More

    ಶೀಘ್ರದಲ್ಲೇ ತೆರೆಗೆ ಬರಲಿದೆ ಮತ್ತೊಂದು ಶುಭಮಂಗಳ

    ಬೆಂಗಳೂರು: ಚಂದನವನದಲ್ಲೀಗ ಮತ್ತೆ ‘ಶುಭಮಂಗಳ’ ಚಿತ್ರ ತೆರೆಗೆ ಬರುತ್ತಿದೆ. ಹಾಗೆಂದ ಮಾತ್ರಕ್ಕೆ 1975ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶುಭಮಂಗಳ’ ನಿರ್ದೇಶನದ ಚಿತ್ರವಲ್ಲ. ಬದಲಿಗೆ ಇದು ಸಂತೋಷ್ ಗೋಪಾಲ್ ಆಕ್ಷನ್-ಕಟ್ ಹೇಳಿರುವ ‘ಶುಭಮಂಗಳ. ಸಿದ್ಧಾರ್ಥ್ ಮಾಧ್ಯಮಿಕ್, ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ ಸೇರಿ ಬಹುತಾರಾಗಣದ ಈ ಚಿತ್ರ ಈಗಾಗಲೇ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದೆ. ಆದರೆ, ಶೀರ್ಷಿಕೆ ಮಾತ್ರ ಅಂತಿಮವಾಗಿರಲಿಲ್ಲ. ಇದೀಗ ಅದನ್ನೂ ಮುಗಿಸಿಕೊಂಡಿದ್ದು, ಶೀಘ್ರದಲ್ಲಿ ತೆರೆಗೆ ಬರಲಿದೆಯಂತೆ ಚಿತ್ರ.

    ವಿಶೇಷ ಏನೆಂದರೆ, ‘ಶುಭಮಂಗಳ’ ಚಿತ್ರದ ಶೀರ್ಷಿಕೆಯನ್ನು ಹಿರಿಯ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದ್ದಾರೆ. ಅವರ ಕೈಯಿಂದ ಶೀರ್ಷಿಕೆ ಅನಾವರಣಗೊಂಡಿದ್ದರಿಂದ ಇಡೀ ತಂಡ ಸಂಭ್ರಮದಲ್ಲಿದೆ. ‘ಭಯದ ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ‘ಶುಭಮಂಗಳ’ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಇದೀಗ ಅದೇ ಶೀರ್ಷಿಕೆಯನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. 15 ವರ್ಷದ ಹಿಂದೆ ಭಗವಾನ್ ಅವರ ಗರಡಿಯಲ್ಲಿ ಕಲಿಯುತ್ತಿದ್ದೆ. ಇದೀಗ ಅವರಿಂದಲೇ ಶೀರ್ಷಿಕೆ ಅನಾವರಣವಾಗಿ, ಮೆಚ್ಚುಗೆಯೂ ಸಿಕ್ಕಿದೆ’ ಎನ್ನುವ ಮೇಘನಾ, ಚಿತ್ರದ ಬಗ್ಗೆಯೂ ಹೇಳಿಕೊಳ್ಳುತ್ತಾರೆ.

    ‘ಮದುವೆ ಛತ್ರದಲ್ಲಿ ನಡೆಯುವ ಕಥೆಯಿದು. ಆ ಛತ್ರದಲ್ಲಿ ಬೇರೆ ಬೇರೆ ಏಜ್ ಗ್ರೂಪ್​ಗಳ ನಡುವಿನ ಪ್ರೇಮಕಥೆಯೂ ಇದರಲ್ಲಿದೆ. ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆ. ಇನ್ನೇನು ಶೇ. 100 ಆಸನ ಭರ್ತಿಗೆ ಅವಕಾಶ ನೀಡಿದರೆ ಚಿತ್ರ ತೆರೆಗೆ ತರಲಿದ್ದೇವೆ’ ಎಂಬುದು ಅವರ ಮಾತು. ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ ಮಾಡಿದರೆ, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

    ಪ್ರಿಯ ಬೆಂಗಳೂರಿಗರೇ.. ಮನೆಯ ಹೆಂಗಸರ ಮಾತು ಕೇಳಿ: ಎಡಿಜಿಪಿ ಭಾಸ್ಕರ್ ರಾವ್

    ಹೆಂಡತಿಯ ಊರಿಗೆ ಬಂದಿದ್ದವ ಜೀವವನ್ನೇ ಕಳೆದುಕೊಂಡ; ವಾಪಸ್​ ಹೊರಟಾಗ ಎದುರಾದ ಯಮರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts