More

    ಗುಂಡ್ಯ ಬಳಿ ಗುಂಡೇಟು; ಪೊಲೀಸರತ್ತ ತಲವಾರ್ ಬೀಸಿದ ಕೊಲೆ ಆರೋಪಿ ಖಲೀಲ್​ ಕಾಲಿಗೆ ಫೈರಿಂಗ್​..

    ಮಂಗಳೂರು: ನಿನ್ನೆಯಷ್ಟೇ ಕೊಲೆ ಮಾಡಿದ್ದ ಆರೋಪಿ ಮೇಲೆ ಇಂದು ಪೊಲೀಸರು ಫೈರಿಂಗ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗುಂಡ್ಯ ಬಳಿ ಈ ಫೈರಿಂಗ್ ನಡೆದಿದೆ. ನಿನ್ನೆ ಬಂಟ್ವಾಳದ ಮೇಲ್ಕಾರ್ ಬಳಿ ನಡೆದಿದ್ದ ಉಮಾರ್ ಫಾರೂಕ್ ಕೊಲೆ ಆರೋಪಿ ಖಲೀಲ್ ಮತ್ತು ತಂಡ ಕಾರಿನಲ್ಲಿ ತೆರಳುತ್ತಿತ್ತು. ಇದನ್ನು ತಿಳಿದ ಪೊಲೀಸರು ಚೇಸ್​ ಮಾಡಿ ಕಾರಿಗೆ ಅಡ್ಡ ಹಾಕಿದ್ದಾರೆ.

    ಆದರೆ ಚೇಸ್​ ಮಾಡಿರುವ ಬಂಟ್ವಾಳ ಎಸ್​​ಐಗಳಾದ ಅವಿನಾಶ್ ಮತ್ತು ಪ್ರಸನ್ನ ಟೀಂ ಮೇಲೆ ಆರೋಪಿ ಖಲೀಲ್​ ತಲವಾರ್ ಬೀಸಿದ್ದಾನೆ. ಆಗ ಎಸ್​ಐ ಅವಿನಾಶ್​ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭ ಮತ್ತೊಬ್ಬ ಎಸ್​ಐ ಪ್ರಸನ್ನ ಅವರಿಗೆ ಸಣ್ಣ ಗಾಯವಾಗಿದ್ದು, ಈ ವೇಳೆ ಹಫೀಜ್​ ಹಾಗೂ ಇನ್ನೊಬ್ಬ ಆರೋಪಿ ಪರಾರಿ ಆಗಿದ್ದಾರೆ.

    ಆರೋಪಿಗಳು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್‌ ಫಾರೂಕ್​ನನ್ನು ನಿನ್ನೆ ಬಂಟ್ವಾಳ ತಾಲೂಕಿನ ಮೇಲ್ಕಾರ್ ಸಮೀಪದ ಬೊಂಡೋಡಿ ಎಂಬಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು. ಮಾರಕಾಯುಧಗಳಿಂದ ದಾಳಿ ಮಾಡಿ ಅವರು ಕೊಲೆ ಮಾಡುತ್ತಿರುವ ದೃಶ್ಯದ ವಿಡಿಯೋ ತುಣುಕು ಕೂಡ ಪೊಲೀಸರಿಗೆ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts