More

    ಕಂಗನಾ ಜತೆ ಕೆಲಸ ಮಾಡುವುದಕ್ಕೆ ಶ್ರೀರಾಮ್​ ಹಿಂದೇಟು … ಯಾಕೆ?

    ಒಂದು ಕಡೆ ಕಂಗನಾ ರಣಾವತ್​ ತಮ್ಮ ಮಾತುಗಳಿಂದ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಒಂದು ಕಡೆ ಅವರು ಚಿತ್ರರಂಗದಲ್ಲಿ ದೊಡ್ಡದಾಗಿ ಬೆಳೆಯುತ್ತಿದ್ದಂತೆಯೇ, ಇನ್ನೊಂದು ಕಡೆ ಅವರ ಜತೆಗೆ ಕೆಲಸ ಮಾಡುವುದಕ್ಕೆ ಜನ ಹೆದರುತ್ತಿದ್ದಾರೆ.

    ಇದನ್ನೂ ಓದಿ: VIDEO: ಸುಶಾಂತ್​ ಸಿಂಗ್​ರ ಅನ್​ಸೀನ್​ ವಿಡಿಯೋಗಳು ವೈರಲ್​; ನೋಡಿದರೆ ಶಾಕ್​ ಆಗದೆ ಇರದು !

    ಹೌದು, ಕಂಗನಾ ರಣಾವತ್​ ಅವರ ಮಾತು, ನಿಷ್ಠುರತೆ ಮತ್ತು ಕಾಲುಕೆರೆದುಕೊಂಡು ಜಗಳಕ್ಕೆ ಹೋಗುವ ಸ್ವಭಾವದಿಂದ ಚಿತ್ರರಂಗದವರು ಬೇಸತ್ತಿದ್ದಾರೆ. ಅವರ ಸಹವಾಸವೇ ಬೇಡ ಎಂದು ದೂರವಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಹಿರಿಯ ಛಾಯಾಗ್ರಾಹಕ ಪಿ.ಸಿ. ಶ್ರೀರಾಮ್​.

    ದಕ್ಷಿಣ ಭಾರತದಲ್ಲಿ ತಮ್ಮ ಛಾಯಾಗ್ರಹಣದಿಂದ ದೊಡ್ಡ ಹೆಸರು ಮಾಡಿರುವ ಮತ್ತು ‘ನಾಯಗನ್​’, ‘ಅಂಜಲಿ’, ‘ತಿರುಡಾ ತಿರುಡಾ’ ಸೇರಿದಂತೆ ಹಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪಿ.ಸಿ. ಶ್ರೀರಾಮ್​ ಅವರಿಗೆ ಕಂಗನಾ ಅಭಿನಯದ ಚಿತ್ರವೊಂದರ ಛಾಯಾಗ್ರಹಣ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತಂತೆ. ಆದರೆ, ಕಂಗನಾ ಅವರ ಇತ್ತೀಚಿನ ವರ್ತನೆ ನೋಡಿ ಬೇಸತ್ತಿರುವ ಶ್ರೀರಾಮ್​ ಅವರ ಜತೆಗೆ ಕೆಲಸ ಮಾಡಬಾರದೆಂದು ನಿರ್ಧರಿಸಿ ಚಿತ್ರದಿಂದ ಹಿಂದೆ ಸರಿದಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಕಂಗನಾ ಅಭಿನಯದ ಚಿತ್ರವೊಂದರ ಛಾಯಾಗ್ರಹಣ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ಕಂಗನಾ ಇರುವುದರಿಂದ ಯಾಕೋ ಕೆಲಸ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ಹಾಗಾಗಿ ಚಿತ್ರ ಒಪ್ಪಲಿಲ್ಲ’ ಎಂದು ಅವರು ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ಸೆ.15ಕ್ಕೆ ಆನ್ಲೈನ್​ ಮೂಲಕ ಡಾ. ವಿಷ್ಣುವರ್ಧನ್​ ಸ್ಮಾರಕದ ಭೂಮಿಪೂಜೆ

    ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ‘ನಿಮ್ಮಂತಹ ಲೆಜೆಂಡ್​ಗಳ ಜತೆಗೆ ಕೆಲಸ ಮಾಡುವ ಅವಕಾಶ ಕಳೆದುಕೊಂಡಿದ್ದೇನೆ. ಇದು ಸಂಪೂರ್ಣವಾಗಿ ನನ್ನ ನಷ್ಟ. ನನ್ನ ಜತೆಗೆ ಕೆಲಸ ಮಾಡುವುದಕ್ಕೆ ನಿಮ್ಮ ಮನಸ್ಸು ಯಾಕೆ ಒಪ್ಪಲಿಲ್ಲವೋ ಗೊತ್ತಿಲ್ಲ. ಆದರೆ, ನೀವು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀರಾ ಎಂಬ ನಂಬಿಕೆ ನನಗಿದೆ. ಆಲ್​ ದಿ ಬೆಸ್ಟ್​’ ಎಂದು ಹಾರೈಸಿದ್ದಾರೆ.

    ನಾಳೆ ನಿನ್ನ ಅಹಂಕಾರ ಮುರೀತೀನಿ … ಉದ್ಧವ್​ಗೆ ಕಂಗನಾ ಚಾಲೆಂಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts