ಆನೇಕಲ್: ಮಾರಕ ಖಾಯಿಲೆಯೊಂದು ಕಾಣಿಸಿಕೊಂಡು ಹಲವಾರು ರಾಸುಗಳು ಮೃತಪಟ್ಟಿರುವ ಘಟನೆ ಬೆಂಗಳೂರಿನ ಆನೇಕಲ್ ಬಳಿ ನಡೆದಿದೆ.
ಇದನ್ನೂ ಓದಿ: ಜಾಲತಾಣದಲ್ಲಿ ಅವಹೇಳನಕಾರಿ ಬರಹ: IPS ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಪತ್ನಿಯಿಂದಲೇ ದೂರು
ಒಟೈಟೀಸ್ ಎಂಬ ಮಾರಕ ಖಾಯಿಲೆ ಜಾನುವಾರುಗಳಲ್ಲಿ ಹರಡಿದ್ದು, ಇದರಿಂದಾಗಿ ರೈತರು ಚಿಂತೆಗೊಳಗಾಗಿದ್ದಾರೆ. ಈ ಹಿಂದೆ ತಮಿಳುನಾಡು ಭಾಗದಲ್ಲಿ ಮಾರಕವಾಗಿ ಹರಡಿದ್ದ ಈ ಖಾಯಿಲೆ ಬಂದರೆ ಹಸು ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗಿದೆ.
ಈ ಖಾಯಿಲೆಗೆ ಔಷಧ ಇಲ್ಲದೇ ರೈತರ ಪರದಾಡುತ್ತಿದ್ದು, ಕಳೆದ ವರ್ಷ ಎಮ್.ಸಿ.ಎಫ್ (Malignant Catarrhval Favor) ಎಂಬುದು ವೈರಲ್ ಖಾಯಿಲೆ ಎಂದು ವಿಜ್ಞಾನಿಗಳು ಹೇಳಿದ್ದರು. ಈ ಜ್ವರವು ವಿರಳವಾದ ರೋಗವಾಗಿದ್ದು, ಒಂದೇ ಜಾನುವಾರುವನ್ನು ಬಾಧಿಸುತ್ತದೆ ಆದರೆ ಕೆಲವೊಮ್ಮೆ ಜಾನುವಾರುಗಳ ಗುಂಪಿನಲ್ಲಿ ತೀವ್ರವಾಗಿ ಬಾಧಿಸುತ್ತದೆ. ಅಲ್ಲದೇ ಈ ರೋಗ ತಗುಲಿದ ನಂತರ ಪ್ರಾರಂಭದಲ್ಲಿ ಕಿವಿ ಸೋರಲು ಪ್ರಾರಂಭವಾಗಿ ಬಳಿಕ ತಲೆ ನೋವು ಕಾಣಿಸಿಕೊಂಡು ಹಸು ಸೊರಗುತ್ತದೆ. ಅನಂತರ ರಾಸುಗಳ ಮೂಗು,ಬಾಯಿ,ಕಿವಿ ಸೋರಿಕೆಯಾಗುವುದು ಈ ರೋಗದ ಲಕ್ಷಣಗಳಾಗಿವೆ.
ಈ ಕಾಯಿಲೆಯ ಮುಂಜಾಗ್ರತಾ ಕ್ರಮಗಳು ಇಂತಿವೆ:
ಖಾಯಿಲೆ ಕಾಣಿಸಿಕೊಂಡಾಗ ರಾಸುಗಳನ್ನು ಪ್ರತ್ಯೇಕವಾಗಿ ಕಟ್ಟಿಹಾಕಬೇಕು.
ಪಶು ವೈದ್ಯರಿಂದ ನಿರಂತರ ಚಿಕಿತ್ಸೆ ಕೊಡಿಸಬೇಕು.
ಆಂಟಿ ಬಯೋಟೆಕ್, ಐವರ್ ಮೆಕ್ಟೀನ್ ಮುಂತಾದ ಇಂಜೆಕ್ಷನ್ಗಳನ್ನು ಅಗತ್ಯವಿರುವಾಗ ಚುಚ್ಚಿಸಬೇಕು.
ಖಾಯಿಲೆ ಇರುವಂತಹ ಹಸು ತಿಂದ ಆಹಾರ ಪದಾರ್ಥವನ್ನು, ಆರೋಗ್ಯದಿಂದಿರುವ ಹಸುವಿಗೆ ನೀಡಬಾರದು.
ಈ ಮಾರಕ ಕಾಯಿಲೆಯು ಆನೇಕಲ್ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಹಬ್ಬಿದ್ದು, ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ವಣಕನಹಳ್ಳಿ, ದಿನ್ನೂರು ಸೇರಿ ಹಲವೆಡೆ ರಾಸುಗಳು ಮೃತಪಟ್ಟಿವೆ.(ಏಜೆನ್ಸೀಸ್)