ನವದೆಹಲಿ: ಬೆಂಗಳೂರು ರೈಲ್ವೆ ಸಬರ್ಬನ್ ಅಡಿಗಲ್ಲು ಕಾರ್ಯಕ್ರಮ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಉದ್ಘಾಟನೆ ಮತ್ತಿತರ ಮಹತ್ವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಡಿಸೆಂಬರ್ನಲ್ಲಿ ಪ್ರಧಾನಿ ಮೋದಿ ಎರಡು ಬಾರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಈ ವಿಚಾರ ತಿಳಿಸಿದರು.
“ನಾನು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಆಮಂತ್ರಣ ನೀಡಿದೆ. ಎರಡೆರಡು ಕಾರ್ಯಕ್ರಮ ಎರಡು ಬಾರಿ ಮಾಡಿ. ಎರಡು ಬಾರಿ ಕರ್ನಾಟಕಕ್ಕೆ ಬರುತ್ತೇನೆ ಎಂದು ಡಿಸೆಂಬರ್ ತಿಂಗಳಲ್ಲಿ ಎರಡು ದಿನಾಂಕ ನೀಡುವುದಾಗಿ ಮೋದಿ ಹೇಳಿದರು. ನಿರ್ದಿಷ್ಟ ದಿನಾಂಕವನ್ನು ಅವರ ಕಾರ್ಯಾಲಯದವರು ತಿಳಿಸಲಿದ್ದಾರೆ” ಎಂದು ಬೊಮ್ಮಾಯಿ ತಿಳಿಸಿದರು.
ಗೇಟ್ ಹತ್ತಿ ಇಳಿಯುವ ಸಾಹಸದಲ್ಲಿ ಕೈಬೆರಳು ತುಂಡರಿಸಿಕೊಂಡ ಬಾಲಕ