More

    ಜೆಡಿಎಸ್ ನಾಶ ಎಂದಿಗೂ ಸಾಧ್ಯವಿಲ್ಲ

    ಬೀರೂರು: ಪ್ರಾದೇಶಿಕ ಪಕ್ಷವನ್ನು ಅಳಿಸಿಹಾಕಲು ಕೆಲವು ರಾಷ್ಟ್ರೀಯ ಪಕ್ಷಗಳು ಯತ್ನಿಸುತ್ತಿವೆ. ಆದರೂ ಪಕ್ಷವನ್ನು ಸದೃಢವಾಗಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ತಿಳಿಸಿದರು.

    ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಹಳ್ಳಿಯ ಹುರುಪಿನ ಹುರಿಯಾಳು ಕಾರ್ಯಕ್ರಮ ಹಾಗೂ ಗ್ರಾಪಂ ಚುನಾವಣೆಯ ವಿಜೇತ ಮತ್ತು ಪರಾಜಿತರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    50 ವರ್ಷಗಳಿಂದ ರಾಜಕೀಯ ರಂಗದಲ್ಲಿ ಎಲ್ಲವನ್ನೂ ಗಮನಿಸಿದ್ದೇನೆ. ಸ್ವಾಭಿಮಾನ, ಗೌರವಕ್ಕೆ ಧಕ್ಕೆ ತಂದಾಗಲೂ ಧೃತಿಗೆಡದೆ ಸಂಘಟಿತ ಹೋರಾಟ ಮಾಡಿದ್ದೇನೆ. ನನ್ನೊಂದಿಗೆ ಮಾಜಿ ಶಾಸಕ ವೈಎಸ್​ವಿ ದತ್ತ ಕೂಡ ನಿಸ್ವಾರ್ಥ ಸೇವೆ ನೀಡಲು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಧಮೇಗೌಡ ಅವರ ಸಾವು ತಡೆಯಲಾಗದ ನೋವು ತಂದಿದೆ ಎಂದರು.

    ಧಮೇಗೌಡ ಅವರ ತಂದೆ ಲಕ್ಷ್ಮಯ್ಯ ಕೂಡ ನನಗೆ ಬಲಭುಜವಾಗಿ ನಿಂತು ಪಕ್ಷ ಸಂಘಟನೆಯಲ್ಲಿ ಕೈಜೋಡಿಸಿದ್ದರು. ಆದರೆ ಅವರನ್ನು ಮಂತ್ರಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಧಮೇಗೌಡ ಅವರನ್ನು ವಿಧಾನಪರಿಷತ್ ಉಪಸಭಾಪತಿಯಾಗಿ ಮಾಡಿದರೂ ಪರಿಷತ್​ನಲ್ಲಿ ಘಟನೆ ಅವರನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿ ದುರ್ಮರಣಕ್ಕೆ ತುತ್ತಾಗುವಂತೆ ಮಾಡಿತು ಎಂದು ಭಾವುಕರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts