More

    ದೇಶವೇ ಲಾಕ್​ಡೌನ್​ನಲ್ಲಿರುವಾಗ ಪತ್ನಿ, ಮಕ್ಕಳಿಗೆ ಗುಂಡಿಕ್ಕಿ ವ್ಯಕ್ತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

    ಪಾಣಿಪತ್​: ಪರವಾನಗಿ ಪಡೆದಿದ್ದ ಪಿಸ್ತೂಲ್​ನಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಲ್ಲದೆ, ತಾನೂ ಶೂಟ್​ ಮಾಡಿಕೊಂಡು​ 36 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ಪಾಣಿಪತ್​ನ ರಾಜ್​ ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ರೇಷನ್​ ಡಿಪೋ ಮಾಲೀಕ ಅನಿಲ್​ ಶರ್ಮಾ ಎಂದು ಗುರುತಿಸಲಾಗಿದೆ. ಆತನ ಪತ್ನಿ ಪೂನಮ್​(35), ಮಗಳು ಪ್ರಾಚಿ(11) ಹಾಗೂ ಮಗ ಅಂನ್ಶು(7) ಕೂಡ ಗುಂಡಿನ ದಾಳಿಗೆ ಮೃತರಾಗಿದ್ದಾರೆ. ಮೂಲತಃ ಹರಿಯಾಣದ ಜಿಂದ್​ ನಗರ ಸಮೀಪದ ಮೊರ್ಖಿ ಗ್ರಾಮದ ನಿವಾಸಿಯಾಗಿದ್ದ ಅನಿಲ್​, ತಮ್ಮ ಕುಟುಂಬ ಸಮೇತ ರಾಜ್​ ನಗರದ ಮೂರನೇ ಬೀದಿಯಲ್ಲಿ ವಾಸವಿದ್ದರು.

    ಅನಿಲ್​ ಯಾಕಿಂತಹ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂಬದು ತಕ್ಷಣ ತಿಳಿಯಲಿಲ್ಲ. ಆದರೆ, ಈ ಬಗ್ಗೆ ಮಾತನಾಡಿರುವ ಪೂನಮ್​ ಸಹೋದರ ಪವನ್​ ಕುಮಾರ್​, ಪೂನಮ್​ ಅವ ಮಾವ ನಫೆ ಸಿಂಗ್​, ಅತ್ತೆ ಅಂಗೋರಿ ದೇವೆ, ಭಾವ ನವೀನ್​, ಆತನ ಪತ್ನಿ ಕವಿತ, ಅನಿಲ್​ ಸೋದರ ಸಂಬಂಧಿ ಮೋಹನ್​ ಮತ್ತು ಮಹೆಂದರ್​ ಕಳೆದ ಕೆಲ ವರ್ಷಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಆಸ್ತಿ ವಿಚಾರದಲ್ಲಿ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿದ್ದಾರೆ.

    ಅನಿಲ್​ ಅವರ ತಂದೆ ಮತ್ತು ತಾಯಿ ಶನಿವಾರ ರಾತ್ರಿಯೂ ಕೂಡ ಅನಿಲ್​ಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕವೇ ಅನಿಲ್​, ಪೂನಮ್​, ಪ್ರಾಚಿ ಮತ್ತು ಅನ್ಶುರನ್ನು ತನ್ನ ಪಿಸ್ತೂಲ್​ನಿಂದ ಹತ್ಯೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಪೂನಮ್​ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅನಿಲ್​ ಕುಟುಂಬದ ಆರು ಮಂದಿಯ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ, ಅನಿಲ್​ ತಂದೆ-ತಾಯಿ ಆರೋಪವನ್ನು ಅಲ್ಲಗೆಳೆದಿದ್ದಾರೆ.

    ಭಾನುವಾರ ಬೆಳಗ್ಗೆ ಅನಿಲ್​ ಮನೆಗೆ ಬಂದಂತಹ ವ್ಯಕ್ತಿ ಸಾಕಷ್ಟು ಬಾರಿ ಅನಿಲ್​ರನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ಬರದಿದ್ದನ್ನು ಕಂಡು ಹತ್ತಿರದಲ್ಲೇ ವಾಸವಿದ್ದ ಅನಿಲ್​ ಕುಟುಂಬಕ್ಕೆ ಮಾಹಿತಿ ನೀಡುತ್ತಾರೆ. ಬಳಿಕ ನರೆ ಮನೆಯ ಛಾವಣಿ ಮೂಲಕ ಅನಿಲ್​ ಮನೆಗೆ ಜಿಗಿದು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

    ಬಾಲಿವುಡ್​ ಸಿಂಗರ್​ ಕನ್ನಿಕಾರನ್ನು ಬಿಡದೇ ಕಾಡುತ್ತಿರುವ ಕರೊನಾ: ಅಷ್ಟಕ್ಕೂ ಏನಾಗಿದೆ?

    ತುಂಬು ಗರ್ಭಿಣಿಯಾಗಿದ್ರೂ ದೇಶದ ಮೊದಲ ಕರೊನಾ ಟೆಸ್ಟಿಂಗ್​ ಕಿಟ್​ ತಯಾರಿಸಿದ ಮಹಿಳೆ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts