ಬೆಂಗಳೂರು: ಡಾ. ರಾಜಕುಮಾರ್ ಕುಟುಂಬ ನಟನೆಯ ಜತೆಗೆ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನೂ ನಿರ್ಮಾಣ ಮಾಡಿದೆ. ವಜ್ರೇಶ್ವರಿ ಕಂಬೈನ್ಸ್ ಹೆಸರಲ್ಲಿ ಪಾರ್ವತಮ್ಮ ರಾಜಕುಮಾರ್ ಆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ನಿರ್ಮಾಣ ಸಂಪ್ರದಾಯ ಈಗಲೂ ಮುಂದುವರಿದಿದ್ದು, ಕೇವಲ ಸಿನಿಮಾಗಳನ್ನಷ್ಟೇ ಅಲ್ಲ ಧಾರಾವಾಹಿಗಳಿಗೂ ರಾಜ್ ಕುಟುಂಬ ಬಂಡವಾಳ ಹೂಡುತ್ತಿದೆ. ಇದೀಗ ಪುನೀತ್ ಮೊದಲ ಬಾರಿ ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೌದು, ಇಲ್ಲಿಯವರೆಗೂ ಪಿಆರ್ಕೆ ಪ್ರೊಡಕ್ಷನ್ಸ್ನಲ್ಲಿ ಕೇವಲ ಸಿನಿಮಾ ನಿರ್ಮಾಣ ಮಾಡಿಕೊಂಡು ಬಂದಿದ್ದ ಪುನೀತ್, ಇದೀಗ ಮೊದಲ ಬಾರಿ ಧಾರಾವಾಹಿಗೂ ನಿರ್ಮಾಪಕರಾಗುತ್ತಿದ್ದಾರೆ. ಆ ಧಾರಾವಾಹಿ ಹೆಸರು ‘ನೇತ್ರಾವತಿ’. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಭಕ್ತೆಯಾಗಿ ನೇತ್ರಾವತಿಯ ಕಥೆ ಸಾಗಲಿದ್ದು, ಭಕ್ತಿಪ್ರಧಾನ ಧಾರಾವಾಹಿ ಇದಾಗಿರಲಿದೆಯಂತೆ. ಸದ್ಯಕ್ಕೆ ಬಹುತೇಕ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡಿರುವ ತಂಡ, ಶೀಘ್ರದಲ್ಲಿ ಪ್ರಸಾರವಾಗಲಿರುವ ವಾಹಿನಿ ಮತ್ತು ತಾರಾಗಣದ ಬಗ್ಗೆ ಮಾಹಿತಿ ಬಿಟ್ಟುಕೊಡಲಿದೆ.
ಯುವರತ್ನನಿಂದ ಪಾಠಶಾಲಾ ಹಾಡು: ಏ.1ರಂದು ಕನ್ನಡ ಮತ್ತು ತೆಲುಗಿನಲ್ಲಿ ಪುನೀತ್ ನಟನೆಯ ‘ಯುವರತ್ನ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ನಿಮಿತ್ತ ಚಿತ್ರತಂಡ ಒಂದಾದ ನಂತರ ಒಂದು ಹಾಡುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬುಧವಾರ ‘ಪಾಠಶಾಲಾ’ ಎಂಬ ಹಾಡು ಹೊರ ಬಂದಿದ್ದು, ಗುರಿ ತೋರುವ ಗುರುವಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ್ದಾರೆ. ಥಮನ್ ಸಂಗೀತ ನಿರ್ದೇಶನದ ಈ ಹಾಡಿಗೆ, ನಿರ್ದೇಶಕ ಸಂತೋಷ್ ಆನಂದ್ರಾಮ್ ಸಾಹಿತ್ಯ ಬರೆದಿದ್ದಾರೆ. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ವಿುಸಿದೆ.
ಶಿವಣ್ಣ, ರಾಘಣ್ಣ ಬಳಿಕ ಅಪ್ಪು: ಈಗಾಗಲೇ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ನಟನೆಯ ಜತೆಗೆ ಧಾರಾವಾಹಿ ನಿರ್ಮಾಣಕ್ಕೂ ಇಳಿದಿದ್ದಾರೆ. ‘ಮಾನಸ ಸರೋವರ’ ಧಾರಾವಾಹಿಯನ್ನು ಶಿವರಾಜ್ಕುಮಾರ್ ಶ್ರೀಮುತ್ತು ಸಿನಿ ಸರ್ವಿಸಸ್ ಮೂಲಕ ನಿರ್ಮಾಣ ಮಾಡಿದರೆ, ರಾಘವೇಂದ್ರ ರಾಜಕುಮಾರ್ ‘ಜೀವ ಹೂವಾಗಿದೆ’ ಧಾರಾವಾಹಿ ನಿರ್ವಿುಸಿದ್ದರು. ಇದೀಗ ಮೊದಲ ಬಾರಿ ಪವರ್ಸ್ಟಾರ್ ಪುನೀತ್ ರಾಜಕುಮಾರ್ ‘ನೇತ್ರಾವತಿ’ ಶೀರ್ಷಿಕೆಯ ಭಕ್ತಿ ಪ್ರಧಾನ ಧಾರಾವಾಹಿಯ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಈಗಾಗಲೇ ನಾಲ್ಕೈದು ಚಿತ್ರಗಳು ನಿರ್ಮಾಣವಾಗಿ ಬಿಡುಗಡೆ ಆಗಿವೆ. ಇನ್ನು ಕೆಲವು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ.
ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…
ಒಂದೇ ದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಇಬ್ಬರು ವಿದ್ಯಾರ್ಥಿಗಳ ಸಾವು!