ನವದೆಹಲಿ: ಯಾವುದೇ ದೇಶವಾಗಿರಲಿ. ಆಯಾ ದೇಶ ಹಾಗೂ ರಾಜ್ಯಗಳ ವಿಶೇಷ ದಿನಗಳಂದು, ಹಬ್ಬಹರಿದಿನಗಳಂದು ರಾಷ್ಟ್ರ ನಾಯಕರು ಶುಭಾಶಯ ಕೋರುವುದು ಅಥವಾ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿಕೊಳ್ಳುವುದು ವಾಡಿಕೆ. ಆದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ಹಬ್ಬದ ಮರುದಿನ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕೋರಿ, ಅಪಹಾಸ್ಯಕ್ಕೀಡಾಗಿದ್ದಾರೆ.
ಮುಸ್ಲಿಮರು ವಿಶ್ವಾದಾದ್ಯಂತ ಬುಧವಾರ ರಾತ್ರಿ ಶಬ್ ಎ ಬರಾತ್ ಹಬ್ಬ ಆಚರಿಸಿದ್ದರು. ಅದು ಮುಸ್ಲಿಮರ ಪಾಲಿನ ಹಿರಿಯರ ಹಬ್ಬವಾಗಿರುತ್ತದೆ. ಅಂದು ಗತಿಸಿದ ಹಿರಿಯರೆಲ್ಲರ ಆತ್ಮಗಳಿಗೆ ಶಾಂತಿ ಕೋರಿ, ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ಸ್ವತಃ ಮುಸ್ಲಿಮ್ ಸಮುದಾಯದವರಾಗಿದ್ದರೂ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಹಬ್ಬದ ಮರುದಿನ ಅಂದರೆ ಗುರುವಾರ ರಾತ್ರಿ ಶಬ್ ಎ ಬರಾತ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕೋರಿ ಟ್ವೀಟ್ ಮಾಡಿದ್ದರು. ಇದನ್ನು ಕಂಡ ಟ್ವೀಟಿಗರು ಇಮ್ರಾನ್ ಖಾನ್ ಅವರ ಸಂದೇಶವನ್ನು ಖಂಡಿಸಿದರು, ಅಪಹಾಸ್ಯ ಮಾಡಿದರು.
ತಪ್ಪಿನ ಅರಿವಾಗುತ್ತಲೇ ಇಮ್ರಾನ್ ಖಾನ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಆದರೆ ಅಷ್ಟರಲ್ಲೇ ಆಗಬಹುದಾಗಿದ್ದ ಅನಾಹುತ ಎಲ್ಲವೂ ಆಗಿ ಹೋಗಿತ್ತು.
ನಾನು ಮನೆಯಲ್ಲೇ ಇರುವೆ ಎಂಬ ಸ್ಲೇಟ್ ಹಿಡಿಸಿ, ಸಾಮಾಜಿಕ ಜಾಲತಾಣಕ್ಕೆ ಹಾಕಿಸಿ ವಿನೂತನ ಶಿಕ್ಷೆ, ಪೊಲೀಸರ ಪ್ರಯೋಗ