ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿರುವುದನ್ನು ವಿರೋಧಿಸಿ ಒಂದರ ಮೇಲೊಂದರಂತೆ ಬೆಂಗಳೂರು ಹಾಗೂ ಕರ್ನಾಟಕ ಬಂದ್ ನಡೆಸಿದ್ದರೂ ಕಾವೇರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದು ನಿಂತಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಇಂದು ಕೆಆರ್ಎಸ್ ಡ್ಯಾಮ್ಗೇ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನೆ ನೇತೃತ್ವದಲ್ಲಿ ಇಂದು ಮಂಡ್ಯಕ್ಕೆ ಬಂದಿದ್ದ ಹೋರಾಟಗಾರರು, ಕೆಆರ್ಎಸ್ ಡ್ಯಾಮ್ ಎದುರು ಪ್ರತಿಭಟನೆ ನಡೆಸಿದರು. ಬೆಂಗಳೂರಿನಿಂದ ಬಂದಿದ್ದ ಈ ಹೋರಾಟಗಾರರು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ನಾನು ಈ 2 ವಿಷಯಗಳಲ್ಲಿ ಇನ್ನೂ ಶಿಸ್ತು ರೂಢಿಸಿಕೊಳ್ಳಬೇಕಾಗಿದೆ: ಪ್ರಧಾನಿ ನರೇಂದ್ರ ಮೋದಿ
ಕನ್ನಡ ಬಾವುಟ ಹಿಡಿದು ಬಂದಿದ್ದ ಈ ಹೋರಾಟಗಾರರು ಬಳಿಕ ಕೆಆರ್ಎಸ್ ಡ್ಯಾಮ್ನ ಮುಖ್ಯದ್ವಾರದ ಬಳಿ ತೆರಳಲು ನುಗ್ಗಿದರು. ಆ ಮೂಲಕ ಕೆಆರ್ಎಸ್ ಡ್ಯಾಮ್ಗೇ ಮುತ್ತಿಗೆ ಹಾಕುವ ಪ್ರಯತ್ನ ಅವರದ್ದಾಗಿತ್ತು. ಆದರೆ ಕೂಡಲೇ ಎಚ್ಚೆತ್ತ ಪೊಲೀಸರು ಅವರನ್ನು ಗೇಟ್ ಬಳಿಯೇ ತಡೆದು, ಬಂಧಿಸಿದರು. ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದ ಅವರನ್ನು ಪೊಲೀಸ್ ವಾಹನದಲ್ಲಿ ತುಂಬಿ ಕರೆದೊಯ್ಯಲಾಯಿತು.
ಓ.. ಮತ್ತೆ ಸದ್ದು ಮಾಡುತ್ತಿರುವ ‘ಕಾಂತಾರ’; ವರ್ಷದ ಬಳಿಕವೂ ನೆನಪಿಸಿಕೊಳ್ಳುತ್ತಿರುವ ಜನರು..