರಿ.
    ಡಿ.ಕೆ ಭಟ್ ಸಂಚಾಲಕರು ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts