ಧಾರವಾಡ: ಭಾರೀ ಚರ್ಚೆಗೆ ಗ್ರಾಸವಾಗಿರುವ ನುಗ್ಗಿಕೇರಿ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಬಗ್ಗೆ ಬಂಧನಕ್ಕೊಳಗಾಗಿರುವವರಿಂದ ಸತ್ಯ ಬಯಲಾಗಿದೆ.
ಕಲ್ಲಂಗಡಿ ಒಡೆಯುವ ಸಂದರ್ಭದಲ್ಲಿ ಮಾಲೀಕ ನಬೀಸಾಬ್ ಅಂಗಡಿಯಲ್ಲೇ ಇರಲಿಲ್ಲ, ಅವರ ಬದಲಾಗಿ ಬೇರೆಯರು ಇದ್ದರು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಮಂಗಳವಾರ ಬಂಧಿತ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಅವರು, ಘಟನೆ ಬಗ್ಗೆ ಅವರ ಬಾಯಿಯಿಂದಾನೇ ಉಳಿದ ಸತ್ಯ ಬರಬೇಕಿದೆ.ವಕೀಲರ ಜೊತೆ ಕೋರ್ಟ್ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದೇವೆ ಎಂದರು.
ನುಗ್ಗಿಕೇರಿ ಘಟನೆ ರಕ್ತಪಾತ ಆಗಿದೆ ಅನ್ನೋದೇನಿಲ್ಲ ಮೊದಲೇ ದೇವಸ್ಥಾನದ ಪ್ರಮುಖರಿಗೆ ಮನವಿ ಕೊಡಲಾಗಿತ್ತು ಅವರು ಒಂದು ನಿರ್ಣಯ ತೆಗೆದುಕೊಂಡಿದ್ದರೇ ಈ ರೀತಿ ಆಗುತ್ತಿರಲಿಲ್ಲ ಎಂದರು.
ನಲಪಾಡ್ ಇಲ್ಲಿಗೆ ಬಂದು ಸ್ಪಂದಿಸುವುದೇನು, ಮುಸ್ಲಿಂ ಎನ್ನುವ ಕಾರಣಕ್ಕೆ ಇಲ್ಲಿ ಬಂದಿದ್ದಾರೆ. ಚಂದ್ರು ಕೊಲೆಯಾದರೆ ಅಲ್ಲಿ ಹೋಗಿಲ್ಲ ಕೇವಲ ಹಣ್ಣು ಹಾಳು ಮಾಡಿದ್ದಕ್ಕೆ ಇಷ್ಟು ಬೊಂಬಡಿ ಹೊಡಿಯಬೇಕಾ. ರೈತರು ತಮ್ಮ ಬೆಳೆ ರಸ್ತೆ ಮೇಲೆ ಎಸೆದಿದ್ದರಲ್ಲವಾ ಆಗ ಎಲ್ಲಿದ್ದೀರಿ. ಸಿದ್ದರಾಮಯ್ಯ ಅವಧಿಯಲ್ಲೇ ರೈತರ ಆತ್ಮಹತ್ಯೆ ಹೆಚ್ಚಾಗಿದೆಯಲ್ಲ ಅದಕ್ಕೇನು ಉತ್ತರಿಸುತ್ತೀರಿ ಎಂದಿದ್ದಾರೆ.
ಧರ್ಮಯುದ್ಧವಿಲ್ಲ, ಕಾನೂನು ಕಾಪಾಡಲು ಬದ್ಧ ಮಂಗಳೂರಿನಲ್ಲಿ ಸಿಎಂ ಸ್ಪಷ್ಟನುಡಿ
ವಾಹನ ಚಾಲಕರೇ ಎಚ್ಚರ! ನೀವು ತಪ್ಪು ಮಾಡದಿದ್ರೂ ನಿಮ್ಮ ವಾಹನಕ್ಕೆ ಬಿದ್ದಿರುತ್ತದೆ ದಂಡ