More

    ಮಳೆ ನೀರಲ್ಲಿ ಕೊಚ್ಚಿ ಹೋದ ವೃದ್ಧೆ; ಕಾಲುವೆಯಲ್ಲಿ ಬೈಕ್​ ಕೊಚ್ಚಿಕೊಂಡು ಹೋದರೂ ಪ್ರಾಣಾಪಾಯದಿಂದ ಪಾರಾದ ಸವಾರ

    ಕೋಲಾರ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಕಾಲುವೆಯೊಂದರಲ್ಲಿ ವೃದ್ಧೆಯೊಬ್ಬರ ಜೊತೆಗೆ ಬೈಕ್​ ಕೂಡ ಕೊಚ್ಚಿಕೊಂಡು ಹೋಗಿದ್ದರೆ, ಬೈಕ್​ ಚಲಾಯಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎ. ಕೊತ್ತೂರು ಬಳಿ ಈ ಘಟನೆ ಸಂಭವಿಸಿದೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಸ್ವಗ್ರಾಮದ ಅಡ್ಡಗಲ್​ನ ಫಾರ್ಮ್ ಹೌಸ್ ಬಳಿ ಇರುವ ಬೃಹತ್ ಕಾಲುವೆಯಲ್ಲಿ ಈ ಅವಘಡ ಸಂಭವಿಸಿದೆ. ಮಳೆ ನೀರು ತುಂಬಿ ಹರಿಯುತ್ತಿದ್ದ ಈ ಕಾಲುವೆಯಲ್ಲಿ 65 ವರ್ಷದ ಅಮರಾವತಮ್ಮ ಎಂಬ ವೃದ್ಧೆ ಕೊಚ್ಚಿಕೊಂಡು ಹೋಗಿದ್ದಾರೆ.

    ಇದನ್ನೂ ಓದಿ: ವೈಯಕ್ತಿಕ ದ್ವೇಷಕ್ಕೆ ಮರ್ಮಾಂಗವೇ ಕಟ್!; ಅದನ್ನೇ ಕತ್ತರಿಸಿ ಕ್ರೌರ್ಯ ಮೆರೆದ ಮೂವರು ದುರುಳರು..

    ರಮೇಶ್ ಕುಮಾರ್ ಅವರ ಆಪ್ತ ರೆಡ್ಡಪ್ಪ ಎಂಬುವವರ ಪತ್ನಿ ಅಮರಾವತಮ್ಮ ಹಾಗೂ ಬಾಬು ಎಂಬವರು ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಬಾಬು ಮರದ ಕೊಂಬೆ ರಕ್ಷಣೆ ಪಡೆದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಗೃಹ ಸಚಿವ ಹುಚ್ಚ, ನಿಮ್ಹಾನ್ಸ್​ಗೆ ಸೇರಿಸ್ಬೇಕೆಂದ ಡಿ.ಕೆ.ಶಿವಕುಮಾರ್​; ಡಿಕೆಶಿಯನ್ನು ನಿಮ್ಹಾನ್ಸ್​ಗೆ ಸೇರಿಸಿದ್ರೂ ಪ್ರಯೋಜನವಿಲ್ಲ ಎಂದ ಆರಗ

    ಸಿದ್ದರಾಮಯ್ಯ ಅವರಿಗೆ ಮತ್ತೆ ಕಾಗೆ ಕಂಟಕ?; ಈ ಬಾರಿ ಕಚೇರಿ ಬಳಿಗೇ ಬಂದು ಕುಳಿತ ಕಾಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts