‘ದುನಿಯಾ’ ಚಿತ್ರದಲ್ಲಿ ‘ಲೂಸ್ ಮಾದ’ ಪಾತ್ರದ ಮೂಲಕ ರಾತ್ರೋರಾತ್ರಿ ಬೇಡಿಕೆಯ ನಟರಾದವರು ಯೋಗಿ. ಇಂದು ಅವರ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ಗಳ ತರಹ ಯೋಗಿ, ಸಹ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಈ ಮಧ್ಯೆ, ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರತಂಡವು ಯೋಗಿ ಹಬ್ಬಕ್ಕೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಆ ಚಿತ್ರವೇ ಬಿಡುಗಡೆಯಾಗಿರಬೇಕಿತ್ತು. ಆದರೆ, ಚಿತ್ರೀಕರಣ ಮುಗಿದಿದ್ದರೂ, ಲಾಕ್ಡೌನ್ನಿಂದ ಚಿತ್ರ ಬಿಡುಗಡೆಯಾಗುವುದಕ್ಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ ಹಿಂದೆ ಸೂರಜ್ ಪಾಂಚೋಲಿ ಕೈವಾಡ ಇದೆಯಾ?
ಹೀಗಿರುವಾಗಲೇ, ಯೋಗಿ ಹುಟ್ಟುಹಬ್ಬದ ಸಂದರ್ಭದಲ್ಲಿ, ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ, ಚಿತ್ರತಂಡವು ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದೆ. ಅಷ್ಟೇ ಅಲ್ಲ, ಈ ‘ಒಂಬತ್ತೇನೇ ದಿಕ್ಕು’ ಏನಿರಬಹುದು ಎಂಬ ಪ್ರಶ್ನೆಗೆ, ಈ ಟೀಸರ್ ಮೂಲಕ ಉತ್ತರ ಸಿಕ್ಕಿದೆ. ಪುರಾಣ ಪ್ರಸಿದ್ಧ ವಿಗ್ರವೊಂದರ ಕಳ್ಳತನದ ಕುರಿತಾಗಿ ಈ ಚಿತ್ರ ಸಾಗಲಿದೆ ಎಂದು ಟೀಸರ್ ಮೂಲಕ ಸೂಕ್ಷ್ಮವಾಗಿ ಹೇಳಲಾಗಿದೆ. ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಈ ಟೀಸರ್ ಬಿಡುಗಡೆ ಮಾಡಲಾಗಿದೆ.
‘ಒಂಬತ್ತನೇ ದಿಕ್ಕು’ ಚಿತ್ರವನ್ನು ದಯಾಳ್ ಪದ್ಮನಾಭನ್ ಬರೆದು ನಿರ್ದೇಶಿಸಿದ್ದು, ಯೋಗಿ, ಅದಿತಿ ಪ್ರಭುದೇವ, ಸಾಯಿಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗುರು ದೇಶಪಾಂಡೆ ಮತ್ತು ದಯಾಳ್ ಪದ್ಮನಾಭನ್ ಜತೆಯಾಗಿ ನಿರ್ಮಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಸಿಎಂ ಜೀವನ ಸಿನಿಮಾ ಆಗ್ತಿದೆ; ಚಿತ್ರದ ಬಜೆಟ್ ಎಷ್ಟೆಂದು ಊಹಿಸಿದ್ದೀರಾ?
ಈ ಮಧ್ಯೆ ಕಳೆದ ವಾರ, ಚಿತ್ರದ ಸೆನ್ಸಾರ್ ಸಹ ಆಗಿದೆ. ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಸೆನ್ಸಾರ್ ಸರ್ಟಿಫಿಕೇಟ್ ಸಹ ಸಿಕ್ಕಿದ್ದು ಆಗಿದೆ. ಚಿತ್ರದ ಬಿಡುಗಡೆ ಯಾವಾಗ ಎಂಬುದು ಚಿತ್ರತಂಡಕ್ಕೂ ಗೊತ್ತಿಲ್ಲ. ಏಕೆಂದರೆ, ಕರೊನಾ ಭಯದಿಂದ ಇನ್ನೂ ಚಿತ್ರಪ್ರದರ್ಶನ ಶುರುವಾಗಿಲ್ಲ. ಶುರುವಾದರೂ ಚಿತ್ರ ಬಿಡುಗಡೆ ಮಾಡಿದರೆ, ಜನ ಬರುತ್ತಾರಾ ಇಲ್ಲವಾ ಎಂಬ ಸ್ಪಷ್ಟತೆ ಇಲ್ಲ.
ಹಾಗಾಗಿ ಚಿತ್ರವನ್ನು ಸೆನ್ಸಾರ್ ಮಾಡಿಸಿಟ್ಟುಕೊಂಡಿರುವ ಚಿತ್ರತಂಡದವರು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಪರಿಸ್ಥಿತಿ ತಿಳಿಯಾದ ನಂತರ, ನೋಡಿಕೊಂಡು ಚಿತ್ರ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಅದು ಈ ವರ್ಷದ ಕೊನೆಗೂ ಆಗಬಹುದು, ಮುಂದಿನ ವರ್ಷ ಆದರೂ ಆಶ್ಚರ್ಯವಿಲ್ಲ. ಅಲ್ಲಿಯವರೆಗೂ ಅಭಿಮಾನಿಗಳು ಖುಷಿಯಾಗಿರಲಿ ಎಂದು ಈ ಟೀಸರ್ ಬಿಡುಗಡೆ ಮಾಡಲಾಗಿದೆ.
ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲ!; ನಟಿ ಹರಿಪ್ರಿಯಾ ಯಾವುದರ ಬಗ್ಗೆ ಹೇಳ್ತಿರಬಹುದು?