More

    ಉದಯವಾಗಲಿದೆ ಮತ್ತೊಂದು ರಾಜಕೀಯ ಪಕ್ಷ; ಮಾಜಿ ಮುಖ್ಯಮಂತ್ರಿಯಿಂದ ಘೋಷಣೆ

    ನವದೆಹಲಿ: ರಾಜ್ಯದಲ್ಲಿ ಉಪಚುನಾವಣೆ ಪ್ರಚಾರ ಚುರುಕುಗೊಂಡಿರುವ ಬೆನ್ನಿಗೇ ದೇಶದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯವಾಗುವುದು ಖಚಿತಗೊಂಡಿದೆ. ಮಾತ್ರವಲ್ಲದೆ, ಅದು ಆಡಳಿತಾರೂಢ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ವ್ಯಕ್ತವಾಗಿದೆ.

    ಅಂದಹಾಗೆ ಹೊಸದೊಂದು ರಾಜಕೀಯ ಪಕ್ಷ ಹುಟ್ಟುಹಾಕಲು ಮುಂದಾಗಿರುವುದು ಮತ್ಯಾರೂ ಅಲ್ಲ.. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನದಿಂದ ಇಳಿದಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್. ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆಯಾಗಲಿದೆ.

    ಇದನ್ನೂ ಓದಿ: ಮನೆ ಬೀಗ-ಬಾಗಿಲು ಮುರಿಯದೆ, ಕನ್ನ ಹಾಕದೆ ಕಳವು ಮಾಡುತ್ತಿದ್ದ ಕಳ್ಳನ ಬಂಧನ; ಸಂಬಂಧಿಕರ ಮನೆಯನ್ನೂ ಬಿಡಲಿಲ್ಲ..

    ಹೊಸ ಪಕ್ಷದ ಸ್ಥಾಪನೆ ಬಗ್ಗೆ ಕ್ಯಾಪ್ಟನ್​ ಅಮರಿಂದ್ ಅವರ ಮಾಧ್ಯಮ ಸಲಹೆಗಾರರಾದ ರವೀನ್​ ತುಕ್ರಾಲ್​ ವಿಷಯ ಬಹಿರಂಗ ಪಡಿಸಿದ್ದಾರೆ. ಪಂಜಾಬ್​ನಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿರುವ ಅವರು ಪಂಜಾಬ್​ ಹಾಗೂ ಅಲ್ಲಿನ ಜನರ ಮತ್ತು ರೈತರ ಹಿತಕ್ಕಾಗಿ ಹೊಸ ಪಕ್ಷ ರಚಿಸಲಾಗುವುದು ಎಂದಿದ್ದಾರೆ.

    ಮೂರು ಪ್ರಮುಖ ರೈತಕಾಯ್ದೆಗಳ ವಿರುದ್ಧ ವರ್ಷಕ್ಕೂ ಅಧಿಕ ಕಾಲದಿಂದ ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕಾಯ್ದೆಗೆ ಸಂಬಂಧಿಸಿದಂತೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ನಿರ್ಧಾರವನ್ನು ಕೈಗೊಂಡರೆ, ಮುಂದಿನ 2022ರ ಚುನಾವಣೆಯಲ್ಲಿ ಬಿಜೆಪಿ ಜತೆ ಕೈಜೋಡಿಸುವ ಚಿಂತನೆಯೂ ಇದೆ ಎಂಬುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್)

    ಹತ್ತು ತಿಂಗಳ ಮಗು ಅನುಮಾನಾಸ್ಪದ ಸಾವು; ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts