More

    ಅಮ್ಮಿನಬಾವಿಯಲ್ಲಿ ಹನುಮ ಜಯಂತಿ ವಿಶೇಷ ಉತ್ಸವ

    ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಹನುಮ ಜಯಂತಿ ಉತ್ಸವವನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
    ಶ್ರೀ ವೀರಾಂಜನೇಯಸ್ವಾಮಿ ಭಾವಚಿತ್ರದ ವಿಶೇಷ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜನಪದ ವಾದ್ಯಮೇಳಗಳು, ಪಲ್ಲಕ್ಕಿ, ಗೊಂಬೆ ಕುಣಿತ, ಅಲಂಕೃತ ಚಕ್ಕಡಿ ಎತ್ತುಗಳು, ಶ್ರೀರಾಮ ಮತ್ತು ಸೀತಾಮÁತೆಯ ವೇಷಧಾರಿ ಮಕ್ಕಳ ವಿಶೇಷ ರಥದೊಂದಿಗೆ ಉತ್ಸವ ಜರುಗಿತು. ಉತ್ಸವದ ನಂತರ ಅನ್ನಸಂತರ್ಪಣೆ ಜರುಗಿತು.
    ಇದಕ್ಕೂ ಮುನ್ನ ಪ್ರಾತಃಕಾಲದಲ್ಲಿ ಶ್ರೀ ವೀರಾಂಜನೇಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿಯ ನಂತರ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯ ತೊಟ್ಟಿಲೋತ್ಸವ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts