ಮುಂಬೈ: ಬಾಲಿವುಡ್ನಲ್ಲಿ ಸೆಲೆಬ್ರಿಟಿಗಳನ್ನು ಕಾಡುವ ಪ್ರಮುಖರಲ್ಲಿ ಒಬ್ಬರೆಂದರೆ ಅದು ಪಾಪರಾಜಿಗಳು. ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನ ಇದೆ ಎಂಬುದನ್ನು ಮರೆತು ಕೆಲವೊಮ್ಮೆ ತುಂಬಾ ಅತಿರೇಕದ ವರ್ತನೆ ತೋರುತ್ತಾರೆ. ಎಲ್ಲೆಂದರಲ್ಲಿ ಫೋಟೋಗಾಗಿ ಮುಗಿ ಬೀಳುತ್ತಾರೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆಗಳು ಅನೇಕ ಸೆಲೆಬ್ರಿಗಳನ್ನು ಮುಜುಗರಕ್ಕೆ ದೂಡುತ್ತದೆ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೊರಗಡೆ ಕಂಡಾಗ ಪಾಪರಾಜಿಗಳು ಫೋಟೋ ತೆಗೆಯುವುದನ್ನು ನಾವು ಬಾಲಿವುಡ್ನಲ್ಲಿ ನೋಡಿದ್ದೇವೆ. ಇತ್ತೀಚೆಗೆ ಈ ಸಂಸ್ಕೃತಿ ಬೇರೆ ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟಿದೆ. ಬಾಲಿವುಡ್ನಲ್ಲಿ ನಟ-ನಟಿಯರು ಹೊರಗೆ ಕಾಲಿಟ್ಟರೆ ಸಾಕು ಪಾಪರಾಜಿಗಳು ಅವರ ಬೆನ್ನತ್ತಿ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳುತ್ತಾರೆ. ಈ ವೇಳೆ ಕೆಲ ಸೆಲೆಬ್ರಿಟಿಗಳು ಪಾಪರಾಜಿಗಳ ಮೇಲೆ ಕೋಪಿಸಿಕೊಳ್ಳುತ್ತಾರೆ. ಅಂತಹ ಒಂದು ಘಟನೆ ಇದೀಗ ಬೆಳಕಿಗೆ ಬಂದಿದೆ.
ಬಾಲಿವುಡ್ನಲ್ಲಿ ಅನನ್ಯಾ ಪಾಂಡೆ, ಜಾನ್ವಿ ಕಪೂರ್ ಹಾಗೂ ಅದಿತಿ ರಾವ್ ಹೈದರಿ ಮುಂತಾದ ಹಲವು ನಾಯಕಿಯರು ತಮ್ಮ ಬಾಯ್ಫ್ರೆಂಡ್ಗಳ ಜೊತೆ ಅಡ್ಡಾಡುವಾಗ ಪಾಪರಾಜಿಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಇದೇ ವೇಳೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಆದರೆ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಆ ಸಂದರ್ಭದಲ್ಲಿ ಕೇಳಿದ್ದರು ಎಂದು ಛಾಯಾಗ್ರಾಹಕರಾದ ಸ್ನೇಹ್ ಮತ್ತು ವಿಶಾಲ್ ಬಹಿರಂಗಪಡಿಸಿದ್ದಾರೆ. ಒಮ್ಮೆ ಕತ್ರಿನಾ ತಮ್ಮ ಫೋಟೋಗಳನ್ನು ತೆಗೆದುಕೊಳ್ಳಬೇಡಿ ಎಂದು ಕೇಳಿಕೊಂಡರು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಕತ್ರಿನಾ ಅವರ ಮ್ಯಾನೇಜರ್, ಮುಂದಿನ ಬಾರಿ ಕರೆ ಮಾಡುವುದಾಗಿ ನಮ್ಮ ಬಳಿ ಫೋನ್ ನಂಬರ್ ಪಡೆದುಕೊಂಡರು. ಬಳಿಕ ಯಶ್ ರಾಜ್ ಸ್ಟುಡಿಯೋಸ್ಗೆ ನಮ್ಮನ್ನು ಕರೆಸಿ ಒಳ್ಳೆ ಚಿತ್ರಗಳನ್ನು ನೀಡಿದರು. ಇದೀಗ ಕತ್ರಿನಾ ಮತ್ತು ವಿಕ್ಕಿ ಕುಶಾಲ್ ಮದುವೆಯಾಗಿದ್ದಾರೆ ಎಂದು ಸ್ನೇಹ್ ಮತ್ತು ವಿಶಾಲ್ ತಿಳಿಸಿದ್ದಾರೆ.
ನಾವು ಆದಿತ್ಯ ರಾಯ್ ಕಪೂರ್ ಜೊತೆ ಅನನ್ಯಾ ಅವರ ಚಿತ್ರಗಳನ್ನು ತೆಗೆದುಕೊಂಡಿದ್ದೆವು. ಆದರೆ ಆ ವೇಳೆ ಅವರ ಫೋಟೋಗಳನ್ನು ಸಹ ಡಿಲೀಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೀಗ ಅವರು ಸ್ನೇಹ್ ಮತ್ತು ವಿಶಾಲ್ ಹಾಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (ಏಜೆನ್ಸೀಸ್)
ಅರುಂಧತಿ ಚಿತ್ರದ ಬಾಲನಟಿ ಈಗ ಬೋಲ್ಡ್ ಬ್ಯೂಟಿ! ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ದಿವ್ಯಾ
ಕುತೂಹಲ ಮೂಡಿಸಿದೆ ಐಪಿಎಲ್ ಪ್ಲೇಆಫ್ ರೇಸ್; ಯಾರಿಗೆ ಚಾನ್ಸ್? ಇಲ್ಲಿದೆ ಎಲ್ಲ 10 ತಂಡಗಳ ಲೆಕ್ಕಾಚಾರ…