ಚೆನ್ನೈ : ಚೆಕ್ಪೋಸ್ಟ್ನಲ್ಲಿ ಡ್ಯೂಟಿ ಮಾಡುವಾಗ ವ್ಯಕ್ತಿಯೊಬ್ಬನಿಗೆ ಥಳಿಸಿ ಅವನ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ತಮಿಳುನಾಡಿನ ಸೇಲಂನ ಎಥಾಪುರ್ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಪೆರಿಯಾಸ್ವಾಮಿ, ಬಂಧಿತ ಆರೋಪಿ.
ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಮಟ್ಟಿರುವ 45 ವರ್ಷ ವಯಸ್ಸಿನ ಮುರುಗೇಶನ್, ನಿನ್ನೆ ಇಬ್ಬರು ಸ್ನೇಹಿತರೊಂದಿಗೆ ಪಕ್ಕದ ಹಳ್ಳಿಗೆ ಹೋಗಿ ಮದ್ಯ ಸೇವಿಸಿ ಹಿಂತಿರುಗುತ್ತಿದ್ದ. ಅವರನ್ನು ಸೇಲಂ ನಗರದ ಚೆಕ್ಪೋಸ್ಟ್ನಲ್ಲಿ ಪೊಲೀಸರು ತಡೆದರು. ವಾದವಿವಾದದ ನಂತರ ಮುರುಗೇಶನ್ನನ್ನು ಪೊಲೀಸರು ಥಳಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಭಾರತದ ಕಾನೂನು ಪಾಲಿಸಲು ಮೀನಮೇಷ- ನಿಷೇಧವಾಗುತ್ತಾ ವಾಟ್ಸ್ಆ್ಯಪ್? ಕೋರ್ಟ್ ಬಾಗಿಲಿಗೆ ಟೆಕಿ
ಈ ಘಟನೆಯ ಬಗೆಗಿನ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿತ್ತು. ಮೃತ ಮುರುಗೇಶನ್ನೊಂದಿಗಿದ್ದ ವ್ಯಕ್ತಿಯು ಅವನನ್ನು ಬಿಟ್ಟುಬಿಡಿ ಎಂದು ಗೋಗರೆದರೂ, ಅವನನ್ನು ಹೊಡೆಯುತ್ತಿರುವುದು. ಮಾತನಾಡಲೂ ಕಷ್ಟುಪಡುತ್ತಿದ್ದ ಮುರುಗೇಶನ್, ನಂತರ ರಸ್ತೆಯಲ್ಲೇ ಮೂರ್ಛೆ ಹೋಗುವುದು ವಿಡಿಯೋದಲ್ಲಿ ದಾಖಲಾಗಿತ್ತು ಎನ್ನಲಾಗಿದೆ.
ಸಂತ್ರಸ್ತನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಸೇಲಂನ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. (ಏಜೆನ್ಸೀಸ್)