ಪರಶುರಾಮಪುರ: ಕ್ವಿಂಟಾಲ್ ಈರುಳ್ಳಿಗೆ 1,800 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ಬರಗಾಲದಿಂದ ಬೇಸತ್ತ ನಾವು ಲಭ್ಯವಿರುವ ನೀರಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿದ್ದೇವೆ.
15 ದಿನಗಳಿಂದ ಒಂದೆಡೆ ಸಂಗ್ರಹಿಸಿಟ್ಟು ಮಾರುಕಟ್ಟೆಯಲ್ಲಿ ದರ ಹೆಚ್ಚಾಗಬಹುದೆಂಬ ನಿರೀಕ್ಷೆಯಿಂದ ಕಾಯುತ್ತಿದ್ದೇವೆ. ಆದರೆ, ಬೆಲೆ ಹೆಚ್ಚಾಗುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಈರುಳ್ಳಿ ಬೆಳೆಗಾರರಾದ ಜಿ.ಸ್ವಾಮಿ, ಸಂಜೀವಪ್ಪ, ಅಪ್ಪಾರೆಡ್ಡಿ, ಎಚ್.ಹನುಮಂತರೆಡ್ಡಿ, ಶಿವಾನಂದ, ಮಹಾಂತೇಶ ಎಚ್ಚರಿಸಿದ್ದಾರೆ.