ಪರಶುರಾಮಪುರ: ಶಿಡ್ಲಯ್ಯನಕೋಟೆಯಿಂದ ಪರಶುರಾಮಪುರಕ್ಕೆ ನೀರು ಹರಿದು ಬರುವ ಫೀಡರ್ ಕಾಲುವೆಯನ್ನು ಸ್ವಚ್ಛಗೊಳಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಕಂದೀಕೆರೆ ಸುರೇಶಬಾಬು ತಿಳಿಸಿದರು.
ಸಮೀಪದ ಟಿಎನ್ಕೋಟೆ ಗ್ರಾಮಕ್ಕೆ ಭೇಟಿ ನೀಡಿ ಫೀಡರ್ ಚಾನಲ್ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಫೀಡರ್ ಕಾಲುವೆಯನ್ನು ಕೂಡಲೇ ದುರಸ್ತಿಗೊಳಿಸಿ ಈಗ ಹರಿದು ಬರುವ ನೀರು ಸರಾಗವಾಗಿ ಬರುವಂತೆ ಉಪಯುಕ್ತ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ತಾಪಂ ಸದಸ್ಯ ಕರಡಪ್ಪ, ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ, ಅರ್ಚಕ ಪ್ರೊ.ಶಿವಲಿಂಗಪ್ಪ, ಕಾಂಗ್ರೆಸ್ ಮುಖಂಡ ಕಂದೀಕೆರೆ ಸುರೇಶಬಾಬು, ಕೆ.ಸಿ.ಗೌಡ್ರು ಇತರರಿದ್ದರು.