More

    ಶಿವನು ಭಕ್ತಿಗೆ ಬೇಗ ಪ್ರಸನ್ನನಾಗುವನು

    ಧಾರವಾಡ: ಶಿವನು ಅಭಿಷೇಕ ಪ್ರಿಯ ಎಂದು ಹೇಳುವುದಾದರೂ ಶಿವನು ಭಕ್ತಿಪ್ರಿಯನಾಗಿದ್ದಾನೆ. ಶಿವನು ಭಕ್ತಿಗೆ ಬೇಗ ಪ್ರಸನ್ನನಾಗಿ ಭಕ್ತರ ಸಂಕಲ್ಪಗಳನ್ನು ಈಡೇರಿಸುತ್ತಾನೆ ಎಂದು ಕಲಬುರ್ಗಿ ಜಿಲ್ಲೆ ಸೂಗೂರು ರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮಹಾದಾಸೋಹಿ ಶ್ರೀ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.
    ಅರಳಗುಂಡಿಗೆಯ ಆದಯ್ಯ ಮತ್ತು ಮಡಿಯಮ್ಮ ದಂಪತಿಗೆ ಸಂಗಮ್ಮ ನೀಡಿದ ಮಗುವಿನ ನಾಮಕರಣ ಸಮಾರಂಭ ಏರ್ಪಟ್ಟಿತು. ಕಲಿಕೇರಿ ಹಿರೇಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶರಣಬಸವೇಶ್ವರ ಎಂದು ನಾಮಕರಣ ಮಾಡಿದರು. ಶರಣಬಸವೇಶ್ವರನಿಗೆ ಮಠಗಳಲ್ಲಿ ಅಕ್ಷರಾಭ್ಯಾಸವನ್ನು ಶಾಸ್ತೊçÃಕ್ತವಾಗಿ ಮಾಡಿಸಲಾಯಿತು ಎಂದು ಶ್ರೀಗಳು ಹೇಳಿದರು.
    ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts