ಬಾಗಲಕೋಟೆ: ಪುನೀತ್ ರಾಜಕುಮಾರ್ ಸಮಾಧಿಯನ್ನು ನೋಡಲು ರಾಜ್ಯದ ಮೂಲೆಮೂಲೆಯಿಂದ ಅಭಿಮಾನಿಗಳು ಬರುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟನ ಸಮಾಧಿಯನ್ನು ನೋಡಲು ಸುಮಾರು 600 ಕಿ.ಮೀ. ದೂರ ಸೈಕಲ್ನಲ್ಲೇ ಪ್ರಯಾಣ ಆರಂಭಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ ಎಂಬಾತನೇ ಈ ಅಭಿಮಾನಿ. ಸೈಕಲ್ಗೆ ಕನ್ನಡ ಧ್ವಜ ಕಟ್ಟಿಕೊಂಡು, ಹಿಂದೆ-ಮುಂದೆ ಪುನೀತ್ ರಾಜಕುಮಾರ್ ಭಾವಚಿತ್ರ ಕಟ್ಟಿಕೊಂಡು ಈತ ಸೈಕಲ್ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದಾನೆ. ಸಮಾಧಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ರಾಘವೇಂದ್ರ ಮರಳಲಿದ್ದಾರೆ.
ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಪಿಎ ಎಂದು ಹೇಳಿ ಕೈಕೊಟ್ಟ ‘ವಿಶ್ವಾಸ’; ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂ. ಮೋಸ
ಅವರು ಮೃತಪಟ್ಟ ದಿನವೇ ಹೋಗಬೇಕೆಂದುಕೊಂಡಿದ್ದೆ. ಆದರೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಈಗ ಸೈಕಲ್ ಯಾತ್ರೆ ಹೊರಟಿದ್ದೇನೆ ಎಂದು ಇವರು ತಿಳಿಸಿದ್ದಾರೆ. ಹುನಗುಂದ, ಇಳಕಲ್ , ಚಿತ್ರದುರ್ಗ ಮಾರ್ಗವಾಗಿ ಇವರು ಬೆಂಗಳೂರಿಗೆ ತಲುಪಲಿದ್ದಾರೆ.
ಮದ್ವೆ ಆದ್ಮೇಲೆ ಫಸ್ಟ್ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್
ಚಲಿಸುತ್ತಿದ್ದ ರೈಲಿನಿಂದ ಬಿದ್ದಾಕೆ ಸ್ವಲ್ಪದರಲ್ಲೇ ಬಚಾವ್; ‘ತ್ರಿಮೂರ್ತಿ’ಗಳಂತೆ ಧಾವಿಸಿ ರಕ್ಷಿಸಿದ ರೈಲ್ವೆ ಪೊಲೀಸರು