ಸಿಂಧನೂರು: ದೇವಿಕ್ಯಾಂಪ್ ಮತ್ತು ಚನ್ನಳ್ಳಿಯಲ್ಲಿ ಮನೆ ಮನೆಗೆ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ ಹಾಗೂ ಕರಪತ್ರವನ್ನು ವಿತರಿಸಲಾಯಿತು. ಜ.22 ರಂದು ಮನೆಯಲ್ಲಿ ಮಂತ್ರಾಕ್ಷತೆ ಪೂಜಿಸುವಂತೆ ಮನವಿ ಮಾಡಲಾಯಿತು. ಮಂತ್ರಾಕ್ಷತೆೆ, ರಾಮನ ಭಾವಚಿತ್ರವನ್ನು ಭೀಮರಾಜಕ್ಯಾಂಪ್ನಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಜಿ.ಶ್ರೀನಿವಾಸ, ಚಿಟ್ಟಿಬಾಬು, ಕೆ.ಸೋಮುಲು, ಆಂಜನೇಯ ಇದ್ದರು.