ಬೆಂಗಳೂರು: ಸ್ಯಾಂಡಲ್ವುಡ್ನ ಜನಪ್ರಿಯ ಸಂಭಾಷಣೆಕಾರರ ಪೈಕಿ ಪ್ರಶಾಂತ್ ರಾಜಪ್ಪ ಸಹ ಒಬ್ಬರು. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಪ್ರಶಾಂತ್ ರಾಜಪ್ಪ, ಈಗ ನಿರ್ದೇಶಕರಾಗುವುದಕ್ಕೆ ಹೊರಟಿದ್ದಾರೆ. ರಿಷಿ ಅಭಿನಯದ ಹೊಸ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: 300 ಕೇಂದ್ರಗಳಲ್ಲಿ ಹಾಫ್ ಸೆಂಚ್ಯುರಿ ಬಾರಿಸಿದ ‘ಕಾಂತಾರ’
ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸಂತೆ. ಅದೀಗ ನನಸಾಗುವ ಹಂತಕ್ಕೆ ಬಂದಿದೆ. ಇದಕ್ಕೂ ಮುನ್ನ ಗುರುಪ್ರಸಾದ್, ಪಿ.ಸಿ. ಶೇಖರ್, ಮುಂತಾದವರ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿರುವ ಪ್ರಶಾಂತ್, ಈಗ ರಿಷಿ ಅಭಿನಯದ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸುವುದರ ಜತೆಗೆ ನಿರ್ದೇಶಕರಾಗುತ್ತಿದ್ದಾರೆ.
‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಿಷಿ ಈ ಬಾರಿ ಕಾಮಿಡಿ ಎಮೋಷನಲ್ ಡ್ರಾಮಾಗೆ ಗ್ರೀನ್ ಸಿಗ್ನಲ್ ನೀಡದ್ದಾರೆ. ಈ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್ನಲ್ಲಿ ಸಿನಿಮಾದ ಮುಹೂರ್ತ ನಡೆಯಲಿದೆಯಂತೆ.
ಇದನ್ನೂ ಓದಿ: ತಮನ್ನಾ ಮದುವೆಯಂತೆ! ಅಭಿಮಾನಿಗಳಿಗೆ ಹುಡುಗನ ದರ್ಶನ ಮಾಡಿಸಿದ ನಟಿ
ಡಿಸೆಂಬರ್ನಲ್ಲಿ ಚಿತ್ರದ ಮುಹೂರ್ತವಾದರೂ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾದ ಶೀರ್ಷಿಕೆ ಮತ್ತು ತಾರಾಬಳಗವನ್ನು ಬಹಿರಂಗಗೊಳಿಸುವ ಐಡಿಯಾ ಚಿತ್ರತಂಡದ್ದು.
ನಟಿ ರಶ್ಮಿಕಾ ಮಂದಣ್ಣ ಬಳಿ ಕ್ಷಮೆಯಾಚಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್: ಕಾರಣ ಈ ಒಂದು ವಿಡಿಯೋ….