ಜೈಪುರ: ಕಾಂಗ್ರೆಸ್ನಿಂದ ರೆಬಲ್ ಆಗಿ ಹೋಗಿದ್ದ ಸಚಿನ್ ಪೈಲಟ್ ಇದೀಗ ಮರಳಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಜತೆ ಮತ್ತೆ ಕೈ ಜೋಡಿಸಿದ್ದಾರೆ.
ಆದರೆ ಹೀಗೆ ಪಕ್ಷಕ್ಕೆ ಮರಳಿರುವ ಸಚಿನ್ ಪೈಲಟ್ ಬೇಡಿಕೆಗಳ ಪಟ್ಟಿ ತುಸು ದೊಡ್ಡದಾಗಿದೆ. ಚಿನ್ ಪೈಲಟ್ ತಮ್ಮ ಐವರು ಆಪ್ತ ಎಂಎಲ್ಎಗಳ ಲಿಸ್ಟ್ನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ನೀಡಿದ್ದು, ಅವರೆಲ್ಲರಿಗೂ ನಿರ್ಣಾಯಕ ಹುದ್ದೆಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. ಹಾಗೇ ಉಪಮುಖ್ಯಮಂತ್ರಿ ಹುದ್ದೆಯನ್ನೂ ತಮ್ಮ ಬಣಕ್ಕೆ ನೀಡುವಂತೆ ಕೇಳಿದ್ದಾರೆ.
ಸಚಿನ್ ಪೈಲಟ್ ಅವರು ಈ ಹಿಂದೆ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದವರು. ಅವರು ಬಂಡಾಯ ಎದ್ದ ನಂತರ ಆ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿತ್ತು. ಇದೀಗ ತಮ್ಮ ಬಣಕ್ಕೆ ಎರಡು ಸಚಿವ ಸ್ಥಾನ, ಡಿಸಿಎಂ ಹುದ್ದೆ ಹಾಗೂ ಇಬ್ಬರಿಗೆ ಕ್ಯಾಬಿನೆಟ್ ಹುದ್ದೆಗಳನ್ನು ನೀಡಬೇಕು ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ ನಡೆದಿದ್ದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಜಾಗೊಂಡಿದ್ದ ಶಾಸಕರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಮತ್ತೆ ಪಕ್ಷಕ್ಕೆ ವಾಪಸ್ ಆಗಲಿದ್ದಾರೆ ಹಾಗೂ ಅವರಿಗೂ ಪ್ರಮುಖ ಸ್ಥಾನ ಮಾನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆದಿಪುರುಷನಾಗಿ ಪ್ರಭಾಸ್; ಕನ್ನಡದಲ್ಲೂ ಬರಲಿದೆ ಈ 3ಡಿ ಸಿನಿಮಾ!
ಸಚಿನ್ ಪೈಲಟ್ ಅವರಿಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸಂಪೂರ್ಣ ಬೆಂಬಲ ಇದೆ ಹಾಗೂ ಗೆಹ್ಲೋಟ್ ಜತೆಗಿನ ಮಾತುಕತೆಯಲ್ಲೂ ಪೈಲಟ್ ಅವರೇ ಮೇಲುಗೈ ಸಾಧಿಸಿದ್ದಾರೆ. ಹಾಗಾಗಿ ಅವರೆಲ್ಲ ಬೇಡಿಕೆಗಳೂ ಈಡೇರಿಲಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಇದು ಕಥೆಯಲ್ಲ…. ಹದಿನಾರು ವರ್ಷ ಜೈಲು ವಾಸ ಅನುಭವಿಸಿದವ ಈಗ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರದ ಪ್ರಾಧ್ಯಾಪಕ…!