More

    ಬೆಂಗಳೂರು-ಕರ್ನಾಟಕ ಬಂದ್ ಬಳಿಕವೂ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ: ಕೆಆರ್​ಎಸ್ ಡ್ಯಾಮ್​ಗೇ ಮುತ್ತಿಗೆ ಯತ್ನ

    ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿರುವುದನ್ನು ವಿರೋಧಿಸಿ ಒಂದರ ಮೇಲೊಂದರಂತೆ ಬೆಂಗಳೂರು ಹಾಗೂ ಕರ್ನಾಟಕ ಬಂದ್​ ನಡೆಸಿದ್ದರೂ ಕಾವೇರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದು ನಿಂತಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಇಂದು ಕೆಆರ್​​ಎಸ್​ ಡ್ಯಾಮ್​ಗೇ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

    ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನೆ ನೇತೃತ್ವದಲ್ಲಿ ಇಂದು ಮಂಡ್ಯಕ್ಕೆ ಬಂದಿದ್ದ ಹೋರಾಟಗಾರರು, ಕೆಆರ್​ಎಸ್ ಡ್ಯಾಮ್ ಎದುರು ಪ್ರತಿಭಟನೆ ನಡೆಸಿದರು. ಬೆಂಗಳೂರಿನಿಂದ ಬಂದಿದ್ದ ಈ ಹೋರಾಟಗಾರರು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ಇದನ್ನೂ ಓದಿ: ನಾನು ಈ 2 ವಿಷಯಗಳಲ್ಲಿ ಇನ್ನೂ ಶಿಸ್ತು ರೂಢಿಸಿಕೊಳ್ಳಬೇಕಾಗಿದೆ: ಪ್ರಧಾನಿ ನರೇಂದ್ರ ಮೋದಿ

    ಕನ್ನಡ ಬಾವುಟ ಹಿಡಿದು ಬಂದಿದ್ದ ಈ ಹೋರಾಟಗಾರರು ಬಳಿಕ ಕೆಆರ್​ಎಸ್​ ಡ್ಯಾಮ್​ನ ಮುಖ್ಯದ್ವಾರದ ಬಳಿ ತೆರಳಲು ನುಗ್ಗಿದರು. ಆ ಮೂಲಕ ಕೆಆರ್​ಎಸ್​ ಡ್ಯಾಮ್​ಗೇ ಮುತ್ತಿಗೆ ಹಾಕುವ ಪ್ರಯತ್ನ ಅವರದ್ದಾಗಿತ್ತು. ಆದರೆ ಕೂಡಲೇ ಎಚ್ಚೆತ್ತ ಪೊಲೀಸರು ಅವರನ್ನು ಗೇಟ್​ ಬಳಿಯೇ ತಡೆದು, ಬಂಧಿಸಿದರು. ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದ ಅವರನ್ನು ಪೊಲೀಸ್ ವಾಹನದಲ್ಲಿ ತುಂಬಿ ಕರೆದೊಯ್ಯಲಾಯಿತು.

    ಓ.. ಮತ್ತೆ ಸದ್ದು ಮಾಡುತ್ತಿರುವ ‘ಕಾಂತಾರ’; ವರ್ಷದ ಬಳಿಕವೂ ನೆನಪಿಸಿಕೊಳ್ಳುತ್ತಿರುವ ಜನರು..

    ಲಕ್ಷುರಿ ಕಾರಲ್ಲಿ ಬಂದು ಸೊಪ್ಪು ಮಾರಿದ ರೈತ!; ಮಾರ್ಕೆಟ್​ಗೆ ಬರ್ತಿದ್ದಂತೆ ಪಂಚೆ ಬಿಚ್ಚಿ ವ್ಯಾಪಾರಕ್ಕಿಳಿದ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts