More

    ನಿಮ್ಮ ಊರಿಗೆ ನಿಮ್ಮ ಅಪ್ಪು … ಏನಿದು ‘ಯುವರತ್ನ’ನ ಹೊಸ ಕಾನ್ಸೆಪ್ಟು?

    ಬೆಂಗಳೂರು: ಪುನೀತ್​ ರಾಜಕುಮಾರ್​ ನಿಮ್ಮ ಊರಿಗೆ ಬರುವುದಕ್ಕೆ ಸಜ್ಜಾಗಿದ್ದಾರೆ. ಮಾರ್ಚ್​​ 21ರಿಂದ 23ರವರೆಗೂ ಮೂರು ದಿನಗಳ ಕಾಲ ಅವರು ‘ಯುವರತ್ನ’ ಚಿತ್ರತಂಡದ ಜತೆಗೆ ಹಲವು ಊರುಗಳಿಗೆ ಭೇಟಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಗೆ ವಿಷ್​ ಮಾಡಬೇಕಿಲ್ಲ; ತಾಯಿಯ ತ್ಯಾಗವನ್ನು ನೆನಪಿಸಿಕೊಂಡ ನಟ ದರ್ಶನ್​

    ಪುನೀತ್​ ತಾವು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಮತ್ತು ಯಾರೂ ಮನೆಯ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಹೇಗೂ, ಮಾರ್ಚ್​ 20ರಂದು ಮೈಸೂರಿನಲ್ಲಿ ‘ಯುವರತ್ನ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಇರುವುದರಿಂದ ಅಭಿಮಾನಿಗಳನ್ನು ಅಲ್ಲೇ ಭೇಟಿಯಾಗುವುದಾಗಿ ಹೇಳಿದ್ದರು. ಆದರೆ, ಮೈಸೂರಿನಲ್ಲಿ ನಡೆಯಬೇಕಿದ್ದ ಪ್ರೀ-ರಿಲೀಸ್​ ಇವೆಂಟ್​ ಇದೀಗ ರದ್ದಾಗಿದೆ.

    ಈ ಕುರಿತು ಇಂದು ಸಂಜೆ ಫೇಸ್​ಬುಕ್​ ಲೈವ್​ ಬಂದು ಮಾತನಾಡಿದ ಪುನೀತ್​, ‘ನಾವು ಮೈಸೂರಿನಲ್ಲಿ ‘ಯುವರತ್ನ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಇದೆ ಎಂದು ಘೋಷಿಸಿದಾಗ, ಹಲವು ಅಭಿಮಾನಿಗಳು ತಮ್ಮ ಊರಿನಲ್ಲೂ ಏನಾದರೂ ಕಾರ್ಯಕ್ರಮ ಮಾಡಿ, ನಮ್ಮ ಊರಿಗೂ ಬನ್ನಿ ಎಂದು ಕರೆಯುತ್ತಿದ್ದಾರೆ. ಅದೇ ಕಾರಣಕ್ಕೆ, ನಾನು ಮತ್ತು ನಮ್ಮ ತಂಡ ಹಲವು ಊರುಗಳಿಗೆ ಭೇಟಿ ನೀಡಲಿದ್ದೇವೆ’ ಎಂದು ಪುನೀತ್​ ಹೇಳಿಕೊಂಡಿದ್ದಾರೆ.

    ಪುನೀತ್​ ಏನೋ ಮೂರು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಆದರೆ, ಯಾವಾಗ ಯಾವ ಊರಿಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯಕ್ಕೆ ಪ್ರವಾಸ ಮಾಡುವ ಬಗ್ಗೆ ಮಾತ್ರ ಚರ್ಚೆ ನಡೆದಿದ್ದು, ಇನ್ನೂ ಯಾವ ಊರಿಗೆ ಎಷ್ಟು ಹೊತ್ತಿಗೆ ಹೋಗಬೇಕೆಂಬ ತೀರ್ಮಾನವಾಗಿಲ್ಲವಂತೆ. ಈ ಕುರಿತು ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಈ ಕುರತು ಮತ್ತಷ್ಟು ಮಾಹಿತಿ ನೀಡುವುದಾಗಿ ಹೇಳುತ್ತಾರೆ. ಪುನೀತ್​.

    ಇದನ್ನೂ ಓದಿ: ಪರಿಸ್ಥಿತಿ ಕೈ ಮೀರಲು ಬಿಡಬಾರದು: ಪ್ರಶಾಂತ್​ ಸಂಬರಗಿಗೆ​ ಕಿಚ್ಚ ಸುದೀಪ್​ ಖಡಕ್​ ವಾರ್ನಿಂಗ್​..!

    ಅಂದಹಾಗೆ, ಪುನೀತ್​ ಅಭಿನಯದ ‘ಯುವರತ್ನ’ ಚಿತ್ರವು ಏಪ್ರಿಲ್​ ಒಂದರಂದು ಕರ್ನಾಟಕವಲ್ಲದೆ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಲಿದೆ.

    ಇನ್​ಸ್ಟಾಗ್ರಾಂನಲ್ಲಿ ರಾಕಿಭಾಯ್ ಹವಾ! ಇದು ಕೆಜಿಎಫ್ ಎಫೆಕ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts