More

    ‘ಕ್ಯಾಂಪಸ್​ ಕ್ರಾಂತಿ’ಗೆ ಜತೆಯಾದ ಪುನೀತ್​ ರಾಜಕುಮಾರ್​

    ಬೆಂಗಳೂರು: ಈ ಹಿಂದೆ ‘ಸ್ಟೂಡೆಂಟ್ಸ್​’ ಮತ್ತು ‘ಬಿಂದಾಸ್​ ಗೂಗ್ಲಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್​, ಲಾಕ್​ಡೌನ್​ ನಂತರ ‘ಕ್ಯಾಂಪಸ್​ ಕ್ರಾಂತಿ’ ಎಂಬ ಹೊಸ ಚಿತ್ರ ಪ್ರಾರಂಭಿಸಿದ್ದು ನೆನಪಿರಬಹುದು. ಈಗ ಆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಚೆಗೆ ನಟ ಪುನೀತ್​ ರಾಜಕುಮಾರ್​ ಅವರು ಚಿತ್ರದ ಟೈಟಲ್​ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಟೀ ಬ್ರೇಕ್​ನಲ್ಲಿ ನಟ ಸತೀಶ್​ ನೀನಾಸಂ ಮಾಡೋ ಕೆಲಸ ಒಂದೊಂದಲ್ಲ ಬಿಡಿ…

    ಇತ್ತೀಚೆಗೆ ರವಿಶಂಕರ್​ ಗುರೂಜಿ ಅವರ ಆರ್ಟ್​ ಆಫ್​ ಲಿವಿಂಗ್​ ಆಶ್ರಮದಲ್ಲಿ ಪುನೀತ್​ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡದವರು ಭೇಟಿಕೊಟ್ಟು, ಟೈಟಲ್​ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ.

    ‘ಕ್ಯಾಂಪಸ್​ ಕ್ರಾಂತಿ’ ಎಂಬ ಹೆಸರೇ ಹೇಳುವಂತೆ ಕಾಲೇಜಿನಲ್ಲಾಗುವ ಕ್ರಾಂತಿಯ ಸುತ್ತ ಈ ಚಿತ್ರ ಸುತ್ತುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಬಾರ್ಡರ್​ನಲ್ಲಿ ನಡೆಯುವ ಒಂದು ಘಟನೆ ಇಟ್ಟುಕೊಂಡು, ಅದಕ್ಕೆ ಕಾಲೇಜ್​ ಹುಡುಗರು ಹೇಗೆ ಕಾರಣವಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಕಾಲೇಜ್​ ಹುಡುಗರು ಈ ಕ್ರಾಂತಿಗೆ ಕಾರಣವಾಗುವುದರಿಂದ, ಚಿತ್ರಕ್ಕೆ ಕ್ಯಾಂಪಸ್​ ಕ್ರಾಂತಿ ಎಂಬ ಹೆಸರನ್ನು ಇಡಲಾಗಿದೆ.

    ಲಾಕ್​ಡೌನ್​ ಸಮಯದಲ್ಲಿ ಈ ಚಿತ್ರದ ಕಥೆಯನ್ನು ಬರೆದಿದ್ದ ಸಂತೋಷ್​, ಕಳೆದ ಎರಡು ತಿಂಗಳುಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. ಹಿಂದಿನ ಚಿತ್ರಗಳಂತೆ, ಈ ಬಾರಿಯೂ ಅವರು ಒಂದಿಷ್ಟು ಹೊಸಬರನ್ನು ಪರಿಚಯಿಸಿದ್ದು, ಮಿಕ್ಕಂತೆ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ನಟನಾಗಿದ್ದ ಆಯುಷ್ಮಾನ್​ ಖುರಾನಾ ಇದೀಗ ‘ಡಾಕ್ಟರ್’ ಆಗೋಕೆ ಹೊರಟಿದ್ದಾರೆ!

    ‘ಕ್ಯಾಂಪಸ್​ ಕ್ರಾಂತಿ’ ಚಿತ್ರದ ಚಿತ್ರೀಕರಣವು ಬೆಂಗಳೂರಲ್ಲದೆ ಬೆಳಗಾವಿ ಮುಂತಾದ ಕಡೆ ನಡೆದಿದ್ದು, ಚಿತ್ರಕ್ಕೆ ವಿ. ಮನೋಹರ್ ನಾಲ್ಕು ಹಾಡುಗಳನ್ನು ಕಂಪೋಸ್​ ಮಾಡಿದ್ದಾರೆ.

    VIDEO| ಲಂಡನ್​ನಿಂದ ಮರಳಿದ ಹರ್ಷಿಕಾ ಪೂಣಚ್ಚ; ಕ್ವಾರಂಟೈನ್ ಬಗ್ಗೆ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts