More

    ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಡ್ರಗ್ಸ್​ ಮಾಫಿಯಾ ಸದ್ದು; ನಿರ್ಮಾಪಕರೊಬ್ಬರ ಕಚೇರಿ ಮೇಲೆ ಪೊಲೀಸರ ದಾಳಿ

    ಬೆಂಗಳೂರು: ಬೂದಿಮುಚ್ಚಿದ ಕೆಂಡದಂತೆ ಕೆಲದಿನಗಳ ಮಟ್ಟಿಗೆ ಹೊಗೆಯಾಡುತ್ತಿದ್ದ ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಇದೀಗ ಮತ್ತೆ ಧಗ್ಗೆಂದು ಬೆಂಕಿ ಹೊತ್ತಿಕೊಂಡಿದೆ. ಡ್ರಗ್ಸ್​ ಮಾಫಿಯಾಗೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಸಂಚಲನ ಉಂಟಾಗಿದ್ದು, ನಿರ್ಮಾಪಕರೊಬ್ಬರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಅವರಿಗೆ ಸುತ್ತಿಕೊಂಡಿದ್ದ ಡ್ರಗ್ಸ್ ಮಾಫಿಯಾ ಪ್ರಕರಣ ಕೆಲದಿನಗಳ ಮಟ್ಟಿಗೆ ತಣ್ಣಗಾದಂತೆ ಅನಿಸಿದರೂ ಇದೀಗ ನಿರ್ಮಾಪಕರೊಬ್ಬರಿಗೆ ಸುತ್ತಿಕೊಳ್ಳುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಕಾವೇರಿಸಿದೆ.

    ನಿರ್ಮಾಪಕ ಶಂಕರೇಗೌಡ ಅವರು ಈಗ ಡ್ರಗ್ಸ್​ ಮಾಫಿಯಾ ಸುಳಿಗೆ ಸಿಲುಕಿದ್ದು, ಗೋವಿಂದಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಂಜಯನಗರದ ಆರ್​ಎಂವಿ ಕ್ಲಬ್ ಬಳಿ ನಾಲ್ಕಂತಸ್ತಿನ ಕಟ್ಟದಲ್ಲಿ ಇರುವ ಕಚೇರಿ ಮೇಲೆ ದಾಳಿ ಮಾಡಿರುವ ಪೊಲೀಸರು, ಕಚೇರಿ ಹಾಗೂ ಕಾರುಗಳ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ಮನೆಯಲ್ಲಿದ್ದಾಗ ಸರ್ಚ್ ವಾರಂಟ್​ ಹಿಡಿದು ಕಚೇರಿಗೆ ದಾಳಿ ಇಟ್ಟ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ‘ಕೆಂಪೇಗೌಡ 2’ ಸಿನಿಮಾ ನಿರ್ಮಾಣ ಮಾಡಿದ್ದರು. ಬಾಣಸವಾಡಿ ಎಸಿಪಿ ಎಸಿಪಿ ಲಿಂಗಪ್ಪ ಬಿ. ಸಕ್ರಿ ಮತ್ತು ಗೋವಿಂದಪುರ ಠಾಣಾ ಇನ್​ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

    ಬಿಗ್​ಬಾಸ್​ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಮಾರ್ಚ್ 5ರಂದು ದಾಳಿ ನಡೆಸಿ, ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಮಸ್ತಾನ್​ ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ನಿರ್ಮಾಪಕ ಶಂಕರೇಗೌಡ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಶಂಕರೇಗೌಡ ನಡೆಸುತ್ತಿದ್ದ ಪಾರ್ಟಿಗಳಿಗೆ ಮಸ್ತಾನ್​ ಡ್ರಗ್ಸ್​ ಸರಬರಾಜು ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದಾನೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಾಯುವುದು ಹೇಗೆಂದು ಗೂಗಲ್​ ಸರ್ಚ್​ ಮಾಡಿ ನೇಣಿಗೆ ಕೊರಳೊಡ್ಡಿದ ಎಂಬಿಬಿಎಸ್​ ವಿದ್ಯಾರ್ಥಿ

    ಮಹಿಳಾ ದಿನಾಚರಣೆಯಂದೇ ನಡೆಯಿತು ದುರಂತ!; ಹೆಣ್ಣು ಮಗುವನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts