ನವದೆಹಲಿ : ದರೋಡೆ ನಡೆಸಿದ ಆರೋಪದ ಮೇರೆಗೆ ಮೀರತ್ನ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ಬಂಟಿ ಔರ್ ಬಬ್ಲಿ ಬಾಲಿವುಡ್ ಚಲನಚಿತ್ರದಿಂದ ಸ್ಫೂರ್ತಿ ಪಡೆದು, ಈ ದಂಪತಿ ಜನ ಸಾಮಾನ್ಯರ ಮನೆಗೆ ಹೋಗಿ ಅಲ್ಲಿ ಸಹಾಯ ಯಾಚಿಸುತ್ತಾರೆ. ಆ ಮನೆಯವರು ಒಳಗೆ ಹೋದ ನಂತರ ಅವರಿಗೆ ಚಾಕು ತೋರಿಸಿ, ಬೆದರಿಕೆಯೊಡ್ಡಿ ದರೋಡೆ ಮಾಡುತ್ತಾರೆ.
ಗಾಂಧಿ ನಗರ ನಿವಾಸಿ ಪೊಲೀಸರಿಗೆ ದೂರು ನೀಡಿದ ನಂತರ ಇವರಿಬ್ಬರನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ಬಾಬಿ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಈ ದೂರುದಾರನ ಮನೆಗೆ ಬಂದು ನೀರು ಕೇಳಿದಾಗ ಅವರು ನೀರು ಕೊಟ್ಟು ಮರಳಿ ಅಡುಗೆ ಮನೆಗೆ ಹೋದಾಗ ಅಡುಗೆ ಕೋಣೆಗೆ ಹೋದಾಗ, ಆ ಆರೋಪಿ ಅವರನ್ನು ಚಾಕು ತೋರಿಸಿ ಬೆದರಿಕೆಯೊಡ್ಡಿದ.
ಇದನ್ನೂ ಓದಿ: 5 ವರ್ಷದ ಬಾಲಕನ ಪ್ರಾಮಾಣಿಕತೆಯ ಅಂಗಡಿಯನ್ನೇ ದೋಚಿದ ಅಪ್ರಮಾಣಿಕರು!
ಪಾಯಲ್ ಎಂದು ಗುರುತಿಸಲ್ಪಟ್ಟ ಮಹಿಳೆ ಹಿಂದಿನಿಂದ ಹಿಡಿದುಕೊಂಡಳು. ಅವರು ಅಲ್ಮಿರಾದ ಕೀಲಿಗಳನ್ನು ಅವರಿಂದ ಕಸಿದುಕೊಂಡು. ನಗದು, ಮೊಬೈಲ್ ಫೋನ್, ಬೆಳ್ಳಿ ಕಣಕಾಲುಗಳು, ಕನ್ನಡಕ ಮತ್ತು ಉಂಗುರಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು.
ಕಳೆದ 13 ತಿಂಗಳಿನಿಂದ ಆರೋಪಿ ಬಾಬಿ ಕೆಲಸ ಮಾಡುತ್ತಿದ್ದ ಘಜಿಯಾಬಾದ್ನ ಮೆಹ್ರೌಲಿ ವ್ಯಾಪ್ತಿಯಲ್ಲಿ ಪೊಲೀಸರು ಹಲವು ಬಾರಿ ದಾಳಿ ನಡೆಸಿದ್ದಾರೆ. ದಂಪತಿ ಮೀರತ್ನಲ್ಲಿ ತಲೆಮರೆಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದ್ದು. ನಂತರ ಅವರನ್ನು ಮೀರತ್ನ ಮಾವಾನಾದಲ್ಲಿ ಬಂಧಿಸಲಾಯಿತು. ಬಂಧಿತರಿಂದ ಫೋನ್ಗಳು ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ದರೋಡೆ ಮಾಡಿದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಕೊಡಲಿಯಿಂದ ಕೊಚ್ಚಿ ಕೊಲೆಗೈದ, ಆ ತಲೆ ಹಿಡಿದುಕೊಂಡು ಬಂದು ಪೊಲೀಸರಿಗೆ ಶರಣಾದ