More

    ದೇಶ ವಿಭಜನೆ ಎಂದಿಗೂ ಆಗಬಾರದಿತ್ತು, ಇದೊಂದು ಐತಿಹಾಸಿಕ ತಪ್ಪು: ಅಸಾದುದ್ದೀನ್​ ಓವೈಸಿ

    ಹೈದರಾಬಾದ್: ಭಾರತ ಹಾಗೂ ಪಾಕಿಸ್ತಾನದ ವಿಭಜನೆ ಎಂದಿಗೂ ಸಂಭವಿಸಬಾರದಿತ್ತು. ಇದೊಂದು ಐತಿಹಾಸಿಕ ತಪ್ಪು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಹೈದರಾಬಾದ್​ ಕ್ಷೇತ್ರದ ಸಂಸದ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಐತಿಹಾಸಿಕವಾಗಿ ಭಾರತ ಒಂದು ದೇಶವಾಗಿತ್ತು. ದುರಾದೃಷ್ಠವಶಾತ್​ ಇದು ವಿಭಜನೆಯಾಯಿತು. ಅದು ಸಂಭವಿಸಬಾರದಿತ್ತು ಎಂದಿದ್ದಾರೆ

    ಐತಿಹಾಸಿಕವಾಗಿ ಭಾರತ ಒಂದು ದೇಶವಾಗಿತ್ತು ಮತ್ತು ದುರದೃಷ್ಟವಶಾತ್ ಇದು ವಿಭಜನೆಯಾಯಿತು. ಈ ವಿಚಾರವಾಗಿ ನಾನು ಚರ್ಚೆಯಲ್ಲಿ ಭಾಗವಹಿಸಲು ಸಿದ್ದನಿದ್ದೇನೆ. ದೇಶ ವಿಭಜನೆಗೆ ಯಾರು ಕಾರಣ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಆ ಸಮಯದಲ್ಲಿ ಮಾಡಿದ ತಪ್ಪನ್ನು ನಾನು ಒಂದು ಸಾಲಿನಲ್ಲಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ವಿಸ್ತೃತ ಚರ್ಚೆಯ ಅಗತ್ಯವಿದೆ.

    ಇದನ್ನೂ ಓದಿ: ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ; ಬಿಜೆಪಿ ಸಂಸದನಿಗೆ ಲೀಗಲ್ ನೋಟಿಸ್ ಕಳುಹಿಸಿದ ಮಹುವಾ ಮೊಯಿತ್ರಾ

    ಇದಕ್ಕೆ ಸಂಬಂಧಿಸಿದಂತೆ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್​ ಕಲಾಂ ಅಜಾದ್​ ಅವರು ಬರೆದಿರುವ ‘ಇಂಡಿಯಾ ವಿನ್ಸ್​ ಫ್ರೀಡಂ’ ಪುಸ್ತಕವನ್ನು ಒಮ್ಮ ಓದಿ. ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ದೇಶ ವಿಭಜನೆಯ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಂತೆ ಅವರು ಕಾಂಗ್ರೆಸ್​ ನಾಯಕರಿಗೆ ಹೇಗೆ ಮನವಿ ಮಾಡಿದರೆಂಬುದರ ಕುರಿತು ವಿವರಿಸಲಾಗಿದೆ.

    ದೇಶದ ವಿಭಜನೆ ಯಾವುದೇ ಕಾರಣಕ್ಕೂ ಆಗಬಾರದಿತ್ತು. ಆಗ ಅಲ್ಲಿದ್ದ ಎಲ್ಲಾ ನಾಯಕರು ದೇಶ ವಿಭಜನೆಗೆ ಪ್ರಮುಖ ಕಾರಣರಾಗಿದ್ದರು. ಆ ಸಮಯದಲ್ಲಿದ್ದ ಇಸ್ಲಾಂ ಧರ್ಮಗುರುಗಳು ಹಾಗೂ ವಿದ್ವಾಂಸರು ಎರಡು ದೇಶಗಳ ವಿಭಜನೆಯನ್ನು ವಿರೋಧಿಸಿದ್ದರು. ಆದರೂ ಕಾಂಗ್ರೆಸ್​ನವರು ದೇಶವನ್ನು ವಿಭಜಿಸುವ ಮೂಲಕ ಐತಿಹಾಸಿಕ ತಪ್ಪು ಮಾಡಿದ್ದಾರೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಹೈದರಾಬಾದ್​ ಕ್ಷೇತ್ರದ ಸಂಸದ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts