More

    ನಾಲೆ ದುರಸ್ತಿಗೆ ಶಾಸಕರ ಸೂಚನೆ

    ಪರಶುರಾಮಪುರ: ತಿಮ್ಮಣ್ಣನಾಯಕನಕೋಟೆ ಬಳಿ ಹಾದು ಹೋದ ಶಿಡ್ಲಯ್ಯನಕೋಟೆ ಫೀಡರ್ ಚಾನಲ್‌ನ ಎಡ-ಬಲ ನಾಲೆಯನ್ನು ಶಾಸಕ ಟಿ.ರಘುಮೂರ್ತಿ ಭಾಮನುವಾರ ಅಧಿಕಾರಿಗಳ ಜತೆ ಪರಿಶೀಲಿಸಿದದರು.

    ತೂಬು ಇದ್ದಾಗ್ಯೂ ಅವೈಜ್ಞಾನಿಕವಾಗಿ ನಾಲೆ ಒಡೆದು ನೀರು ಹರಿಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಡ-ಬಲ ನಾಲೆಗಳ ದುರಸ್ತಿ ಜತೆಗೆ ಗಿಡ-ಗಂಟಿ ತೆರವುಗೊಳಿಸಲು ಸೂಚಿಸಿದರು.

    ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ, ಸದಸ್ಯ ಆರ್.ಟಿ.ನಿಂಗಣ್ಣ, ಗ್ರಾಮಸ್ಥರಾದ ತಿಪ್ಪೇಸ್ವಾಮಿ, ರಂಗಣ್ಣ, ಚಂದ್ರಣ್ಣ, ಚಿತ್ರದುರ್ಗ ಜಿಲ್ಲಾ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳಾದ ಗುರುಬಸವರಾಜು, ರವಿಕುಮಾರ, ಶ್ರೀಧರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts