ಹುಬ್ಬಳ್ಳಿ: ವಿವಿಧ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯಿಂದ ಪಿಂಚಣಿದಾರರಿಗೆ ತ್ವರಿತವಾಗಿ ಪಿಂಚಣಿ ಲಭಿಸುತ್ತಿದೆ. ಪಿಂಚಣಿದಾರರು ಬಯಸಿದರೆ ಮೊಬೈಲ್ ಆಪ್ ಅಥವಾ ಚೆಕ್ ಮೂಲಕ ಪಿಂಚಣಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಪರ ಜಿಲ್ಲಾ ಖಜಾನಾಧಿಕಾರಿ ಉಲ್ಲಾಸ ನಿಂಗರೆಡ್ಡಿಯವರ್ ತಿಳಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಪಿಂಚಣಿ ಅದಾಲತ್ನಲ್ಲಿ ಅವರು ಮಾತನಾಡಿದರು.
ಖಜಾನೆಯಿಂದ ಪಿಂಚಣಿ ಪಾವತಿ ವಿಳಂಬವಾಗುವ ಸಾಧ್ಯತೆ ಕಡಿಮೆ. ಸಕಾಲದಲ್ಲಿ ಪಿಂಚಣಿ ಪಾವತಿಸಲು ವ್ಯವಸ್ಥೆ ರೂಪಿಸಲಾಗಿದೆ. ಸೂಕ್ತ ದಾಖಲೆಗಳನ್ನು ಖಜಾನೆ ಕಚೇರಿಗೆ ನೀಡಿದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಎಸ್ಬಿಐ ಮುಖ್ಯ ವ್ಯವಸ್ಥಾಪಕ ಗಜಾನನ ಚಲವಾದಿ, ಬ್ಯಾಂಕ್ ಆಫ್ ಬರೋಡ ಸಹಾಯಕ ವ್ಯವಸ್ಥಾಪಕ ಮಹಾಂತೇಶ ತಳವಾರ, ಸಿಂಡಿಕೇಟ್ ಬ್ಯಾಂಕ್ ಸಹಾಯಕ ವ್ಯಸ್ಥಾಪಕ ರವಿಕಿರಣ ರೆಡ್ಡಿ, ಖಜಾನೆ ಮುಖ್ಯ ಲೆಕ್ಕಿಗ ಆರ್.ಎಸ್. ಸುಬ್ಬಾಪುರಮಠ ಇತರರು ಇದ್ದರು.