More

    ತೆರೆಯ ಮೇಲೆ ರೈತ ಸಂಘರ್ಷ, ‘ಕೊಳಗ’

    ಬೆಂಗಳೂರು: ರೈತರು ಮತ್ತು ಭೂಮಾಲೀಕರ ನಡುವೆ ನಡೆಯುವ ಘರ್ಷಣೆಯ ಕುರಿತಾಗಿ ಕನ್ನಡದಲ್ಲಿ ಈಗಾಗಲೇ ಕೆಲವು ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ ‘ಕೊಳಗ’ ಎಂಬ ಹೊಸ ಚಿತ್ರ ಸಹ ಸೇರಿದೆ. ನಾ. ಡಿಸೋಜ ಅವರ ಕಾದಂಬರಿ ಆಧರಿಸಿ ನಿರ್ವಣವಾಗುತ್ತಿರುವ ಈ ಚಿತ್ರವನ್ನು ಗೂರಲಕೆರೆ ಪ್ರಸನ್ನ ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಅವರ ಪತ್ನಿ ನಿಶಿತಾ ಗೌಡ ನಟನೆಯ ಜತೆಗೆ ನಿರ್ವಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

    ಮಿಕ್ಕಂತೆ ಆದಿ ಲೋಕೇಶ್, ಕಿಶೋರ್ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಪ್ರಸನ್ನ, ‘20 ವರ್ಷಗಳ ಕಾಲ ನಡೆದಂಥ ದೊಡ್ಡ ಹೋರಾಟದ ಕಥನ ಇದು. ಹಿಂದೆ ರೈತ ತನ್ನ ಭೂಮಿಯ ಕುರಿತು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿ ಈ ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಚಿತ್ರಕ್ಕೆ ರಾಜಗುರು ಹೊಸಕೋಟೆ ಸಂಗೀತ ಸಂಯೋಜಿಸುತ್ತಿದ್ದಾರೆ.

    ಬೆಂಗಳೂರಿನಲ್ಲಿ ಬೈಕ್‌ ಸವಾರರ ಜಾಲಿರೈಡ್‌ಗೆ ಐದು ಕಾರುಗಳು ‘ಬಲಿ’! ಸರಣಿ ಅಪಘಾತದಿಂದ ಆತಂಕ

    ಕೃಷಿ ಕಾಯ್ದೆಗಳ ಬಿಕ್ಕಟ್ಟು: 29ರಂದು ಸರ್ಕಾರದ ಜತೆ ಸಭೆ

    ಕಿಲಾಡಿ ಜತೆ ಪ್ರಣೀತಾ ಥೈಯಾ ಥಕ; ರವಿತೇಜ ಚಿತ್ರದ ಹಾಡಿನಲ್ಲಿ ಹೆಜ್ಜೆ..

    ಸಿಡಿದೆದ್ದ ಸ್ಯಾಂಡಲ್​ವುಡ್​, ಅಭಿಮಾನಿಗಳ ಆಕ್ರೋಶ; ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಪ್ರಕರಣ ಬಗ್ಗೆ ಚುರುಕಾದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts