ಬೆಂಗಳೂರು: ಬೂದಿಮುಚ್ಚಿದ ಕೆಂಡದಂತೆ ಕೆಲದಿನಗಳ ಮಟ್ಟಿಗೆ ಹೊಗೆಯಾಡುತ್ತಿದ್ದ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇದೀಗ ಮತ್ತೆ ಧಗ್ಗೆಂದು ಬೆಂಕಿ ಹೊತ್ತಿಕೊಂಡಿದೆ. ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನಲ್ಲಿ ಮತ್ತೆ ಸಂಚಲನ ಉಂಟಾಗಿದ್ದು, ನಿರ್ಮಾಪಕರೊಬ್ಬರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಅವರಿಗೆ ಸುತ್ತಿಕೊಂಡಿದ್ದ ಡ್ರಗ್ಸ್ ಮಾಫಿಯಾ ಪ್ರಕರಣ ಕೆಲದಿನಗಳ ಮಟ್ಟಿಗೆ ತಣ್ಣಗಾದಂತೆ ಅನಿಸಿದರೂ ಇದೀಗ ನಿರ್ಮಾಪಕರೊಬ್ಬರಿಗೆ ಸುತ್ತಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಾವೇರಿಸಿದೆ.
ನಿರ್ಮಾಪಕ ಶಂಕರೇಗೌಡ ಅವರು ಈಗ ಡ್ರಗ್ಸ್ ಮಾಫಿಯಾ ಸುಳಿಗೆ ಸಿಲುಕಿದ್ದು, ಗೋವಿಂದಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಂಜಯನಗರದ ಆರ್ಎಂವಿ ಕ್ಲಬ್ ಬಳಿ ನಾಲ್ಕಂತಸ್ತಿನ ಕಟ್ಟದಲ್ಲಿ ಇರುವ ಕಚೇರಿ ಮೇಲೆ ದಾಳಿ ಮಾಡಿರುವ ಪೊಲೀಸರು, ಕಚೇರಿ ಹಾಗೂ ಕಾರುಗಳ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ಮನೆಯಲ್ಲಿದ್ದಾಗ ಸರ್ಚ್ ವಾರಂಟ್ ಹಿಡಿದು ಕಚೇರಿಗೆ ದಾಳಿ ಇಟ್ಟ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ‘ಕೆಂಪೇಗೌಡ 2’ ಸಿನಿಮಾ ನಿರ್ಮಾಣ ಮಾಡಿದ್ದರು. ಬಾಣಸವಾಡಿ ಎಸಿಪಿ ಎಸಿಪಿ ಲಿಂಗಪ್ಪ ಬಿ. ಸಕ್ರಿ ಮತ್ತು ಗೋವಿಂದಪುರ ಠಾಣಾ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಬಿಗ್ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಮನೆ ಮೇಲೆ ಮಾರ್ಚ್ 5ರಂದು ದಾಳಿ ನಡೆಸಿ, ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಮಸ್ತಾನ್ ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ನಿರ್ಮಾಪಕ ಶಂಕರೇಗೌಡ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಶಂಕರೇಗೌಡ ನಡೆಸುತ್ತಿದ್ದ ಪಾರ್ಟಿಗಳಿಗೆ ಮಸ್ತಾನ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದಾನೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಸಾಯುವುದು ಹೇಗೆಂದು ಗೂಗಲ್ ಸರ್ಚ್ ಮಾಡಿ ನೇಣಿಗೆ ಕೊರಳೊಡ್ಡಿದ ಎಂಬಿಬಿಎಸ್ ವಿದ್ಯಾರ್ಥಿ
ಮಹಿಳಾ ದಿನಾಚರಣೆಯಂದೇ ನಡೆಯಿತು ದುರಂತ!; ಹೆಣ್ಣು ಮಗುವನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ