ಕೋಲಾರ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಕಾಲುವೆಯೊಂದರಲ್ಲಿ ವೃದ್ಧೆಯೊಬ್ಬರ ಜೊತೆಗೆ ಬೈಕ್ ಕೂಡ ಕೊಚ್ಚಿಕೊಂಡು ಹೋಗಿದ್ದರೆ, ಬೈಕ್ ಚಲಾಯಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎ. ಕೊತ್ತೂರು ಬಳಿ ಈ ಘಟನೆ ಸಂಭವಿಸಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಸ್ವಗ್ರಾಮದ ಅಡ್ಡಗಲ್ನ ಫಾರ್ಮ್ ಹೌಸ್ ಬಳಿ ಇರುವ ಬೃಹತ್ ಕಾಲುವೆಯಲ್ಲಿ ಈ ಅವಘಡ ಸಂಭವಿಸಿದೆ. ಮಳೆ ನೀರು ತುಂಬಿ ಹರಿಯುತ್ತಿದ್ದ ಈ ಕಾಲುವೆಯಲ್ಲಿ 65 ವರ್ಷದ ಅಮರಾವತಮ್ಮ ಎಂಬ ವೃದ್ಧೆ ಕೊಚ್ಚಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ವೈಯಕ್ತಿಕ ದ್ವೇಷಕ್ಕೆ ಮರ್ಮಾಂಗವೇ ಕಟ್!; ಅದನ್ನೇ ಕತ್ತರಿಸಿ ಕ್ರೌರ್ಯ ಮೆರೆದ ಮೂವರು ದುರುಳರು..
ರಮೇಶ್ ಕುಮಾರ್ ಅವರ ಆಪ್ತ ರೆಡ್ಡಪ್ಪ ಎಂಬುವವರ ಪತ್ನಿ ಅಮರಾವತಮ್ಮ ಹಾಗೂ ಬಾಬು ಎಂಬವರು ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಬಾಬು ಮರದ ಕೊಂಬೆ ರಕ್ಷಣೆ ಪಡೆದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಸಿದ್ದರಾಮಯ್ಯ ಅವರಿಗೆ ಮತ್ತೆ ಕಾಗೆ ಕಂಟಕ?; ಈ ಬಾರಿ ಕಚೇರಿ ಬಳಿಗೇ ಬಂದು ಕುಳಿತ ಕಾಕ!