More

    ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಗೆ ವಿಷ್​ ಮಾಡಬೇಕಿಲ್ಲ; ತಾಯಿಯ ತ್ಯಾಗವನ್ನು ನೆನಪಿಸಿಕೊಂಡ ನಟ ದರ್ಶನ್​

    ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರು ಹಾಸನದಲ್ಲಿ ಇಂದು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಆಗಮಸಿ, ನೆರೆದಿದ್ದ ಅಪಾರ ಅಭಿಮಾನಿಗಳನ್ನು ಖುಷಿ ಪಡಿಸಿದರು. ಮಾತ್ರವಲ್ಲ ಮಹಿಳೆಯರ ಕುರಿತು ತಮ್ಮ ಅನಿಸಿಕೆಗಳನ್ನೂ ಹೇಳಿಕೊಂಡರು.

    ಸಮಾರಂಭದಲ್ಲಿ ಮಾತನಾಡುತ್ತ ತಮ್ಮ ತಾಯಿಯ ತ್ಯಾಗವನ್ನು ಜ್ಞಾಪಿಸಿಕೊಂಡ ನಟ ದರ್ಶನ್, ಬೆಳಗ್ಗೆ ಎದ್ದರೆ ರಾತ್ರಿ ಮಲಗುವವರೆಗೂ ಅಮ್ಮನೇ ತಲೆಯಲ್ಲಿ ಇರುತ್ತಾಳೆ. ಇದು ಎಲ್ಲ ಗಂಡು ಮಕ್ಕಳಿಗೂ ಅನ್ವಯ ಎಂದರು. ನನ್ನ ತಾಯಿ ಹುಟ್ಟಿದ್ದು ಎಲ್ಲೋ, ತಂದೆ ಹುಟ್ಟಿದ್ದು ಎಲ್ಲೋ, ಆದ್ರೆ ಅವರಿಬ್ಬರು ಒಂದಾದರು, ನಮಗೆ ಜನ್ಮ ನೀಡಿದರು, ನನ್ನ ತಂದೆಗೆ ಕಿಡ್ನಿ ಫೇಲ್ಯೂರ್​ ಆದಾಗ ನನ್ನ ಅಮ್ಮ ತಂದೆಗೆ ಒಂದು ಕಿಡ್ನಿ ನೀಡಿದರು ಎಂಬುದನ್ನೆಲ್ಲ ನೆನಪಿಸಿಕೊಂಡ ದರ್ಶನ್​, ಹೆಣ್ಣು ಎಲ್ಲ ಕಡೆಯೂ ಇರುತ್ತಾಳೆ, ನಾವೆಲ್ಲ ಸದಾ ಅವರ ಋಣದಲ್ಲೇ ಇರ್ತೀವಿ. ಹೀಗಾಗಿ ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರಿಗೆ ವಿಷ್ ಮಾಡಬೇಕಂತಿಲ್ಲ ಎಂದು ಹೇಳಿದರು.

    ಹಾಸನದಲ್ಲಿಂದು ಮಹಿಳಾ ದಿನಾಚರಣೆ; ಅಚ್ಚರಿ ಮೂಡಿಸಿದ ನಟ ದರ್ಶನ್​ ಆಗಮನ!

    ಹುಡುಗಿಯ ಹುಡುಗಾಟಕ್ಕೆ ಕೆರಳಿದ ಆಡು; ಹಿಂದಿನಿಂದ ಬಿತ್ತೊಂದು ಡಿಚ್ಚಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts